Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈಸೂರು ಅಭಿಮಾನಿಯ ಪ್ರೀತಿಗೆ ಮನಸೋತ ಅಪ್ಪು
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಮೈಸೂರಿನ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 'ಯುವರತ್ನ' ಸಿನಿಮಾದ ಚಿತ್ರೀಕರಣದ ವೇಳೆ ಅಲ್ಲಿನ ಜನರಿಂದ ಸಿಕ್ಕ ಬೆಂಬಲಕ್ಕೆ ಥ್ಯಾಂಕ್ಯು ಎಂದಿದ್ದಾರೆ.
ಮೈಸೂರಿನ ಯುವರಾಜ ಮಹಾರಾಜ ಕಾಲೇಜಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು, ಅಲ್ಲಿಗೆ ಬಂದ ಅಭಿಮಾನಿಗಳಲ್ಲಿ ಸಾಕಷ್ಟು ಜನರನ್ನು ಭೇಟಿ ಮಾಡಿ ಫೋಟೋ ನೀಡಿದ್ದೇನೆ. ಫೋಟೋ ನೀಡಲು ಆಗದೆ ಇರುವ ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ. ಎಲ್ಲರೂ ನಮ್ಮ ಅಭಿಮಾನಿಗಳಿಗೆ ಎಂದು ಅಪ್ಪು ಹೇಳಿದ್ದಾರೆ
ಮೈಸೂರಿನ ಒಬ್ಬ ಅಭಿಮಾನಿಯ ಅಭಿಮಾನ ಪುನೀತ್ ಗೆ ವಿಶೇಷವಾಗಿ ಕಂಡಿದೆ. ಆತನ ಮನೆಗೆ ಅಪ್ಪು ಭೇಟಿ ನೀಡಿದ್ದಾರೆ. ಆ ಮನೆಯ ಮಾಲಿಕ ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಂತೆ.
'ಯುವರತ್ನ' ಚಿತ್ರದಲ್ಲಿ 'ಸಾಹೋ' ಸಾಹಸ ನಿರ್ದೇಶಕ
ತಮ್ಮ ಮನೆಗೆ ಕಸ್ತೂರಿ ನಿವಾಸ ಎಂದು ಹೆಸರಿಟ್ಟಿರುವ ಅವರು ಮನೆಯ ಎಲ್ಲ ಕಡೆ ರಾಜ್ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ದೇವರ ಮನೆಯಲ್ಲಿ ದೇವರ ಜೊತೆಗೆ ರಾಜ್ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ರಾಜ್ ಅಭಿಮಾನಿಗಳನ್ನು ದೇವರು ಎಂದಿದ್ದು, ಅದೇ ರೀತಿ ಅಭಿಮಾನಿಯೂ ರಾಜ್ ರನ್ನು ದೇವರಂತೆ ಕಾಣುತ್ತಿದ್ದಾರೆ.
ಇಂತಹ ಅಭಿಮಾನಿಗಳಿಗೆ ಪುನೀತ್ ಧನ್ಯವಾದ ಹೇಳಿದ್ದಾರೆ. ಅಪ್ಪಾಜಿ ಹಾಗೂ ನಮ್ಮ ಮೇಲೆ ಈ ಮಟ್ಟದ ಪ್ರೀತಿ ತೋರಿಸುವ ಮೈಸೂರು ಮತ್ತು ಕರ್ನಾಟಕದ ಎಲ್ಲ ಅಭಿಮಾನಿಗಳಿಗೆ ಚಿರಋಣಿ ಎಂದಿದ್ದಾರೆ.
ವಿಡಿಯೋ ನೋಡಲು ಕ್ಲಿಕ್ ಮಾಡಿ