ವಿಷ್ಣು,ಭಾರತಿ ಅಪಾಯದಿಂದ ಪಾರು : ನಿಜಕ್ಕೂ ಪವಾಡ!

By Super Admin

Vishnuvardhan
ಬೆಂಗಳೂರು, ಸೆಪ್ಟೆಂಬರ್ 11 : ನಟ ಡಾ.ವಿಷ್ಣುವರ್ಧನ್ ಮತ್ತು ಭಾರತಿ ಗಂಡಾಂತರವೊಂದರಿಂದ ಪಾರಾಗಿದ್ದಾರೆ.

ಸೆ.9ರಂದು ಹೈದರಾಬಾದ್ ನಲ್ಲಿ ಫ್ಲೈಓವರ್ ಕುಸಿತದಿಂದ ಇಬ್ಬರು ಮೃತಪಟ್ಟು, ಸುಮಾರು ಮಂದಿ ಗಾಯಗೊಂಡ ಸುದ್ದಿ ನಿಮಗೆ ಗೊತ್ತು. ಈ ನತದೃಷ್ಟ ಫ್ಲೈಓವರ್ ಬಳಸಿಕೊಂಡು ವಿಷ್ಣುವರ್ಧನ್ ದಂಪತಿಗಳು ಪ್ರಯಾಣ ಮಾಡಬೇಕಿತ್ತು. ಒಂದು ವೇಳೆ ಈ ತಾರಾಜೋಡಿ ಪ್ರಯಾಣ ಮುಂದುವರೆಸಿದ್ದರೆ,ಅಪಾಯ ಸಂಭವಿಸುತ್ತಿತ್ತು ಎನ್ನಲಾಗಿದೆ.

ತೆಲುಗು ಚಿತ್ರ 'ಧೀ' 150 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾರಂಭಕ್ಕೆ ಕಾರಿನಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ತೆರಳುತ್ತಿದ್ದರು. ಪಂಜಾಗುಡ್ಡ ಫ್ಲೈ ಓವರ್ ಮುಖಾಂತರ ಹೋಗಬೇಕಿತ್ತು. ಇಲ್ಲಿನ ಟ್ರಾಫಿಕ್ ಕಿರಿಕಿರಿಯಿಂದಾಗಿ , ಬೇರೆ ಮಾರ್ಗದಲ್ಲಿ ಅವರ ಕಾರು ಮುಂದುವರೆಯಿತು. ನಂತರ ಕೆಲವೇ ನಿಮಿಷಗಳಲ್ಲಿ ನಟ ಮೋಹನ್ ಲಾಲ್ ಕರೆ ಮಾಡಿ, ವಿಷ್ಣುವರ್ಧನ್ ಗೆ ಫ್ಲೈ ಓವರ್ ಕುಸಿತದ ಬಗ್ಗೆ ತಿಳಿಸಿದರು. ಆ ದಾರಿಯಲ್ಲಿ ಬರಲಿಲ್ಲ ಎಂದು ತಿಳಿದು ನೆಮ್ಮದಿಯಿಂದ ಮೋಹನ್ ಲಾಲ್ ನಿಟ್ಟುಸಿರುಬಿಟ್ಟರು.

ಸೆ.9ರಂದು ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು ಕೆಳಗಿದ್ದ ಜನ ಅಪಾಯಕ್ಕೆ ಸಿಲುಕಿದ್ದರು. ಈ ದುರಂತದಲ್ಲಿ ಇಬ್ಬರು ಸಾವನ್ನಪ್ಪಿ, ಹತ್ತಾರು ಮಂದಿ ಗಾಯಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X