Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ 100: ವೇದಿಕೆಯಲ್ಲೇ ಆಯೋಜಕರನ್ನು ಬೆಂಡೆತ್ತಿದ ನಿರ್ದೇಶಕ
ಭಾರತೀಯು ಸಿನಿಮಾ 100 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಚೆನ್ನೈನಲ್ಲಿ ತಮಿಳುನಾಡಿನ ಸೆಲ್ವಿ ಜಯಲಲಿತಾ ಸರಕಾರ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ಟೀಕೆ ಟಿಪ್ಪಣಿಗಳು ಹರಿದು ಬರುತ್ತಲೇ ಇದೆ.
ಕಾರ್ಯಕ್ರಮದ ಎರಡನೇ ದಿನ ಆಯೋಜಕರು ತೀವ್ರ ಮುಜುಗರಕ್ಕೆ ಈಡಾಗುವ ಘಟನೆಗೆ ವೇದಿಕೆ ಸಾಕ್ಷಿಯಾಯಿತು. ತೆಲುಗಿನಲ್ಲಿ ವಿಭಿನ್ನ ಚಿತ್ರಗಳನ್ನು ನೀಡಿ ಜನಮನ್ನಣೆ ಗಳಿಸಿರುವ ನಿರ್ದೇಶಕ ಆರ್ ನಾರಾಯಣ ಮೂರ್ತಿ ಆಯೋಜಕರನ್ನು ವೇದಿಕೆಯ ಮೇಲೆ ಸರಿಯಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಕನ್ನಡದ ಕಲಾವಿದರಿಗೂ ಸರಿಯಾದ ಮನ್ನಣೆ ಸಿಗಲಿಲ್ಲ ಎನ್ನುವ ಸುದ್ದಿಗಳೂ ಬರುತ್ತಿವೆ. ಶೃತಿ ಕೂಡಾ ಕಾರ್ಯಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು. ಕನ್ನಡದ ಪ್ರಮುಖ ನಟರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೂ ಆಹ್ವಾನವಿರಲಿಲ್ಲ. ಒಟ್ಟಿನಲ್ಲಿ ಕಲಾವಿದರನ್ನು ಗೌರವಿಸುವ ಈ ಕಾರ್ಯಕ್ರಮ ತಮಿಳುನಾಡು ಸರಕಾರದ ಕಾರ್ಯಕ್ರಮದಂತೆ ನಡೆದಿದ್ದು ಬಹುತೇಕ ಎಲ್ಲಾ ಕಲಾವಿದರಿಗೆ ಬೇಸರ ತಂದಿದೆ.
ತೆಲುಗು ನಿರ್ದೇಶಕ ನಾರಾಯಣ ಮೂರ್ತಿ ಸಿಟ್ಟಿಗೆ ಕಾರಣವೇನು? ಸ್ಲೈಡಿನಲ್ಲಿ..
ನಾರಾಯಣ ಮೂರ್ತಿ
ಕಾರ್ಯಕ್ರಮದ ಎರಡನೇ ದಿನ ಟಾಲಿವುಡ್ ಚಿತ್ರ ಜಗತ್ತಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಐಟಂ ಸಾಂಗಿನ ಹಾಡೊಂದಕ್ಕೆ ನೃತ್ಯ ನಡೆಯುತ್ತಿತ್ತು. ಕಾರ್ಯಕ್ರಮದ ನಡುವೆಯೇ ವೇದಿಕೆ ಏರಿದ ನಾರಾಯಣ ಮೂರ್ತಿ ಆಯೋಜಕರಿಂದ ಮೈಕ್ ಕಿತ್ತುಕೊಂಡು ಇದೇನು ನೂರು ವರ್ಷದ ಕಾರ್ಯಕ್ರಮವೇ ಅಥವಾ ಆಡಿಯೋ ಬಿಡುಗಡೆ ಸಮಾರಂಭವೇ ಎಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.
ಭಾರತೀಯ ಸಿನಿಮಾ 100
ಭಾರತೀಯ ಸಿನಿಮಾ 100 ಇದರ ಸಂಭ್ರಮವನ್ನು ಕಲಾತ್ಮಕವಾಗಿ ಆಯೋಜಿಸುವುದನ್ನು ಬಿಟ್ಟು ಇದೇನು ಐಟಂ ಸಾಂಗುಗಳು. ತೆಲುಗು ಚಿತ್ರರಂಗವೆಂದರೆ ಬರೀ ಐಟಂ ಸಾಂಗುಗಳುವಿರುವ ಚಿತ್ರೋದ್ಯಮ ಅಂದು ಕೊಂಡಿದ್ದೀರಾ?
ರಘುಪತಿ ವೆಂಕಯ್ಯ ನಾಯ್ಡು
ತೆಲುಗು ಕಾರ್ಯಕ್ರಮ ನಡೆಯುವ ಈ ವೇದಿಕೆಗೆ ರಘುಪತಿ ವೆಂಕಯ್ಯ ನಾಯ್ಡು ಅವರ ಹೆಸರನ್ನು ಇಟ್ಟಿದ್ದೀರಾ. ದಕ್ಷಿಣ ಭಾರತದ ಸಿನಿಮಾ ಜಗತ್ತಿಗೆ ರಘುಪತಿ ವೆಂಕಯ್ಯ ನಾಯ್ಡು ಅವರ ಸೇವೆ ಏನೆಂದು ನಿಮಗೆ ತಿಳಿದಿದೆಯೇ? ಇಡೀ ಭಾರತೀಯ ಚಿತ್ರೋದ್ಯಮ ಹೆಮ್ಮೆ ಪಡುವಂತ ಕಲಾವಿದರು ಅವರು. ಅವರ ಹೆಸರಿಗೆ ಮತ್ತು ತೆಲುಗು ಚಿತ್ರೋದ್ಯಮಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದೀರಾ ಎಂದು ನಾರಾಯಣ ಮೂರ್ತಿ ಕೂಗಾಡಲಾರಂಭಿಸಿದರು.
ಸನ್ಮಾನ ಸಮಾರಂಭ
ತೆಲುಗು ಚಿತ್ರದ್ಯೋಮದ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ತಮಿಳು ನಿರ್ದೇಶಕರಿಗೆ ಸನ್ಮಾನ ಮಾಡುತ್ತೀರಾ. ಬಾಲಚಂದರ್ ಬಗ್ಗೆ ನಮಗೆ ಗೌರವವಿದೆ. ನಮ್ಮ ಉದ್ಯಮದ ದಾಸರಿ ನಾರಾಯಣ ರಾವ್, ವಿಶ್ವನಾಥ್, ರಾಘವೇಂದ್ರ ರಾವ್, ರಾಮ ನಾಯ್ಡು ಅವರಿಗೆ ಸನ್ಮಾನ ಮಾಡಲಿಲ್ಲ. ಟಾಲಿವುಡ್ ಉದ್ಯಮಕ್ಕೆ ಅಗೌರವ ತೋರಿಸುವುದು ನಿಮ್ಮ ಉದ್ದೇಶವೇ ಎಂದು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.
ತೆಲುಗು ಚಿತ್ರೋದ್ಯಮ
ಕ್ರಾಂತಿಕಾರಿ ನಿರ್ದೇಶಕ ನಾರಾಯಣ ಮೂರ್ತಿ ಅವರ ಈ ಅನಿರೀಕ್ಷಿತ ವರ್ತನೆಯಿಂದ ಆಯೋಜಕರು ಅಕ್ಷರಸಃ ದಂಗಾದರು. ಕೊನೆಗೆ ತೆಲುಗು ನಟ ಡಾ. ರಾಜಶೇಖರ್ ಮತ್ತು ದಕ್ಷಿಣ ಭಾರತ ಚಲನ ಚಿತ್ರರಂಗದ ಅಧ್ಯಕ್ಷ ಕಲ್ಯಾಣ್ ಇಬ್ಬರೂ ಸೇರಿ ನಾರಾಯಣ ಮೂರ್ತಿ ಅವರಿಂದ ಮೈಕ್ ಕಿತ್ತುಕೊಂಡು ಭಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿದರು.