twitter
    For Quick Alerts
    ALLOW NOTIFICATIONS  
    For Daily Alerts

    ಪ್ರಳಯ ತಡೆಗೆ ಬೃಹತ್ ಬ್ರಹ್ಮಾಂಡ ಬಳಗದಿಂದ ದೀಪೋತ್ಸವ

    By Rajendra
    |

    Narendra Babu Sharma
    ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬೃಹತ್ ಬ್ರಹ್ಮಾಂಡ'ದ ಮೂಲಕ ರಾಜ್ಯದ ಜನತೆಗೆ ನಿತ್ಯ ಜೀವನದ ಸಾಂಸಾರಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪ್ರತಿ ದಿನವೂ ಭೋದಿಸುತ್ತಿರುವ ನರೇಂದ್ರಬಾಬು ಶರ್ಮ ಅವರು ಲೋಕದ ಉಳಿವಿಗಾಗಿ ಬೃಹತ್ ಪ್ರಮಾಣದ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

    ಜಗತ್ತು ಪ್ರಳಯದ ಭೀತಿ ಅನುಭವಿಸುತ್ತಿದ್ದು ಇದರಿಂದ ಪಾರಾಗುವ ಸಲುವಾಗಿ ಮಂಗಳವಾರದ(ಫೆ.22) ಶುಭ ದಿವಸದಂದು ಸಂಜೆ 7 ರಿಂದ 7.30 ಗಂಟೆಯವರೆಗೂ ರಾಜ್ಯದಾದ್ಯಂತ ದೀಪೋತ್ಸವ ನೆರವೇರಿಸಿದರೆ ಜಗತ್ತಿಗೆ ಶ್ರೇಯಸ್ಸು ಲಭಿಸಲಿದೆ ಎಂಬ ದೃಷ್ಟಿಯಿಂದ ಈ ಕಾರ್ಯ ನೆರವೇರಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

    ಈ ಸಲುವಾಗಿ ಅವರು ಈಗಾಗಲೇ ಅವರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದು ದೀಪೋತ್ಸವ ಕುರಿತಾದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಪ್ರಮಾಣದ ದೀಪೋತ್ಸವ ನೆರವೇರಲಿದೆ. ಲೋಕ ಕಲ್ಯಾಣದ ದೂರದೃಷ್ಠಿ ಹೊಂದಿರುವ ದೀಪೋತ್ಸವದಲ್ಲಿ ರಾಜ್ಯದ ಜನತೆ ಅಪಾರ ಪ್ರಮಾಣದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಜೀ ಕನ್ನಡದ ಪ್ರಕಟಣೆ ತಿಳಿಸಿದೆ.

    ಬೆಂಗಳೂರಿನಲ್ಲಿ ದೀಪೋತ್ಸವ ನಡೆಯುವ ಸ್ಥಳಗಳ ವಿವರ ಇಂತಿದೆ. ಶ್ರೀ ಬಂಡಿ ಮಹಾಕಾಳಿ ದೇವಸ್ಥಾನ ಕೆಂಪೇಗೌಡ ನಗರ; ಶ್ರೀ ಮುಕ್ತಿನಾಗ ದೇವಸ್ಥಾನ, ರಾಮೋಹಳ್ಳಿ; ಶ್ರೀ ಗಂಗಮ್ಮ ದೇವಸ್ಥಾನ, ಮಲ್ಲೇಶ್ವರಂ; ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಅಲಸೂರು; ಶ್ರೀ ಬನಶಂಕರಿ ದೇವಸ್ಥಾನ, ಬನಶಂಕರಿ. ಒಟ್ಟು 27 ಜಿಲ್ಲೆಗಳಲ್ಲಿ ದೀಪೋತ್ಸವ ನಡೆಯಲಿದೆ.

    English summary
    Zee Kannada's Bruhat Brahamanda initiative "Deepotsava" at allover Karnataka on 22nd February 2011at 7 to 7.30 pm held in Bangalore. Renowned astrologer Narendra Babu Sharma to conduct the Deepotsava all over Karnataka.
    Saturday, February 26, 2011, 13:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X