Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ ನೀಡಿದ ಠಾಕೂರ್ ಅನೂಪ್
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಉದ್ಘರ್ಷ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ರು. ಯಜಮಾನ ಚಿತ್ರದಲ್ಲಿ ವಿಲನ್ ಆಗಿದ್ದ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ಸ್ನೇಹಿತನ ಕರೆ ಹಾಗೂ ಸುನೀಲ್ ಕುಮಾರ್ ದೇಸಾಯಿ ಅಂತಹ ನಿರ್ದೇಶಕರ ಆಹ್ವಾನಕ್ಕಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಡಿ ಬಾಸ್ ಗೆ ಠಾಕೂರ್ ಕಡೆಯಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.
ಬರೊಬ್ಬರಿ 1 ಕೆಜಿ ತೂಕದ ವಾಚ್ ಅನ್ನ ಠಾಕೂರ್ ಅನೂಪ್, ನಟ ದರ್ಶನ್ ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅಷ್ಟಕ್ಕೂ ಅದರ ಬೆಲೆ ಎಷ್ಟು? ಮುಂದೆ ಓದಿ....
ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ
ದರ್ಶನ್ ಯಜಮಾನ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್ ಖಳನಾಯಕನಾಗಿದ್ದರು. ಅಲ್ಲಿ ದಾಸನ ಮುಂದೆ ವಿಲನ್ ಆಗಿ ಅಬ್ಬರಿಸಿದ್ದ ಠಾಕೂರ್, ಜೊತೆಗೆ ದರ್ಶನ್ ಅವರ ಪ್ರೀತಿಯನ್ನೂ ಸಂಪಾದಿಸಿದ್ದರು. ಅದಕ್ಕಾಗಿಯೇ ಠಾಕೂರ್ ತನ್ನ ನೆಚ್ಚಿನ ನಟ ಹಾಗೂ ಗೆಳೆಯನಿಗೆ ಒಂದು ಕೆಜಿ ತೂಕದ ವಾಚ್ ನೀಡಿದ್ದಾರೆ. ಆದ್ರೆ, ಬೆಲೆಯನ್ನ ಬಹಿರಂಗಪಡಿಸಿಲ್ಲ.
ಠಾಕೂರ್ ಕೆಲಸ ಮೆಚ್ಚಿದ ದಾಸ
ಸಾಮಾನ್ಯವಾಗಿ ಹೊರಗಡೆಯಿಂದ ಬರುವ ಕೆಲವು ಕಲಾವಿದರು, ಕನ್ನಡ ಚಿತ್ರಗಳಲ್ಲಿ ಬಂದು ನಟಿಸಿ, ದುಡ್ಡಿ ತಗೊಂಡು ಹೋಗ್ತಾರೆ. ಈ ವಿಚಾರದಲ್ಲಿ ಠಾಕೂರ್ ನಡೆಯನ್ನ ದರ್ಶನ್ ಮೆಚ್ಚಿಕೊಂಡಿದ್ದಾರೆ. ಅನೂಪ್ ಅವರ ಕಮಿಟ್ ಮೆಂಟ್ ನನಗೆ ತುಂಬಾ ಖುಷಿ ಇದೆ. ''ನಟಿಸಿ, ಡೈಲಾಗ್ ಅಭ್ಯಾಸ ಮಾಡಿ, ಅವರೇ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ'' ಎಂದು ದರ್ಶನ್ ಹೇಳಿದ್ರು.
ನಾನು ಲೈಟ್ ಬಾಯ್ ಆಗಿದ್ದೆ
ಸುನೀಲ್ ಕುಮಾರ್ ದೇಸಾಯಿ ಅವರ ನಮ್ಮೂರ ಮಂದಾರ ಹೂವೆ ಸಿನಿಮಾ ಬಿಡುಗಡೆಯಾಗುವ 'ಜನುಮದ ಜೋಡಿ' ಚಿತ್ರದ ಸಂದರ್ಭದಲ್ಲಿ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡ್ತಿದ್ದೆ. ಆಗ ನಮ್ಮೂರ ಮಂದಾರ ಹೂವೆ ಸಿನಿಮಾದ ಪ್ರಿವ್ಯೂ ಶೋ ನೋಡಿದ್ದೆ. ಆಗಲೇ ಪ್ರಿವ್ಯೂ ಶೋ ಹೀಗಿರುತ್ತೆ ಅಂತ ಗೊತ್ತಾಗಿದ್ದು.
ನಾಲ್ಕು ಭಾಷೆಯಲ್ಲಿ ಉದ್ಘರ್ಷ
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಈ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬರ್ತಿದೆ. ಕಿಚ್ಚ ಸುದೀಪ್ ಈ ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ್ದರು. ಸುದೀಪ್ ಧ್ವನಿ ಹೊಂದಿರುವ ಈ ಟ್ರೈಲರ್ ನ್ನ ನಟ ದರ್ಶನ್ ಬಿಡುಗಡೆ ಮಾಡಿದ್ದು, ತುಂಬಾ ವಿಶೇಷ.