Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲಿದೆ 'ಬ್ರಹ್ಮಾಸ್ತ್ರ'
ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿಯ ವಿಭಿನ್ನ ಪ್ರೇಮಕಥೆಯನ್ನ ವೀಕ್ಷಕರ ಮುಂದಿಟ್ಟು ಜನಮೆಚ್ಚುಗೆ ಗಳಿಸಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ಬಣ್ಣದ ರಂಗು ಮೂಡುತ್ತಿದೆ. ಪ್ರೀತಿಯನ್ನ ಆರಾಧಿಸೋ ಕುಟುಂಬ ಒಂದೆಡೆಯಾದರೆ ಪ್ರೀತಿಯನ್ನ ದ್ವೇಷಿಸೋ ಕುಟುಂಬ ಮತ್ತೊಂದೆಡೆ.
ಹೀಗಾಗಿ ಲಾಂಗು ಮಚ್ಚು ಜಗಳದ ನಡುವೆ ಈಗಷ್ಟೇ ಕಥೆಯಲ್ಲಿ ನಾಯಕ ಸಂತು ಮೇಲೆ ನಾಯಕಿ ಶಿವರಂಜಿನಿಗೆ ಪ್ರೀತಿ ಮೂಡಿದೆ. ಈ ಪ್ರೀತಿಗೆ ಬಣ್ಣದ ಲೇಪನ ಕೊಟ್ಟು ಇನ್ನಷ್ಟು ರಂಗು ನೀಡುತ್ತಿದೆ ಬ್ರಹ್ಮಾಸ್ತ್ರ ತಂಡ.
ಊರ ಹೋಳಿ ಆಚರಣೆಯಲ್ಲಿ ನಾಯಕನ ಕುಟುಂಬ ಸೇರುವ ನಿರ್ಧಾರ ಮಾಡಿದಾಗ ಅದೇ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಶಿವರಂಜಿನಿಗೆ ತಾನೂ ಹಬ್ಬ ಆಡಬೇಕೆಂಬ ಮನಸ್ಸಾಗುತ್ತದೆ. ಅವಳಿಗೆ ನಿರಾಸೆ ಮಾಡಲು ಇಷ್ಟಪಡದ ಸಂತು ಶಿವರಂಜಿನಿಯನ್ನ ಕದ್ದು ಮುಚ್ಚಿ ಕರೆದುಕೊಂಡು ಬರುತ್ತಾನೆ.
ಆದರೆ ಅವಳನ್ನ ನೋಡಿದ ಅಲಮೇಲಮ್ಮನ ಕಡೆಯವರು ಬಣ್ಣದ ಓಕುಳಿಯನ್ನ ರಕ್ತದ ಓಕುಳಿ ಮಾಡುವುದಾಗಿ ಆಕ್ರಮಣ ಮಾಡುತ್ತಾರೆ. ಈ ನಡುವೆ ವೀರಪ್ರತಾಪ ರೆಡ್ಡಿಗೆ ತನ್ನ ಅಕ್ಕನ ಮಗಳು ಕೃಷ್ಣವೇಣಿ ಮನೆಯಲ್ಲೇ ಶಿವರಂಜಿನಿ ಇರೋ ಸತ್ಯ ಗೊತ್ತಾಗುತ್ತಾ ಕಾದುನೋಡಬೇಕು.
ಕಥೆಗೆ ಅನುಗುಣವಾಗಿ ಚಿತ್ರೀಕರಿಸಿ ಎಲ್ಲೂ ಬೋರ್ ಹೊಡೆಯದಂತೆ ಪ್ರತಿ ಫ್ರೇಮ್ ಸಹ ಕಲರ್ ಫುಲ್ ಆಗಿ ಚಿತ್ರೀಕರಿಸಿರುವ ತೃಪ್ತಿಯಲ್ಲಿದ್ದಾರೆ ನಿರ್ದೇಶಕ ತಿಲಕ್ ಅವರು. ರವಿ ಆರ್ ಗರಣಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯ ಹೋಳಿ ಸ್ಪೆಷಲ್ ಎಪಿಸೋಡ್ ಶುಕ್ರವಾರ ಮತ್ತು ಸೋಮವಾರ ರಾತ್ರಿ 8ಕ್ಕೆ ನಿಮ್ಮ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.