Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇನ್ಮುಂದೆ 'ಬಿಗ್ ಬಾಸ್' ಮನೆಯಲ್ಲಿ ಸಿಹಿ ಕಹಿ ಚಂದ್ರು ಅಡುಗೆ ಮಾಡಲ್ವಂತೆ.!
Recommended Video
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಎಲ್ಲಾ ಕಿತ್ತಾಟಗಳ ಕೇಂದ್ರ ಬಿಂದು 'ಅಡುಗೆ ಮನೆ'.!
ಬರೀ ಊಟದ ವಿಚಾರಕ್ಕೆ ಸ್ಪರ್ಧಿಗಳು ಜಗಳ ಆಡುತ್ತಿರುವುದು ಒಂದ್ಕಡೆ ಆದರೆ... ಪದೇ ಪದೇ ಗ್ಯಾಸ್ ಆಫ್ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಸ್ಪರ್ಧಿಗಳು ಇನ್ನೊಂದು ಕಡೆ.
ಈಗಾಗಲೇ ಅನೇಕ ಬಾರಿ ಗ್ಯಾಸ್ ಆಫ್ ಮಾಡದ ಕಾರಣ ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ಇಷ್ಟಾದರೂ, 'ಬಿಗ್ ಬಾಸ್' ಸ್ಪರ್ಧಿಗಳು ಎಚ್ಚರಗೊಂಡಿಲ್ಲ.
ಟಾಸ್ಕ್ ಗಡಿಬಿಡಿಯಲ್ಲಿ ಸಿಹಿ ಕಹಿ ಚಂದ್ರು ಗ್ಯಾಸ್ ಆಫ್ ಮಾಡದ ಕಾರಣ, ಅಡುಗೆ ಅನಿಲ ಪೂರೈಕೆಯನ್ನ 'ಬಿಗ್ ಬಾಸ್' ಸ್ಥಗಿತಗೊಳಿಸಿದ್ದರು. ತಮ್ಮಿಂದ ಈ ತಪ್ಪು ಪುನರಾವರ್ತಿತವಾದ ಕಾರಣ ''ಇನ್ಮೇಲೆ ಅಡುಗೆ ಮಾಡಲ್ಲ'' ಎಂದು ಸಿಹಿ ಕಹಿ ಚಂದ್ರು ಹೇಳಿದ್ದಾರೆ. ಮುಂದೆ ಓದಿರಿ...
ಸಿಹಿ ಕಹಿ ಚಂದ್ರು ಚಪಾತಿ ಮಾಡುತ್ತಿದ್ದಾಗ....
ರಾತ್ರಿ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಶುರು ಆಯ್ತು. ಚಪಾತಿ ಮಾಡುತ್ತಿದ್ದ ಸಿಹಿ ಕಹಿ ಚಂದ್ರು, ಗ್ಯಾಸ್ ಆಫ್ ಮಾಡದೆ ಗಾರ್ಡನ್ ಏರಿಯಾಗೆ ತೆರಳಿದರು.
'ಬಿಗ್ ಬಾಸ್' ಮುಂದೆ ತಲೆ ತಗ್ಗಿಸಿದ ಸಿಹಿಕಹಿ ಚಂದ್ರು.! ಇದು ಅವಮಾನದ ವಿಚಾರ.!
ಜೆಕೆ, ಜಗನ್ ಗೆ ಸಿಟ್ಟು
ಮತ್ತೊಂದು ಬಾರಿ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಂಡಿದೆ ಎಂದು ತಿಳಿದ ಕೂಡಲೆ, ''ಈ ಕಡೆ ತಿನ್ನುವುದಕ್ಕೂ ಇಲ್ಲ, ಆ ಕಡೆ ಗ್ಯಾಸ್ ಕೂಡ ಇಲ್ಲ'' ಎಂದು ಜಗನ್ನಾಥ್ ಸಿಟ್ಟಾದರು. ಇತ್ತ ಜೆಕೆ, ''ಮನೆಯಲ್ಲೂ ನಾವು ಹೀಗೆ ಮಾಡಲ್ಲ'' ಎನ್ನುತ್ತ ತಮ್ಮ ಅಸಮಾಧಾನವನ್ನ ಹೊರ ಹಾಕಿದರು.
ಇನ್ಮುಂದೆ ಅಡುಗೆ ಮಾಡಲ್ಲ
''ಟಾಸ್ಕ್ ಶುರು ಆಗುವ ಗಡಿಬಿಡಿಯಲ್ಲಿ ತಪ್ಪು ಮಾಡಿಬಿಟ್ಟೆ. ಮರೆವು ಜಾಸ್ತಿ ಆಗುತ್ತಿದೆ ಅನ್ಸುತ್ತೆ. ನಾನು ಇನ್ನೂ ಅಡುಗೆ ಮಾಡಲ್ಲ. ದಯವಿಟ್ಟು ನನ್ನನ್ನ ಕ್ಷಮಿಸಿ. ನೀವು ನನಗೆ ಏನು ಶಿಕ್ಷೆ ಕೊಟ್ಟರೂ, ಅನುಭವಿಸಲು ನಾನು ರೆಡಿ'' ಎಂದು ಕ್ಯಾಮರಾ ಮುಂದೆ ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.
ನಿಮ್ಮ ಅಭಿಪ್ರಾಯ ಏನು.?
'ಬಿಗ್ ಬಾಸ್' ಮನೆಯ ಗ್ಯಾಸ್ ಪ್ರಾಬ್ಲಂ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ, ಕಾಮೆಂಟ್ ಮಾಡಿ....