ಕೌಶಿಕ್ ವಿಚಾರ ಈಗ ರಟ್ಟು, ತಲೆಕೆಳಗಾಗುತ್ತಾ ಚಂದ್ರಿಕಾ ಪ್ಲಾನ್ ?
Recommended Video

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪ್ರೇಕ್ಷಕರಲ್ಲಿ ಬಾರಿ ಕುತೂಹಲವನ್ನ ಕಾಪಾಡಿಕೊಂಡು ಹೋಗಿದ್ದ ವಿಚಾರ ಕಿಶೋರ್ ಸಹೋದರ ಕೌಶಿಕ್ ಮನೆಯಲ್ಲೇ ಇದ್ದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಅದನ್ನ ಚಂದ್ರಿಕಾ ಕಾಪಾಡಿಕೊಂಡು ಬರುತ್ತಿದ್ದದ್ದು. ಆದರೆ ಈಗ ಆ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಾಕಷ್ಟು ದಿನಗಳಿಂದ ಕಾಪಾಡಿಕೊಂಡು ಬಂದ ಸತ್ಯ ರಟ್ಟಾಗಿದೆ.
ಅಗ್ನಿಸಾಕ್ಷಿ ಧಾರಾವಾಹಿಯಲ್ಲಿನ ತನು, ಚಂದ್ರಿಕಾ ಏನೇ ಪ್ಲಾನ್ ಮಾಡಿದ್ರು ಕೂಡ ಅದನ್ನ ಹೇಗಾದ್ರು ಮಾಡಿ ಕಂಡಿ ಹಿಡಿಯುತ್ತಿದ್ದಾಳೆ. ಅದೇ ರೀತಿ ಅಂಜಲಿ ಮತ್ತು ತೇಜಸ್ ಮದುವೆ ವಿಚಾರ ಚಂದ್ರಿಕಾ ಯಾಕೆ ಪ್ರಸ್ತಾಪ ಮಾಡಿದ್ದಾಳೆ ಅನ್ನುವುದನ್ನ ಕಂಡು ಹಿಡಿದಿದ್ದಾಳೆ.
ಸದ್ಯ ತನು ಈ ಸತ್ಯವನ್ನ ತನ್ನ ಬಳಿ ಇಟ್ಟುಕೊಳ್ಳುವುದಿಲ್ಲ ಎನ್ನುವುದನ್ನ ತಿಳಿದ ಚಂದ್ರಿಕಾ ತನುಗೆ ಜೀವ ಬೆದರಿಕೆ ಹಾಕುತ್ತಿದ್ದಾಳೆ. ಕಳ್ಳ ಏನೇ ತಪ್ಪು ಮಾಡಿದರು ಒಂದು ಕ್ಲೂ ಬಿಟ್ಟಿರುತ್ತಾನೆ ಎನ್ನುವಂತೆ ಭಯ ಪಡಿಸುವ ಆತುರದಲ್ಲಿ ಚಂದ್ರಿಕಾ, ತೇಜಸ್ ಮತ್ತು ಕೌಶಿಕ್ ಇಬ್ಬರು ಒಂದೇ ಎನ್ನುವ ಸತ್ಯವನ್ನ ಬಾಯಿಬಿಟ್ಟಿದ್ದಾಳೆ.

ಸತ್ಯ ತಿಳಿದುಕೊಂಡಿರುವ ತನು ಈಗ ಚಂದ್ರಿಕಾಳನ್ನ ಎದುರಿಸುತ್ತಾಳಾ, ಅಥವಾ ಪ್ರಾಣ ಭಯಕ್ಕೆ ಯಾರಿಗೂ ಈ ವಿಚಾರ ಹೇಳದೆ ಸುಮ್ಮನಾಗುತ್ತಾಳಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.


Click it and Unblock the Notifications











