twitter
    For Quick Alerts
    ALLOW NOTIFICATIONS  
    For Daily Alerts

    ಜಯಲಲಿತಾಗಾಗಿ ಮೀಸೆ ಪಣಕ್ಕಿಟ್ಟ ವಿಜಯಕಾಂತ್

    By ಶಂಕರ್, ಚೆನ್ನೈ
    |

    ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರದಲ್ಲಿ 21 ದಿನಗಳನ್ನು ಕಳೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಅಣ್ಣಾ ಡಿಎಂಕೆ ಪಕ್ಷದ ಪರಮೋಚ್ಚ ನಾಯಕಿ ಜೆ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಗೊತ್ತೇ ಇದೆ. ಶನಿವಾರ (ಅ.18) ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತಿದೆ.

    ಅಮ್ಮ ಬಿಡುಗಡೆಯಾಗುತ್ತಿದ್ದು ತಮಿಳುನಾಡಿನಲ್ಲಿ ಹಬ್ಬಕ್ಕೂ ಮುನ್ನವೇ ದೀಪಾವಳಿ ಬಂದಂತಾಗಿದೆ. ಜಯಲಲಿತಾ ಬಿಡುಗಡೆಯಾಗುತ್ತಿರುವುದು ಕೆಲವರಿಗೆ ಖುಷಿ ಕೊಟ್ಟಿದ್ದರೆ ವಿರೋಧ ಪಕ್ಷದವರು ಒಳಗೊಳಗೆ ಕುದಿಯುವಂತಾಗಿದೆ. ಅಂತಹರವಲ್ಲಿ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಸಹ ಒಬ್ಬರು. ಅವರು ಸಿನಿಮಾ ರೀತಿಯಲ್ಲೇ ಒಂದು ಡೈಲಾಗ್ ಎಸೆದಿದ್ದಾರೆ.

    Vijaykanth
    ಜಯಲಿಲಿತಾ ಅವರು ನಿರಪರಾಧಿ ಎಂದು ಸಾಬೀತಾದರೆ ತಮ್ಮ ಮೀಸೆ ಬೋಳಿಸುವುದಾಗಿ ಹೇಳಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಕೆಲವು ನಟರು ಜಯಲಲಿತಾ ಪರವಾಗಿದ್ದರೆ ಇನ್ನೂ ಕೆಲವರು ಅವರ ವಿರುದ್ಧವಾಗಿರುವುದು ಅಲ್ಲಿನ ಚಿತ್ರರಂಗವನ್ನೂ ಇಬ್ಭಾಗ ಮಾಡಿದೆ.

    ಜಲಲಲಿತಾ ಅವರಿಗೆ ಷರತ್ತುಬದ್ಧ ಜಾಮೀನೇನೂ ಸಿಕ್ಕಿದೆ. ಆದರೆ ಅವರು ಜೈಲಿನಲ್ಲೇ ನವರಾತ್ರಿ ಆಚರಿಸಿಕೊಂಡಿದ್ದರು, ಇದೀಗ ದೀಪಾವಳಿ ಆಚರಿಸಿಕೊಳ್ಳಲು ಹೊರಬರುತ್ತಿದ್ದಾರೆ. ಅವರು ಇನ್ನೂ ನಿರಪರಾಧಿ ಎಂಬುದು ಸಾಬೀತಾಗಿಲ್ಲ. ಅಲ್ಲಿಯವರೆಗೂ ವಿಜಯಕಾಂತ್ ಮೀಸೆ ಸೇಫ್ ಎನ್ನಬಹುದು.

    English summary
    Kollywood actor, Tamil Nadu’s politician, Vijayakanth stated that he will remove his moustache if Jayalalithaa was proved innocent. The Apex Court on Friday granted a two-month bail to J Jayalalithaa on medical grounds and also suspended the Karnataka High Court sentence against the former Tamil Nadu chief minister in an illegal assets case.
    Saturday, October 18, 2014, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X