Don't Miss!
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರಂಜೀವಿಗೆ ಪಾಠ ಮಾಡುತ್ತಿರುವ ಕಿಚ್ಚ ಸುದೀಪ್
ಕನ್ನಡದ ಕಿಚ್ಚ ಸುದೀಪ್ ಸ್ವಲ್ಪ ಗ್ಯಾಪ್ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಆದರೆ ಇದರಲ್ಲೂ ಹೊಸತನ ಮೆರೆದಿದ್ದಾರೆ. ಈ ಬಾರಿ ಅವರು ನಿರ್ದೇಶಿಸುತ್ತಿರುವುದು ಸಿನಿಮಾದ ಬದಲು ಒಂದು ಕಿರುಚಿತ್ರ. ಇದರಲ್ಲಿ ಅವರಿಗೆ ಶಿಷ್ಯನಾಗಿ ಚಿರಂಜೀವಿ ಸರ್ಜಾ ಸಾಥ್ ನೀಡಲಿದ್ದಾರೆ. ಸಿಸಿಎಲ್, ವರದನಾಯಕ ಚಿತ್ರದ ನಂತರ ಚಿರು-ಕಿಚ್ಚ ಸಖತ್ ಕ್ಲೋಸ್. ಇದು ಸದ್ಯ ಗಾಂಧಿನಗರದಲ್ಲಿ ಸುತ್ತುತ್ತಿರುವ ಸುದ್ದಿ.
ವರದನಾಯಕ ಚಿತ್ರದಲ್ಲಿನ ಸುದೀಪ್ ಭಾಗದ ಚಿತ್ರೀಕರಣವಿನ್ನೂ ಮುಗಿದಿಲ್ಲ. ಅದರ ಮಧ್ಯದಲ್ಲೇ ಸುದೀಪ್ ಕಿರುಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಹೊಸ ಹುಡುಗರನ್ನು ಈ ಕಿರುಚಿತ್ರಕ್ಕೆ ನಟರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಸುದೀಪ್. ಇಷ್ಟು ಸುದ್ದಿ ಮಾತ್ರ ಸುದೀಪ್ ಟ್ಟಿಟ್ಟರ್ ನಿಂದ ಬಹಿರಂಗಗೊಂಡಿದೆ. ಯಾವ ವಿಷಯದ ಮೇಲೆ ಕಿರುಚಿತ್ರ, ಹೆಸರೇನು? ಎನ್ನುವ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕೆ ಉತ್ತರವಿಲ್ಲ.
ಚಿರು ಜೊತೆ ಸುದೀಪ್ ಒಡನಾಟ ಸ್ನೇಹಕ್ಕಷ್ಟೇ ಸೀಮಿತವಾಗದೇ ಚಿರುಗೆ ನಿರ್ದೇಶನದ ಪಾಠವನ್ನೂ ಹೇಳಿಕೊಡುತ್ತಿದ್ದಾರಂತೆ. "ಕಿರುಚಿತ್ರ ನಿರ್ಮಾಣದಲ್ಲಿ ಚಿರಂಜೀವಿ ನನಗೆ ಸಹಕಾರ ನೀಡುತ್ತಿದ್ದಾರೆ" ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಮುಂದೊಮ್ಮೆ ಚಿರಂಜೀವಿ ಸರ್ಜಾ ನಿರ್ದೇಶಕರಾಗಲೂಬಹುದು. ಒಟ್ಟಾರೆ, ತಮಗೆ ನಿರ್ದೇಶನ ಮರೆಯಬಾರದೆಂದೋ ಅಥವಾ ಚಿರುಗೆ ನಿರ್ದೇಶನ ಕಲಿಸಲೆಂದೋ ಗೊತ್ತಿಲ್ಲ, ಸುದೀಪ್ ಕಿರುಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)