Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು,ಭಾರತಿ ಅಪಾಯದಿಂದ ಪಾರು : ನಿಜಕ್ಕೂ ಪವಾಡ!
ಸೆ.9ರಂದು ಹೈದರಾಬಾದ್ ನಲ್ಲಿ ಫ್ಲೈಓವರ್ ಕುಸಿತದಿಂದ ಇಬ್ಬರು ಮೃತಪಟ್ಟು, ಸುಮಾರು ಮಂದಿ ಗಾಯಗೊಂಡ ಸುದ್ದಿ ನಿಮಗೆ ಗೊತ್ತು. ಈ ನತದೃಷ್ಟ ಫ್ಲೈಓವರ್ ಬಳಸಿಕೊಂಡು ವಿಷ್ಣುವರ್ಧನ್ ದಂಪತಿಗಳು ಪ್ರಯಾಣ ಮಾಡಬೇಕಿತ್ತು. ಒಂದು ವೇಳೆ ಈ ತಾರಾಜೋಡಿ ಪ್ರಯಾಣ ಮುಂದುವರೆಸಿದ್ದರೆ,ಅಪಾಯ ಸಂಭವಿಸುತ್ತಿತ್ತು ಎನ್ನಲಾಗಿದೆ.
ತೆಲುಗು ಚಿತ್ರ 'ಧೀ' 150 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾರಂಭಕ್ಕೆ ಕಾರಿನಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ತೆರಳುತ್ತಿದ್ದರು. ಪಂಜಾಗುಡ್ಡ ಫ್ಲೈ ಓವರ್ ಮುಖಾಂತರ ಹೋಗಬೇಕಿತ್ತು. ಇಲ್ಲಿನ ಟ್ರಾಫಿಕ್ ಕಿರಿಕಿರಿಯಿಂದಾಗಿ , ಬೇರೆ ಮಾರ್ಗದಲ್ಲಿ ಅವರ ಕಾರು ಮುಂದುವರೆಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಟ ಮೋಹನ್ ಲಾಲ್ ಕರೆ ಮಾಡಿ, ವಿಷ್ಣುವರ್ಧನ್ ಗೆ ಫ್ಲೈ ಓವರ್ ಕುಸಿತದ ಬಗ್ಗೆ ತಿಳಿಸಿದರು. ಆ ದಾರಿಯಲ್ಲಿ ಬರಲಿಲ್ಲ ಎಂದು ತಿಳಿದು ನೆಮ್ಮದಿಯಿಂದ ಮೋಹನ್ ಲಾಲ್ ನಿಟ್ಟುಸಿರುಬಿಟ್ಟರು.
ಸೆ.9ರಂದು ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಕೆಳಗಿದ್ದ ಜನ ಅಪಾಯಕ್ಕೆ ಸಿಲುಕಿದ್ದರು. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿ, ಹತ್ತಾರು ಮಂದಿ ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)