Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಬರಿಗೊಂಡ ಅಂಜಲಿ: ಏನಾಗುವುದು ಇಂದು 'ಕಣ್ಮಣಿ'ಯಲ್ಲಿ.?
ಕಿಶನ್ ಗೆ ಬಂದ ಪ್ರಾಜೆಕ್ಟ್ ಡಿಕೆ ಕಂಪನಿಯದ್ದು ಎಂದು ತಿಳಿದ ಅಂಜಲಿ ಗಾಬರಿಯಾಗುತ್ತಾಳೆ. ಡಿಕೆ 'ಕಾವ್ಯ ಗರ್ಮೆಂಟ್ಸ್' ಅಂತ ಹೆಸರಿಟ್ಟು ಅದರ ಮೊದಲ ಆಮಂತ್ರಣ ಪತ್ರವನ್ನ ಅವಳಿಗೆ ಕೊಟ್ಟ ಹಿಂದಿನ ಘಟನೆಗೆ ಜಾರುತ್ತಾಳೆ. ಕಿಶನ್ ಅವಳನ್ನ ಎಚ್ಚರಿಸಿ ಪ್ರಾಜೆಕ್ಟ್ ಬಗ್ಗೆ ಮಾತನಾಡಿದಾಗ ಅವನಿಗೆ ಉತ್ತರ ಕೊಡದೆ ಹೋಗುತ್ತಾಳೆ. ಅಂಜಲಿ ನಡವಳಿಕೆ ನೋಡಿ ಕಿಶನ್ ಗೆ ಗೊಂದಲ ಶುರು ಆಗುತ್ತೆ.
ಡಿಕೆ ತನಗಾಗಿ ಒಡವೆ ಮಾಡಿಸಿ, ತನಗೆ ಹಿಂಸೆ ಮಾಡಿ ತೊಡಿಸಿದ್ದನ್ನು ನೆನಪಿಸಿಕೊಂಡು ನಿದ್ದೆಯಿಂದ ಎದ್ದು ಕುಳಿತುಕೊಳ್ಳುತ್ತಾಳೆ. ಆಗ ಭಾವನ ಅವಳಿಗೆ ಸಮಾಧಾನ ಮಾಡುತ್ತಾಳೆ. 'ಕಾವ್ಯ ಗಾರ್ಮೆಂಟ್ಸ್' ಬಗ್ಗೆ ಗೂಗಲ್ ಸರ್ಚ್ ಮಾಡ್ತಾಳೆ ಅಂಜಲಿ, ಅದರ ಒಡೆಯ ಡಿಕೆ ಅನ್ನುವುದನ್ನ ಪಕ್ಕ ಮಾಡಿಕೊಳ್ತಾಳೆ.
ಡಿಕೆ ಕೊಟ್ಟ ಚೆಕ್ ಅವನಿಗೆ ತಲುಪಿಸಲು ಮತ್ತು ಅವನಿಂದ ಪಾರಾಗಲು ಜಗದೀಶ್ ಸನ್ಯಾಸಿ ವೇಷ ಹಾಕಿಕೊಳ್ಳುತ್ತಾನೆ. ಆ ವೇಷದಲ್ಲಿ ತಂದೆಯೂ ಕೂಡ ಅವನನ್ನ ಗುರುತು ಹಿಡಿಯದೇ ಹೋದಾಗ, ಇನ್ನೂ ಡಿಕೆ ಕಂಡು ಹಿಡಿಯೋಕೆ ಸಾಧ್ಯಾನೇ ಇಲ್ಲ ಅಂತ ಖುಷಿ ಪಡುತ್ತಾನೆ.
'ಕಣ್ಮಣಿ' ಧಾರಾವಾಹಿಯಲ್ಲಿ ಇಂದು ಅಂಜಲಿಗೆ ಕಾದಿದೆ ಅಚ್ಚರಿ.!
ಇತ್ತ ಡಿಕೆ ಕಾವ್ಯಾಳಿಗೆ ಒಡವೆ ತಂದದ್ದು, ಅವಳಿಗೆ ತೊಡಸಿ, ಅವಳ ಸೌಂದರ್ಯ ನೋಡಿ ಖುಷಿ ಪಟ್ಟಿದ್ದನ್ನ ನೆನಪಿಕೊಳ್ಳುತ್ತ, ಅವಳ ಒಡವೆಗಳನ್ನ ತಾನು ಸಾಯೋವರೆಗೂ ಜೋಪಾನವಾಗಿ ಇಟ್ಟಿರ್ತೀನಿ ಎಂದು ಭಾವುಕನಾಗುತ್ತಾನೆ.
ತನ್ನ ತಾಯಿಗೆ ಕಣ್ಣು ದಾನ ಮಾಡೋರು ಸಿಕ್ಕಿರುವ ವಿಷಯ ಆಶ್ರಮದವರು ತಿಳಿಸಿದಾಗ ಅಂಜಲಿ ಸಂತೋಷ ಪಡುತ್ತಾಳೆ. ಹಾಗೆ ತಾನು ಕಿಶನ್ ಆಫೀಸ್ ಗೆ ಹೋಗೋಕೆ ಹಿಂದೇಟು ಹಾಕುವಾಗ ಭಾವನ ಅವಳನ್ನ ಪ್ರಶ್ನಿಸುತ್ತಾಳೆ. ಕಿಶನ್ ಗೆ ಸಿಕ್ಕಿರುವ ಪ್ರಾಜೆಕ್ಟ್ 'ಡಿಕೆ'ದು ಎಂದು ಅಂಜಲಿ ಹೇಳಿದಾಗ ಭಾವನ ಗಾಬರಿಯಾಗುತ್ತಾಳೆ.
ಹಾಗಾದ್ರೆ, ಅಂಜಲಿ ಕಿಶನ್ ಜೊತೆ ಡಿಕೆ ಪ್ರಾಜೆಕ್ಟ್ ಮಾಡಲು ಒಪ್ಪುತ್ತಾಳ.? ತಪ್ಪದೇ ವೀಕ್ಷಿಸಿ ಇವತ್ತಿನ ಕುತೂಹಲ ಭರಿತ ಸಂಚಿಕೆ, ಕಣ್ಮಣಿ ರಾತ್ರಿ 10ಕ್ಕೆ.