Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪನಂತೆ ಮಗಳು: ಇಲ್ಲಿದೆ ಯೋಗರಾಜ ಭಟ್ಟರ ಮಗಳು ಬರೆದಿರುವ ಕವಿತೆ
'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬುದು ಹಳೆಯ ಗಾದೆ. ಇದನ್ನೇ ತುಸು ಬದಲಾಯಿಸಿ ಅಪ್ಪನಂತೆ ಮಗಳು ಎಂದು ಮಾಡಿದರೆ ಯೋಗರಾಜ ಭಟ್ಟರು ಹಾಗೂ ಅವರ ಮಗಳಿಗೆ ಚೆನ್ನಾಗಿ ಹೊಂದಿಕೆ ಆಗುತ್ತದೆ.
ಯೋಗರಾಜ ಭಟ್ಟರು ತಮ್ಮ ಸುಂದರ ಸಿನಿಮಾಗಳ ಜೊತೆಗೆ ತಮ್ಮ ಲೇಖನಿಯಿಂದಲೂ ಖ್ಯಾತರು, ಪದಗಳು ಕಾರಂಜಿಯಂತೆ ಚಿಮ್ಮುತ್ತವೆ ಅವರ ಪೆನ್ನಿನಿಂದ. 'ಸೌಂದರ್ಯ ಸಮರ' ಬರೆದ ಭಟ್ಟರೇ 'ಕೈ ಕಚ್ಚ ಅಸಡ ಬಸಡ' ಸಹ ಬರೆದಿದ್ದಾರೆ. ಸ್ವತಃ ಕಾವ್ಯ ಪ್ರೇಮಿ ಭಟ್ಟರ ಪೆನ್ನಿಂದ ಪದಗಳ ಮುತ್ತು ಉದುರಿಸುತ್ತಾರೆ.
'ನನ್ನ ಹುಟ್ದಬ್ಬ, ಎಷ್ಟು ಕತ್ತೆ ವಯಸ್ಸಾಯ್ತೋ ಗೊತ್ತಿಲ್ಲ....', ಎಲ್ರಿಗೂ ಧನ್ಯವಾದ
ಯೋಗರಾಜ ಭಟ್ಟರ ಮಗಳೂ ಸಹ ಅಪ್ಪನ ಹಾದಿಯನ್ನೇ ಹಿಡಿದಿದ್ದಾಳೆ. ಇನ್ನೂ ಶಾಲೆ ಕಲಿಯುತ್ತಿರುವ ಪುಟಾಣಿ ಪುನರ್ವಸು ಅಪ್ಪನಿಂದ ಸ್ಪೂರ್ಥಿ ಪಡೆದು ಅಮ್ಮನ ಬಗ್ಗೆ ಮುದ್ದಾದ ಕವಿತೆ ಬರೆದಿದ್ದಾರೆ. ಅದನ್ನು ಭಟ್ಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಐದನೇ ತರಗತಿ ಓದುತ್ತಿರುವ ಪುನರ್ವಸು
ಐದನೇ ತರಗತಿ ಓದುತ್ತಿರುವ ಯೋಗರಾಜ ಭಟ್ಟರ ಮಗಳು ಪುನರ್ವಸು ವೈ ಭಟ್ 'ಅಮ್ಮ' ಮತ್ತು 'ಮಾತು' ಎಂಬ ಎರಡು ಕವನ ಬರೆದಿದ್ದು, 'ಜ್ಞಾನಮಂಥನ 2019-2020' ದಲ್ಲಿ ಎರಡೂ ಕವನಗಳು ಅಚ್ಚಾಗಿವೆ.
ಅಮ್ಮನ ಬಗ್ಗೆ ಪುನರ್ವಸು ಬರೆದಿರುವ ಕವನ
'ಗುರು
ನೀನು,
ಮಾತೃ
ನೀನು,
ಹಾಲಿನಲ್ಲಿ
ಸಕ್ಕರೆ
ನೀನು
ಗೆಜ್ಜೆಯಲ್ಲಿ
ನಾದ
ನೀನು
ಮಾತಿನಲ್ಲಿ
ಅಕ್ಕರೆ
ನೀನು
ನನ್ನೊಳಗಿನ
ಶಕ್ತಿಯಾಗಿ
ಸರ್ವಕಾಲಕ್ಕೂ
ನನ್ನೊಂದಿಗೆ
ಇರು,
ಅಮ್ಮ
ನನ್ನ
ಅಮ್ಮ'
ಇದು
ಪುನರ್ವಸು
ಬರೆದಿರುವ
'ಅಮ್ಮ'
ಕವಿತೆ.
'ಪರಮಾತ್ಮ'ನನ್ನು ಸ್ಮರಿಸಿದ ಯೋಗರಾಜ್ ಭಟ್-ಜಯಣ್ಣ ಫಿಲಂಸ್
ಪುನರ್ವಸು ಬರೆದಿರುವ ಮಾತು ಕವನ
'ಬಾಯಿ
ಬಿಟ್ಟರೆ
ಮಾತು
ಇಲ್ಲದಿದ್ದರೆ
ಮನಸ್ಸಿನ
ಮಾತು
ಇಲ್ಲದಿದ್ದರೆ
ಹೃದಯದ
ಮಾತು
ಇಲ್ಲದಿದ್ದರೆ
ಮೃಗಗಳ
ಮಾತು
ಮಾತಿನೊಳಗೊಂದು
ಕವನ
ಆ
ಕವನವೇ
ಮೌನ'
ಇದು
ಪುನರ್ವಸು
ಬರೆದಿರುವ
'ಮಾತು'
ಕವನ.
Recommended Video
ಚಿತ್ರ ಹಂಚಿಕೊಂಡಿರುವ ಯೋಗರಾಜ್ ಭಟ್
ಮಗಳ ಕವನಗಳ ಚಿತ್ರ ಹಂಚಿಕೊಂಡಿರುವ ಯೋಗರಾಜ್ ಭಟ್, 'ಮಕ್ಳು ಮಾಡ್ಬೇಡಿ , ದೊಡ್ಡೋರ್ ಆಗ್ತರೆ, ದೊಡ್ಡೋರ್ ಆಗ್ಬೇಡಿ , ಮಕ್ಳು ಬೈತರೆ' ಎಂದು ತಮ್ಮದೇ ಹಾಡಿನ ಸಾಲನ್ನು ಬರೆದುಕೊಂಡಿದ್ದಾರೆ.
ರಾಕ್ಲೈನ್ ಸುಧಾಕರ್ ಜೀವನ ಬದಲಿಸಿದ್ದು ರಾಕ್ಲೈನ್ ವೆಂಕಟೇಶ್ ಮತ್ತು ಯೋಗರಾಜ್ ಭಟ್