Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕ ರಾಜೇಶ್ ಕೃಷ್ಣನ್ ದಾಂಪತ್ಯದಲ್ಲಿ ಬಿರುಕು
ಇನ್ನೂ ಚಿಗುರು ಮೀಸೆ ಹುಡುಗನಂತೆ ಕಾಣುವ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕ, ನಟ, ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣನ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರ ಬಾಳಸಂಗಾತಿ ರಮ್ಯಾ ವಸಿಷ್ಠ್ ಅವರು ವಿವಾಹ ರದ್ದು (ವಿಚ್ಛೇದನ ಅಲ್ಲ) ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12 (1) ಎ ಅಡಿ ಅವರು ರಾಜೇಶ್ ಕೃಷ್ಣನ್ ಅವರೊಂದಿಗೆ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಫೆ.5ರಂದೇ ಅವರು ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದಷ್ಟೇ ರಾಜೇಶ್ ಅವರು ರಮ್ಯಾ ಅವರನ್ನು ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ವರಿಸಿದ್ದರು.
ರಮ್ಯಾ ವಸಿಷ್ಠ್ ಅವರೊಂದಿಗೆ ರಾಜೇಶ್ ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಭಾವಿಸಿದ್ದರು. ಆದರೆ ವರ್ಷ ಕಳೆಯುವಷ್ಟರಲ್ಲಿ ಎಲ್ಲವೂ ಹುಸಿಯಾಗಿದೆ. ರಾಜೇಶ್ ಕೃಷ್ಣನ್ ದಾಂಪತ್ಯ ಜೀವನ ಮತ್ತೊಮ್ಮೆ ಹಳಿ ತಪ್ಪಿದೆ. (ರಾಜೇಶ್ ವಿವಾಹ ಮುರಿದು ಬೀಳಲು ಕಾರಣಗಳು)
ಈ ಹಿಂದೆ ರಾಜೇಶ್ ಅವರಿಗೆ ಸೌಮ್ಯಾ ರಾವ್ (ಬಿಕೆ ಸುಮಿತ್ರಾ ಅವರ ಪುತ್ರಿ) ವಿವಾಹವಾಗಿ ವಿಚ್ಛೇದನವಾಗಿದೆ. ಈಗ ರಮ್ಯಾ ಅವರು ವಿವಾಹ ರದ್ದು ಕೋರಲು ಬಲವಾದ ಕಾರಣವನ್ನೂ ನೀಡಿದ್ದಾರೆ. ಅದೇನೆಂದರೆ ಅವರಿಗೆ ಲೈಂಗಿಕಕ್ರಿಯೆ (ಪುರುಷತ್ವ ಇಲ್ಲ) ನಡೆಸುವ ಸಾಮರ್ಥ್ಯ ಇಲ್ಲ ಎಂಬುದು. ಹಾಗೇ ತಾವಿನ್ನೂ ಕನ್ಯೆ ಎಂದೂ ತಿಳಿಸಿದ್ದಾರೆ ಎನ್ನಲಾಗಿದೆ. ಏ.4ರಂದು ಕೋರ್ಟ್ ಗೆ ಹಾಜರಾಗುವಂತೆ ರಾಜೇಶ್ ಅವರಿಗೆ ಕೋರ್ಟ್ ಆದೇಶಿಸಿದೆ. [ಜೋಕ್ : ಗಂಡಸ್ತನ ಪ್ರಶ್ನಿಸಿದ ಹೆಂಡತಿಗೆ ಗಂಡನ ಉತ್ತರ] (ಏಜೆನ್ಸೀಸ್)