Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ ಚಿನ್ನದ ಕಿರೀಟದ ಹಿಂದಿನ ಕಥೆ
ಸ್ಯಾಂಡಲ್ ವುಡ್ ನ ಸೇಲಬಲ್ ನಟರಲ್ಲಿ ದುನಿಯಾ ವಿಜಯ್ ಸಹ ಒಬ್ಬರು ಎಂಬುದು ಗಾಂಧಿನಗರಕ್ಕೆ ಗೊತ್ತಾಗಿ ಬಹಳ ವರ್ಷಗಳೇ ಆಗಿವೆ. ಇದೀಗ ತೆರೆಕಂಡಿರುವ ಅವರ 'ಜಾಕ್ಸನ್' ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ (ಜ.20) ದುನಿಯಾ ವಿಜಯ್ ಅವರು 40ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರಿಗೆ 'ಜಾಕ್ಸನ್' ಚಿತ್ರದ ನಿರ್ಮಾಪಕರು ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನದ ಕಿರೀಟ ತೊಡಿಸಿ ಸನ್ಮಾನಿಸಿದರು. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನಡೆದ ಈ ಕಾರ್ಯಕ್ರಮ ಅಭಿಮಾನಿಗಳ ಕಣ್ಣಿಗೆ ನಿಜಕ್ಕೂ ಹಬ್ಬದಂತಿತ್ತು. ಇಷ್ಟಕ್ಕೂ ವಿಜಿ ಅವರಿಗೆ ಚಿನ್ನದ ಕಿರೀಟ ಕೊಟ್ಟಿದ್ದು ಯಾಕೆ? ಎಂಬ ಪ್ರಶ್ನೆ ಬಹಳ ಮಂದಿಯ ತಲೆ ಕೊರೆಯುತ್ತಿತ್ತು. [ಜಾಕ್ಸನ್ ಚಿತ್ರ ವಿಮರ್ಶೆ]
ಇದಕ್ಕೆ ಕಾರಣವೂ ಇಲ್ಲದಿಲ್ಲ. 'ಜಾಕ್ಸನ್' ಚಿತ್ರದ ನಿರ್ಮಾಪಕರಾದ ಅನಿಲ್ ಹಾಗೂ ಸುಂದರ್ ಗೌಡ ಅವರು ವಿಜಿಗೆ ಆತ್ಮೀಯ ಗೆಳೆಯರು. ಈ ಚಿತ್ರಕ್ಕಾಗಿ ವಿಜಿ ನಯಾಪೈಸೆ ಸಂಭಾವನೆ ತೆಗೆದುಕೊಂಡಿರಲಿಲ್ಲ. ಹಾಗಾಗಿ ಚಿನ್ನದಂತ ಮನಸ್ಸಿನ ತಮ್ಮ ಗೆಳೆಯರ ಮುಡಿಗೆ ಚಿನ್ನದ ಕಿರೀಟ ಸಮರ್ಪಿಸಿ ಕೃತಾರ್ಥರಾದರು.
'ಜಾಕ್ಸನ್' ಚಿತ್ರದ ನಿರ್ಮಾಪಕರು ಕೊಟ್ಟ ಚಿನ್ನದ ಕಿರೀಟವನ್ನು ವಿಜಿ ತಮ್ಮ ಮುದ್ದು ಮಗಳಿಗೆ ಉಡುಗೊರೆಯಾಗಿ ನೀಡಿದರು. ಗೆಳೆಯ ದುಡ್ಡು ಕೇಳದಿದ್ದರೆ ಏನಂತೆ ಚಿನ್ನವನ್ನೇ ಉಡುಗೊರೆಯಾಗಿ ನೀಡಿದ್ದಾರೆ ವಿಜಿ ಗೆಳೆಯರು.
ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಬೆಳ್ಳಿ ಕಿರೀಟವನ್ನು ನಿರಾಕರಿಸಿದ್ದನ್ನು ಓದಿರುತ್ತೀರಾ. ಇದನ್ನು ಕರಗಿಸಿ ಬಂದ ಹಣದಲ್ಲಿ ಯಾವುದಾದರೂ ಅನಾಥಶ್ರಾಮಕ್ಕೋ, ಮಕ್ಕಳಿಗೋ ನೀಡಿ. ಕಿರೀಟ ತೊಡಲು ನಾನು ಮಹಾರಾಜನಲ್ಲ ಎಂದಿದ್ದರು. [ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?]
ದುನಿಯಾ ವಿಜಯ್ ಈಗ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ ಅವರ 'RX ಸೂರಿ' ಚಿತ್ರ ಶುರುವಾಗಿದೆ. ಇದರ ಜೊತೆಗೆ ಅವರ 25ನೇ ಚಿತ್ರವೂ ಪ್ರಕಟವಾಗಿದೆ. ರವಿ ಶ್ರೀವತ್ಸ ಆಕ್ಷನ್ ಕಟ್ ಹೇಳುತ್ತಿರುವ ಆ ಚಿತ್ರಕ್ಕೆ 'ಗವಿ' ಎಂದು ಹೆಸರಿಡಲಾಗಿದೆ. (ಏಜೆನ್ಸೀಸ್)