Just In
- 41 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 1 hr ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 2 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 3 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- News
13 ವರ್ಷದ ಬಾಲಕಿಯನ್ನು ಎರಡು ಬಾರಿ ಅಪಹರಿಸಿ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ
- Sports
ಭಾರತ vs ಆಸ್ಟ್ರೇಲಿಯಾ: ಬ್ರಿಸ್ಬೇನ್ನಲ್ಲಿ ವಾಖಲೆಯ ಜೊತೆಯಾಟವಾಡಿದ ಶಾರ್ದೂಲ್- ಸುಂದರ್
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎಲ್ಲಾ ಕಿತ್ತಾಟಗಳ ಕೇಂದ್ರ ಬಿಂದು 'ಅಡುಗೆ ಮನೆ'.!
ಬರೀ ಊಟದ ವಿಚಾರಕ್ಕೆ ಸ್ಪರ್ಧಿಗಳು ಜಗಳ ಆಡುತ್ತಿರುವುದು ಒಂದ್ಕಡೆ ಆದರೆ... ಪದೇ ಪದೇ ಗ್ಯಾಸ್ ಆಫ್ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಸ್ಪರ್ಧಿಗಳು ಇನ್ನೊಂದು ಕಡೆ.
ಈಗಾಗಲೇ ಅನೇಕ ಬಾರಿ ಗ್ಯಾಸ್ ಆಫ್ ಮಾಡದ ಕಾರಣ ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ಇಷ್ಟಾದರೂ, 'ಬಿಗ್ ಬಾಸ್' ಸ್ಪರ್ಧಿಗಳು ಎಚ್ಚರಗೊಂಡಿಲ್ಲ.
ಟಾಸ್ಕ್ ಗಡಿಬಿಡಿಯಲ್ಲಿ ಸಿಹಿ ಕಹಿ ಚಂದ್ರು ಗ್ಯಾಸ್ ಆಫ್ ಮಾಡದ ಕಾರಣ, ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ತಮ್ಮಿಂದ ಈ ತಪ್ಪು ಪುನರಾವರ್ತಿತವಾದ ಕಾರಣ ''ಇನ್ಮೇಲೆ ಅಡುಗೆ ಮಾಡಲ್ಲ'' ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. ಮುಂದೆ ಓದಿರಿ...

ಸಿಹಿ ಕಹಿ ಚಂದ್ರು ಚಪಾತಿ ಮಾಡುತ್ತಿದ್ದಾಗ....
ರಾತ್ರಿ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಶುರು ಆಯ್ತು. ಚಪಾತಿ ಮಾಡುತ್ತಿದ್ದ ಸಿಹಿ ಕಹಿ ಚಂದ್ರು, ಗ್ಯಾಸ್ ಆಫ್ ಮಾಡದೆ ಗಾರ್ಡನ್ ಏರಿಯಾಗೆ ತೆರಳಿದರು.
'ಬಿಗ್ ಬಾಸ್' ಮುಂದೆ ತಲೆ ತಗ್ಗಿಸಿದ ಸಿಹಿಕಹಿ ಚಂದ್ರು.! ಇದು ಅವಮಾನದ ವಿಚಾರ.!

ಜೆಕೆ, ಜಗನ್ ಗೆ ಸಿಟ್ಟು
ಮತ್ತೊಂದು ಬಾರಿ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿದ ಕೂಡಲೆ, ''ಈ ಕಡೆ ತಿನ್ನುವುದಕ್ಕೂ ಇಲ್ಲ, ಆ ಕಡೆ ಗ್ಯಾಸ್ ಕೂಡ ಇಲ್ಲ'' ಎಂದು ಜಗನ್ನಾಥ್ ಸಿಟ್ಟಾದರು. ಇತ್ತ ಜೆಕೆ, ''ಮನೆಯಲ್ಲೂ ನಾವು ಹೀಗೆ ಮಾಡಲ್ಲ'' ಎನ್ನುತ್ತ ತಮ್ಮ ಅಸಮಾಧಾನವನ್ನ ಹೊರ ಹಾಕಿದರು.

ಇನ್ಮುಂದೆ ಅಡುಗೆ ಮಾಡಲ್ಲ
''ಟಾಸ್ಕ್ ಶುರು ಆಗುವ ಗಡಿಬಿಡಿಯಲ್ಲಿ ತಪ್ಪು ಮಾಡಿಬಿಟ್ಟೆ. ಮರೆವು ಜಾಸ್ತಿ ಆಗುತ್ತಿದೆ ಅನ್ಸುತ್ತೆ. ನಾನು ಇನ್ನೂ ಅಡುಗೆ ಮಾಡಲ್ಲ. ದಯವಿಟ್ಟು ನನ್ನನ್ನ ಕ್ಷಮಿಸಿ. ನೀವು ನನಗೆ ಏನು ಶಿಕ್ಷೆ ಕೊಟ್ಟರೂ, ಅನುಭವಿಸಲು ನಾನು ರೆಡಿ'' ಎಂದು ಕ್ಯಾಮರಾ ಮುಂದೆ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.

ನಿಮ್ಮ ಅಭಿಪ್ರಾಯ ಏನು.?
'ಬಿಗ್ ಬಾಸ್' ಮನೆಯ ಗ್ಯಾಸ್ ಪ್ರಾಬ್ಲಂ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....