Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಗೆ ಮೋಸ ಮಾಡಿದರೇ ಅನುರಾಗ್ ಕಶ್ಯಪ್? ನಟಿ ಹೇಳಿದ್ದೇನು?
ನಟಿ ಮಂದಾನಾ ಕರೀಮಿ ಕೆಲವು ದಿನಗಳ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ನೀಡಿದ್ದ ಹೇಳಿಕೆ ಭಾರಿ ಸದ್ದು ಮಾಡಿತ್ತು.
ಕಂಗನಾ ರನೌತ್ ನಡೆಸಿಕೊಡುವ 'ಲಾಕ್ ಅಪ್' ಶೋನಲ್ಲಿ ಸ್ಪರ್ಧಿಯಾಗಿರುವ ನಟಿ ಮಂದಾನಾ ಕರೀಮಿ, ತಾವು ಬಾಲಿವುಡ್ನ ಜನಪ್ರಿಯ ನಿರ್ದೇಶಕನೊಬ್ಬನಿಂದ ಮೋಸ ಹೋಗಿದ್ದಾಗಿ ಹೇಳಿಕೊಂಡು ಕಣ್ಣೀರು ಹಾಕಿದ್ದರು.
ಶೋನಲ್ಲಿ ಎಲಿಮಿನೇಷನ್ ಹಂತಕ್ಕೆ ಬಂದವರು, ಎಲಿಮಿನೇಶನ್ನಿಂದ ತಪ್ಪಿಸಿಕೊಳ್ಳಲು ತಮ್ಮ ಜೀವನದ ಕರಾಳ ಸತ್ಯವನ್ನು ಬಹಿರಂಗಪಡಿಸಬೇಕಾಗಿರುತ್ತದೆ. ಈ ಹಂತದಲ್ಲಿ ನಟಿ ಮಂದಾನಾ ಕರೀಮಿ, ಬಾಲಿವುಡ್ನ ಖ್ಯಾತ ನಿರ್ದೇಶಕನೊಬ್ಬ ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಬಳಸಿಕೊಂಡ ಎಂದಿದ್ದರು. ಆತನಿಂದಾಗಿ ತಾವು ಗರ್ಭಿಣಿ ಆಗಿದ್ದಾಗಿಯೂ ಹೇಳಿದ್ದರು. ಇದನ್ನು ಕೇಳಿ ನಟಿ ಕಂಗನಾ ಸೇರಿದಂತೆ ಇತರ ಸ್ಪರ್ಧಿಗಳು ಸಹ ಕಣ್ಣೀರಾಗಿದ್ದರು.
ಖ್ಯಾತ ನಿರ್ದೇಶಕನೊಂದಿಗೆ ಅಕ್ರಮ ಸಂಬಂಧ: ಕಂಗನಾ ಎದುರು ಸತ್ಯ ಬಿಚ್ಚಿಟ್ಟ ನಟಿ!
ಮಂದಾನಾ ಕರೀಮಿ, ಶೋನಲ್ಲಿ ಈ ವಿಷಯ ಹೇಳಿದ ಬಳಿಕ ಆ ನಿರ್ದೇಶಕ ಯಾರು ಇರಬಹುದೆಂಬ ಚರ್ಚೆ ಹೊರಗೆ ಪ್ರಾರಂಭವಾಗಿತ್ತು, ಬಹಳಷ್ಟು ಜನ ಅದು ನಿರ್ದೇಶಕ ಅನುರಾಗ್ ಕಶ್ಯಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂದಾನಾ ಕರೀಮಿ, ಆ ನಿರ್ದೇಶಕ ಅನುರಾಗ್ ಕಶ್ಯಪ್ ಅಲ್ಲ ಎಂದಿದ್ದಾರೆ.
ಶೋನಿಂದ ಹೊರಗೆ ಬಂದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಂದಾನಾ ಕರೀಮಿ ಉಲ್ಟಾ ಹೊಡೆದಿದ್ದಾರೆ. ''ನಾನು ಭಾಗವಹಿಸಿದ್ದ ಶೋನ ಫಾರ್ಮ್ಯಾಟ್ ಹಾಗೆ ಇದ್ದುದ್ದರಿಂದ ನಾನು ಅಲ್ಲಿ ಹಾಗೆ ಮಾತನಾಡಿದೆ'' ಎಂದಿದ್ದಾರೆ.
''ಆ ಶೋನಲ್ಲಿ ನನ್ನ ಜೀವನದ ಸೀಕ್ರೆಟ್ ಅನ್ನು ಹಂಚಿಕೊಳ್ಳಬೇಕಾಗಿತ್ತು ಹಂಚಿಕೊಂಡೆ, ಆದರೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಬಂದಂತೆ ನಾನು ಅಲ್ಲಿ ಮಾತನಾಡಿರಲಿಲ್ಲ. ನನಗೆ ನಿರ್ದೇಶಕನೊಟ್ಟಿಗೆ ಸಂಬಂಧವಿದ್ದಿದ್ದು ನಿಜ ಆದರೆ ಆತ ನನ್ನ ಗೆಳೆಯನಾಗಿರಲಿಲ್ಲ'' ಎಂದಿದ್ದಾರೆ.
ನಿಮಗೆ ಮೋಸ ಮಾಡಿದ ನಿರ್ದೇಶಕ ಅನುರಾಗ್ ಕಶ್ಯಪ್ ಎನ್ನಲಾಗುತ್ತಿದೆಯಲ್ಲಾ? ಎಂಬ ಪ್ರಶ್ನೆಗೆ ಸಿಟ್ಟಿನಿಂದಲೇ ಉತ್ತರಿಸಿರುವ ಮಂದಾನಾ, ''ಇದು ಸುಳ್ಳು ಸುದ್ದಿ, ಕೆಲವು ಪತ್ರಕರ್ತರು ಬೇಜವಾಬ್ದಾರಿಯಿಂದ ಈ ರೀತಿಯ ಸುದ್ದಿಗಳನ್ನು ಹಬ್ಬಿಸಿದ್ದಾರೆ. ನಾನೂ ಹಾಗೂ ಅನುರಾಗ್ ಕಶ್ಯಪ್ ಈಗಲೂ ಉತ್ತಮ ಗೆಳೆಯರಾಗಿದ್ದೇವೆ. ನಾನು ಸಂಬಂಧ ಹೊಂದಿದ್ದ ವ್ಯಕ್ತಿ ನನ್ನ ಗೆಳೆಯನಾಗಿರಲಿಲ್ಲ'' ಎಂದಿರುವ ಮಂದಾನಾ, ಆ ನಿರ್ದೇಶಕನ ಹೆಸರು ಹೇಳಲು ನಿರಾಕರಿಸಿದ್ದಾರೆ.
'ನಾನು ಪತಿ ಗೌರವ್ ಗುಪ್ತಾನಿಂದ ದೂರವಾದಾಗ ಬಹಳ ಬೇಸರದಲ್ಲಿದ್ದೆ. ಆಗಲೇ ನನಗೆ ಬಾಲಿವುಡ್ನ ಜನಪ್ರಿಯ ನಿರ್ದೇಶಕನ ಪರಿಚಯವಾಯ್ತು. ನಾವಿಬ್ಬರೂ ಆಪ್ತವಾಗಿದ್ದೆವು. ಪರಸ್ಪರ ಸಂಬಂಧ ಹೊಂದಿದ್ದವು. ಒಮ್ಮೆ ನಾವು ತಂದೆ-ತಾಯಿ ಆಗುವ ಬಗ್ಗೆ ಯೋಚಿಸಿದೆವು. ಅಂತೆಯೇ ನಾನು ಗರ್ಭಿಣಿ ಆದೆ ಆದರೆ ಆತ ನನಗೆ ಮೋಸ ಮಾಡಿದ. ಆ ಬಾಲಿವುಡ್ ನಿರ್ದೇಶಕ ಮಹಿಳೆಯರ ಹಕ್ಕುಗಳ ಬಗ್ಗೆ ಹಲವು ಸಿನಿಮಾಗಳನ್ನು ತೆಗೆದಿದ್ದಾನೆ. ಬಾಲಿವುಡ್ ಸಿನಿ ಪ್ರೇಮಿಗಳ ಆದರ್ಶ ಅವನು. ಆದರೆ ನನಗೆ ಹೀಗೆ ಮಾಡಿದ'' ಎಂದು ಹೇಳುತ್ತಾ ಮಂದಾನಾ ಕಣ್ಣೀರು ಹಾಕಿದ್ದರು. ಮಂದಾನಾ ಕತೆ ಕೇಳಿ ನಟಿ ಕಂಗನಾ ಸಹ ಕಣ್ಣೀರು ಹಾಕಿದ್ದರು.