twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು,ಭಾರತಿ ಅಪಾಯದಿಂದ ಪಾರು : ನಿಜಕ್ಕೂ ಪವಾಡ!

    By Super Admin
    |

    Vishnuvardhan
    ಬೆಂಗಳೂರು, ಸೆಪ್ಟೆಂಬರ್ 11 : ನಟ ಡಾ.ವಿಷ್ಣುವರ್ಧನ್ ಮತ್ತು ಭಾರತಿ ಗಂಡಾಂತರವೊಂದರಿಂದ ಪಾರಾಗಿದ್ದಾರೆ.

    ಸೆ.9ರಂದು ಹೈದರಾಬಾದ್ ನಲ್ಲಿ ಫ್ಲೈಓವರ್ ಕುಸಿತದಿಂದ ಇಬ್ಬರು ಮೃತಪಟ್ಟು, ಸುಮಾರು ಮಂದಿ ಗಾಯಗೊಂಡ ಸುದ್ದಿ ನಿಮಗೆ ಗೊತ್ತು. ಈ ನತದೃಷ್ಟ ಫ್ಲೈಓವರ್ ಬಳಸಿಕೊಂಡು ವಿಷ್ಣುವರ್ಧನ್ ದಂಪತಿಗಳು ಪ್ರಯಾಣ ಮಾಡಬೇಕಿತ್ತು. ಒಂದು ವೇಳೆ ಈ ತಾರಾಜೋಡಿ ಪ್ರಯಾಣ ಮುಂದುವರೆಸಿದ್ದರೆ,ಅಪಾಯ ಸಂಭವಿಸುತ್ತಿತ್ತು ಎನ್ನಲಾಗಿದೆ.

    ತೆಲುಗು ಚಿತ್ರ 'ಧೀ' 150 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾರಂಭಕ್ಕೆ ಕಾರಿನಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ತೆರಳುತ್ತಿದ್ದರು. ಪಂಜಾಗುಡ್ಡ ಫ್ಲೈ ಓವರ್ ಮುಖಾಂತರ ಹೋಗಬೇಕಿತ್ತು. ಇಲ್ಲಿನ ಟ್ರಾಫಿಕ್ ಕಿರಿಕಿರಿಯಿಂದಾಗಿ , ಬೇರೆ ಮಾರ್ಗದಲ್ಲಿ ಅವರ ಕಾರು ಮುಂದುವರೆಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಟ ಮೋಹನ್ ಲಾಲ್ ಕರೆ ಮಾಡಿ, ವಿಷ್ಣುವರ್ಧನ್ ಗೆ ಫ್ಲೈ ಓವರ್ ಕುಸಿತದ ಬಗ್ಗೆ ತಿಳಿಸಿದರು. ಆ ದಾರಿಯಲ್ಲಿ ಬರಲಿಲ್ಲ ಎಂದು ತಿಳಿದು ನೆಮ್ಮದಿಯಿಂದ ಮೋಹನ್ ಲಾಲ್ ನಿಟ್ಟುಸಿರುಬಿಟ್ಟರು.

    ಸೆ.9ರಂದು ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಕೆಳಗಿದ್ದ ಜನ ಅಪಾಯಕ್ಕೆ ಸಿಲುಕಿದ್ದರು. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿ, ಹತ್ತಾರು ಮಂದಿ ಗಾಯಗೊಂಡಿದ್ದರು.

    (ದಟ್ಸ್ ಕನ್ನಡ ವಾರ್ತೆ)

    Thursday, May 19, 2011, 14:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X