Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ಬಾಲಿವುಡ್ ಚಾಕೋಲೇಟ್ ಬೆಡಗಿ ತನುಶ್ರೀ
ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಹೆಚ್ ಆರ್ ಶ್ರೀಕಾಂತ್. ಈ ಹಿಂದೆ ಅವರು 'ಟೀನೇಜ್, ಈ ವಯಸ್ಸೇ ಒಂಥರಾ' ಚಿತ್ರವನ್ನು ನಿರ್ದೇಶಿಸಿದ್ದರು. 'ಏನಿದು ಮನಸಿನಲ್ಲಿ' ಚಿತ್ರ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ.
ಬೆಂಗಳೂರು ಮೂಲದ ಮುಂಬೈ ನಿವಾಸಿ ನಿಯಾಜ್ ಅಹ್ಮದ್ ಚಿತ್ರದ ನಿರ್ಮಾಪಕರು. ಚಿತ್ರದ ಪಾತ್ರವರ್ಗದಲ್ಲಿ ಭುವನ್, ಮಿತ್ರಾ ಮತ್ತಿತರು ಇದ್ದಾರೆ. ಚಿತ್ರಕ್ಕೆ ಛಾಯಾಗ್ರಹಣ ಮಹೇಶ್ ಕೆ ದೇವ್, ಸಂಗೀತ ಮನೋಜ್ ಹಾಗೂ ಸಂಕಲನ ಕಿಶನ್.
ಈಗಾಗಲೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಸುತ್ತಮುತ್ತ ಸಕಲೇಶಪುರದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಚಿತ್ರೀಕರಣ ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ತನುಶ್ರೀ ದತ್ತಾ ಬಗ್ಗೆ ಹೇಳಬೇಕಾದರೆ, ಈಕೆ ಮಾಜಿ ಫೆಮೀನಾ ಮಿಸ್ ಇಂಡಿಯಾ ಯೂನಿವರ್ಸ್ 2004ರ ವಿಜೇತೆ. ಜಾರ್ಕಂಡ್ ರಾಜ್ಯದ ಜೆಮ್ ಶೆಡ್ ಪುರ ಈಕೆಯ ಸ್ವಸ್ಥಳ. ಪುಣೆ ವಿಶ್ವವಿದ್ಯಾಲಯದ ಪದವೀಧರೆ. ಬಾಲಿವುಡ್ ನಷ್ಟೇ ಅಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ವಿಜಯ್ ರಾಘವೇಂದ್ರ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಸತತವಾಗಿ ಸೋಲುಣ್ಣುತ್ತಿವೆ. ವಿನಾಯಕ ಗೆಳೆಯರ ಬಳಗ, ಕಳ್ಳ ಮಳ್ಳ ಸುಳ್ಳ ಚಿತ್ರಗಳಿಗೆ ಸಾಧಾರಣ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಬ್ರೇಕ್ ನೀಡಲೇಬೇಕಾದಂತಹ ಅನಿವಾರ್ಯತೆ ವಿಜಯ್ ಗೆ ಎದುರಾಗಿದೆ. 'ಏನಿದು ಮನಸಲಿ' ಚಿತ್ರ ಅವರ ಕೈಹಿಡಿಯಲಿ ಎಂದು ಆಶಿಸೋಣ. (ಒನ್ ಇಂಡಿಯಾ ಕನ್ನಡ)