Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಟಿಎನ್ ಸೀತಾರಾಂ ಜೊತೆ ಕೆಲಸ ಮಾಡುವ ಕೌಶಲ್ಯ ನಿಮ್ಮಲ್ಲಿದೆಯೆ?
ಕನ್ನಡ ಟಿವಿ ಧಾರಾವಾಹಿ ವೀಕ್ಷಕರ ಪಾಲಿನ ಸ್ಟಾರ್ ನಿರ್ದೇಶಕ ಟಿಎನ್ ಸೀತಾರಾಂ ಅವರ ಧಾರಾವಾಹಿ ಬರುತ್ತದೆಂದರೆ ನೋಡುಗರ ಕಣ್ಣು ಕಿವಿಗಳು ಅಗಲವಾಗುತ್ತವೆ, ಮನಸ್ಸು ಚಟಪಡಿಸುತ್ತದೆ. ಮಾಯಾಮೃಗ, ಮುಕ್ತ, ಮುಕ್ತ ಮುಕ್ತ ಮುಂತಾದ ಧಾರಾವಾಹಿಗಳ ಮೂಲಕ ಆ ಪರಿ ಹುಚ್ಚು ಹಿಡಿಸಿದ್ದಾರೆ ಸೀತಾರಾಂ ತಲಗವಾರ್, ಗೌರಿಬಿದನೂರು.
ಅವರ ಸೀರಿಯಲ್ಲು ನೋಡುವುದು ನೋಡುಗರ ಪಾಲಿನ ರಸಗವಳವಾದರೆ, ಅವರೊಂದಿಗೆ ಕೆಲಸ ಮಾಡುವುದು ಹಲವಾರು ಕಲಾವಿದರ ಪಾಲಿಗೆ ಪ್ರತಿಷ್ಠೆಯ ಸಂಗತಿ. ಕಲಾವಿದರಿಂದ, ತಂತ್ರಜ್ಞರಿಂದ ಅಷ್ಟು ಶಿಸ್ತುಬದ್ಧವಾಗಿ ಕೆಲಸ ತೆಗೆಸುವುದನ್ನು ಸೀತಾರಾಂ ಬಲ್ಲರು.
ಈಗ ಅವರೊಂದಿಗೆ ಧಾರಾವಾಹಿಯಲ್ಲಿ ಕನ್ನಡವನ್ನು ಅವರಿಗಿಷ್ಟವಾಗುವಂತೆ ಬರೆಯಬಲ್ಲ ನಿರ್ದೇಶಕರಿಗೆ ಅದ್ಭುತ ಅವಕಾಶವನ್ನು ಸೀತಾರಾಂ ಅವರು ದೊರಕಿಸಿಕೊಟ್ಟಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ಕಿನಲ್ಲಿ ಸ್ಟೇಟಸ್ ಹಾಕಿದ್ದಾರೆ. ನಾಮುಂದು ತಾಮುಂದು ಎಂದು ಮುನ್ನುಗ್ಗುವ ಮುನ್ನ ಅವರು ಕೆಲವೊಂದು ಷರತ್ತುಗಳನ್ನು ಒಡ್ಡಿದ್ದಾರೆ.
ಆ ಷರತ್ತುಗಳು ನಿಮಗೆ ಒಪ್ಪಿಗೆಯಾದರೆ, ಸೀತಾರಾಂ ಅವರು ಬಯಸುವ ಅರ್ಹತೆಗಳು ನಿಮ್ಮಲ್ಲಿ ಇದ್ದಲ್ಲಿ, ಕನ್ನಡದ ಬಗ್ಗೆ ಅಪಾರವಾದ ಪ್ರೀತಿ ಇದ್ದರೆ, ಕವನಗಳನ್ನು ಕರತಲಾಮಲಕ ಮಾಡಿಕೊಂಡಿದ್ದರೆ, ಕೋರ್ಟು ಕಚೇರಿಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿದ್ದರೆ ಒಂದು ಕೈ ನೋಡಿಯೇಬಿಡಿ. ಆಲ್ ದಿ ಬೆಸ್ಟ್. ಕೆಳಗಿದೆ ನೋಡಿ ಸೀತಾರಾಂ ಅವರ ಸ್ಟೇಟಸ್ಸು. [ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್]
***
ನನ್ನ
ಜತೆ
ಧಾರಾವಾಹಿಗಳಲ್ಲಿ
ನಿರ್ದೇಶನ
ಮತ್ತು
ಬರವಣಿಗೆಯಲ್ಲಿ
ಕೆಲಸ
ಮಾಡಲು
ಆಸಕ್ತಿ
ಇರುವವರು
ಫೇಸ್ಬುಕ್
ನ
ನನ್ನ
ಇನ್ಬಾಕ್ಸ್
ಮೂಲಕ
ನನ್ನನ್ನು
ದಯವಿಟ್ಟು
ಸ೦ಪರ್ಕಿಸಿ...
ಆಸಕ್ತಿ
ಇದ್ದರೆ
ಮಾತ್ರ
ಸಾಕಾಗಲಾರದು...
1)
ಸಾಹಿತ್ಯದಲ್ಲಿ
ಆಸಕ್ತಿ
ಮತ್ತು
ಕನ್ನಡದ
ಬಗ್ಗೆ
ಪ್ರೀತಿ
ಇರಬೇಕು.
ಕನ್ನಡದಲ್ಲಿ
ಮಾತನಾಡಲು
ಮತ್ತು
ಬರೆಯಲು
ಬರಬೇಕು.
2)
ಕಾನೂನಿನ
ಸಾಮಾನ್ಯ
ಜ್ಞಾನ
ಇರಬೇಕು.
ಕಾನೂನು
ಪದವಿಧರರಾದರೆ
ಅತ್ಯುತ್ತಮ.
3)
ಇ೦ಟರ್ನೆಟ್
ಮೂಲಕ
ಮಾಹಿತಿ
ಕಲೆ
ಹಾಕುವ
ಜ್ಞಾನ
ಅತ್ಯವಶ್ಯ.
ಮತ್ತಷ್ಟು ಸ೦ಗತಿಗಳು (ಕಂಡಿಷನ್ನುಗಳು)
1)
ನಮ್ಮ
ಕಥೆಗಳನ್ನು
ಬೇರೆಯವರ
ಬಳಿ
ಹೋಗಿ
ಹೇಳುವ
ಅಭ್ಯಾಸ
ಇರದಿದ್ದರೆ
ಉತ್ತಮ.
2)
ಪಾತ್ರಗಳನ್ನು
ಮಾಡುವ
ಗುಪ್ತ
ಆಸೆಯಿಟ್ಟುಕೊ೦ಡು,
ಬರಹಗಾರರ
ವೇಷದಲ್ಲಿ
ಬರುವವರಿಗೆ
ಇಲ್ಲಿ
ಪ್ರೋತ್ಸಾಹವಿಲ್ಲ.
3)
ನಿರುದ್ಯೋಗಿಗಳಿಗೆ
ಆದ್ಯತೆ...
(ಮನೆಯಿ೦ದ
ಹೇಳದೆ
ಓಡಿ
ಬ೦ದವರು
ತ೦ದೆ,
ತಾಯಿಯರ
ಅನುಮತಿ
ಪಡೆದು
ಬ೦ದರೆ
ಉತ್ತಮ)
4)
ನನ್ನ
ವಿರುದ್ಧ
ಗೊಣಗುವುದಾದರೆ
ಮನಸ್ಸಿನಲ್ಲಿ
ಗೊಣಗಿಕೊಳ್ಳುವುದನ್ನು
ಕಲಿಯಬೇಕು.
5)
ಸ೦ಬಳ
ನಿಶ್ಚಿತ...
ತಾರೀಕು
ಅನಿಶ್ಚಿತ
.......ಇತ್ಯಾದಿ.
[ಅಮ್ಮನ
ದಿನಕ್ಕಾಗಿ
ಟಿಎನ್
ಸೀತಾರಾಂ
ನೆನಪುಗಳು]