Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಸುದೀಪ್ ಜತೆ ಸಿನಿಮಾ ಮಾಡ್ತಾರಾ ರಾಗಿಣಿ ದ್ವಿವೇದಿ?
ಸುದೀಪ್ ಜತೆ 'ವೀರ ಮದಕರಿ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ನಟಿ ರಾಗಿಣಿ ದ್ವಿವೇದಿ. 'ಕೆಂಪೇಗೌಡ' ಚಿತ್ರದಲ್ಲಿ ಈ ಜೋಡಿ ಮತ್ತೆ ತೆರೆಯ ಮೇಲೆ ಅಭಿಮಾನಿಗಳನ್ನು ಮುದಗೊಳಿಸಿತ್ತು. ಈ ನಡುವೆ ಅನೇಕ ನಟರ ಜತೆ ಸಿನಿಮಾ ಮಾಡಿದ ರಾಗಿಣಿ, ಸೋಲೋ ಹಿರೋಯಿನ್ ಆಗಿ ಹಲವು ಆಕ್ಷನ್ ಚಿತ್ರಗಳಲ್ಲಿಯೂ ಸೈ ಎನಿಸಿಕೊಂಡರು.
Recommended Video
ಸದ್ಯಕ್ಕೀಗ ರಾಗಿಣಿ ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ನಿಜ. ಲಾಕ್ ಡೌನ್ ಕಾರಣದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ನಿತ್ಯವೂ ಅವರು ತಮ್ಮ ತಂಡದೊಂದಿಗೆ ಆಹಾರ ಸಾಮಗ್ರಿಗಳನ್ನು ಕೊಂಡೊಯ್ದು ವಿತರಣೆ ಮಾಡುತ್ತಿದ್ದಾರೆ. ತಮ್ಮ ಈ ಕೆಲಸ ಮತ್ತಷ್ಟು ಜನರಿಗೆ ಪ್ರೇರೇಪಣೆ ನೀಡಲಿ ಎನ್ನುವುದು ಅವರ ಉದ್ದೇಶ. ಇದಕ್ಕಾಗಿ ಅವರು ತಮ್ಮ ಸಮಾಜಮುಖಿ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮೊದಲ ಬಾರಿ ಲೈವ್ ಬಂದಿದ್ದೇನೆ
ಹೀಗಾಗಿ ಲಾಕ್ ಡೌನ್ನಲ್ಲಿಯೂ ಬಿಜಿಯಾಗಿರುವ ರಾಗಿಣಿ, ಅದರ ನಡುವೆ ಬಿಡುವು ಮಾಡಿಕೊಂಡು ಫಿಲ್ಮಿ ಬೀಟ್ನಲ್ಲಿ ಲೈವ್ ನಡೆಸಿಕೊಟ್ಟರು. ತಮ್ಮ ಸಾಮಾಜಿಕ ಜಾಲತಾಣದ ಖಾತೆ ಹೊರತುಪಡಿಸಿ ಇದೇ ಮೊದಲ ಬಾರಿಗೆ ಬೇರೆ ಮಾಧ್ಯಮದಲ್ಲಿ ಲೈವ್ ಬಂದಿರುವ ಖುಷಿಯನ್ನು ರಾಗಿಣಿ ಹಂಚಿಕೊಂಡರು. ಈ ವೇಳೆ ಅವರು ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ವಿಡಿಯೋ: ನಿಜವಾದ ಹೀರೋಗಳೊಂದಿಗೆ ರಾಗಿಣಿ ಸಂವಾದ ಮತ್ತು ಸಲಾಂ
ಎಲ್ಲರಿಗೂ ಶುಭಾಶಯಗಳು
ಮೊದಲು ಕಾರ್ಮಿಕರ ದಿನಾಚರಣೆಯ ಶುಭಾಶಯ ಕೋರಿದ ರಾಗಿಣಿ, ಕೆಲಸ ಮಾಡುವ ಪ್ರತಿಯೊಬ್ಬರೂ ಕಾರ್ಮಿಕರು. ಎಲ್ಲರೂ ಒಂದೇ ರೀತಿ ಪ್ರೀತಿ ಗೌರವ ಕೊಡುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಸಂಯಮದಿಂದ ಇರಿ
ಲಾಕ್ಡೌನ್ ಸಮಯದಲ್ಲಿ ಎಲ್ಲರೂ ತಮ್ಮ ಸಂಯಮ, ಸಹನೆ ಪರಿಶೀಲಿಸಿಕೊಂಡಿದ್ದಾರೆ. ಇದರಿಂದ ಜನರು ಉದ್ವಿಗ್ನರಾಗೋದು ಸಹಜ. ಆದರೆ ನಾವು ಕೆಲವು ಸಮಯ ಹೀಗೆಯೇ ಇರಬೇಕಾಗುತ್ತದೆ. ಆರೋಗ್ಯದ ಸಲುವಾಗಿ ಮುನ್ನೆಚ್ಚರಿಕೆ ವಹಿಸಬೇಕು. ಅಕ್ಕಪಕ್ಕದವರಗೆ ಸಹಾಯ ಮಾಡಿ. ಯಾವಾಗಲೂ ಸ್ಟ್ರಾಂಗ್ ಆಗಿರಿ ಎಂದು ಸಲಹೆ ನೀಡಿದರು.
ಕೊರೊನಾ ಭೀತಿ: ಜನರ ಸಹಾಯಕ್ಕೆ ಧಾವಿಸಿದ ತುಪ್ಪದ ಹುಡುಗಿ ರಾಗಿಣಿ
ಸುದೀಪ್ ಜತೆ ಸಿನಿಮಾ ಯಾವಾಗ?
ಸುದೀಪ್ ಜತೆ ಯಾವಾಗ ಸಿನಿಮಾ ಮಾಡ್ತೀರಿ ಎಂಬ ಪ್ರಶ್ನೆ ಅಭಿಮಾನಿಗಳಿಂದ ಎದುರಾಯ್ತು. ಸುದೀಪ್ ಜತೆ ನಟಿಸುವ ಒಳ್ಳೆಯ ಅವಕಾಶ ಬಂದರೆ ಖಂಡಿತಾ ಮಾಡೋಣ. ಆದರೆ ಯಾವಾಗ ಬರುತ್ತದೆಯೋ ಗೊತ್ತಿಲ್ಲ ಎಂದರು. ಮುಂದಿನ ಸಿನಿಮಾ ಪ್ರಕಾಶ್ ಬೆಳವಾಡಿ ಜತೆ ಮಾಡುತ್ತಿದ್ದು, ಬಹಳ ಇಂಟರೆಸ್ಟಿಂಗ್ ಆಗಿದೆ ಎಂದು ತಿಳಿಸಿದರು.
ಎರಡು ಆಕ್ಷನ್ ಸಿನಿಮಾಗಳು
ಎರಡು ಆಕ್ಷನ್ ಸಿನಿಮಾಗಳಗೆ ಯೋಜನೆ ನಡೆಯುತ್ತಿದೆ. ಮುಂದಿನ ವರ್ಷದಲ್ಲಿ ಒಂದು ಸೋಲೋ ಸಿನಿಮಾ ಇದೆ. ಅದು ಸೋಷಿಯಲ್ ಓರಿಯೆಂಟೆಡ್ ಸಿನಿಮಾ. ಸದ್ಯಕ್ಕೆ ಮನೆ ಸ್ವಚ್ಛಗೊಳಿಸುವುದು ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದರು.