Don't Miss!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್' ಸುದೀಪ್ ಮುಂದೆ ಆಗಬಾರದೊಂದು ಘಟನೆ ಆಗೋಯ್ತು.!
Recommended Video
ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಚಂದನ್ ಶೆಟ್ಟಿ ಗೆದ್ದ ನಂತರ, ಬಿಗ್ ಬಾಸ್ ವಿನ್ನರ್ ಬಗ್ಗೆ ಚರ್ಚೆಯಾಗುವುದಕ್ಕಿಂತ ಬೇರೆಯದ್ದೇ ವಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಡಿಬೇಟ್ ಆಗ್ತಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ನಡೆದ ಘಟನೆಯೊಂದು ಈಗ ಎಲ್ಲೆಡೆ ಟಾಕ್ ಆಗಿದೆ.
ಹೌದು, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಆಗಬಾರದೊಂದು ಘಟನೆ ಆಗೋಗಿದೆ. ಯಾರೂ ಊಹೆ ಮಾಡಿರದ ಕ್ಷಣವೊಂದಕ್ಕೆ ಸುದೀಪ್ ಸಾಕ್ಷಿಯಾಗಿದ್ದಾರೆ. ಇದು ಗೊತ್ತಿದ್ದು ಆಯ್ತಾ? ಅಥವಾ ಗೊತ್ತಿಲ್ಲದೇ ಆಯ್ತಾ ನಮ್ಗಂತೂ ಗೊತ್ತಿಲ್ಲ. ಆದ್ರೆ, ಈ ಹಾಟ್ ಟಾಪಿಕ್ ಮಾತ್ರ ಈಗ ಸಿಕ್ಕಾಪಟ್ಟೆ ಚರ್ಚೆ ಯಾಗ್ತಿದೆ.
ಯಾವುದು ರೀ ಅಂತಹ ವಿಷ್ಯ ಅಂತ ಯೋಚನೆ ಮಾಡ್ಬೇಡಿ. ನಾವು ಹೇಳ್ತಿರೋದು 'ಒಂದು ಮತ್ತಿನ ಕಥೆ'. ಆಪ್ತ ಸ್ನೇಹಿತ ಚಂದನ್ ಶೆಟ್ಟಿ ಮತ್ತು ದಿವಾಕರ್ ಅವರ ಮಧ್ಯೆ ನಡೆದ ಲಿಪ್ ಲಾಕ್ ಕಥೆ. ಅಷ್ಟಕ್ಕೂ ಈ ಲಿಪ್ ಲಾಕ್ ಆಗಿದ್ದೇಕೆ? ಏನಿದು ಲಿಪ್ ಲಾಕ್ ಕಥೆ ಅಂತ ಪೂರ್ತಿ ತಿಳಿಯಲು ಮುಂದೆ ಓದಿ......
ಚಂದನ್ ವಿಟಿ ನೋಡಿ ದಿವಾಕರ್ ಮೆಚ್ಚುಗೆ
ಫೈನಲ್ ಸ್ಪರ್ಧಿ ಚಂದನ್ ಶೆಟ್ಟಿ ಅವರ ಜರ್ನಿ ವಿಡಿಯೋ ತೋರಿಸಿದ ನಂತರ ದಿವಾಕರ್, ಸ್ನೇಹಿತನ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಈ ಖುಷಿಯ ಪ್ರತಿರೂಪವಾಗಿ ಚಂದನ್ ಗೆ ಮುತ್ತಿಟ್ಟರು.
ಅರ್ಧ ಕೋಟಿ ಬಹುಮಾನ ಹಣದಲ್ಲಿ ಚಂದನ್ ಶೆಟ್ಟಿ ಮತ್ತು ಫ್ಯಾಮಿಲಿ ಏನ್ ಮಾಡ್ತಾರೆ ಗೊತ್ತಾ.?
ಲಿಪ್ ಟು ಲಿಪ್ ಕಿಸ್ ಆಗೋಯ್ತು.!
ಕೆನ್ನೆಗೆ ಮುತ್ತಿಡಲು ಹೋದ ದಿವಾಕರ್, ಆಯಾತಪ್ಪಿ ಚಂದನ್ ತುಟಿಗೆ ಮುತ್ತು ಕೊಟ್ಟರು. ಇದೊಂದು ರೀತಿಯಲ್ಲಿ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತು. ಸ್ವತಃ ದಿವಾಕರ್ ಹಾಗೂ ಚಂದನ್ ಶೆಟ್ಟಿಗೂ ಇದು ಅಚ್ಚರಿಯಾಯಿತು. ಲಿಪ್ ಲಾಕ್ ಮಾದರಿ ಕಿಸ್ ಆಯ್ತು.
ಶಾಕ್ ಆದ ಚಂದನ್ ಶೆಟ್ಟಿ.!
ಈ ಮುತ್ತಿನ ನಂತರ ಸುದೀಪ್ ಅವರು ಚಂದನ್ ಹಾಗೂ ದಿವಾಕರ್ ಗೆ ಕಾಲೆಳೆದರು. ಈ ಘಟನೆಯಿಂದ ಚಂದನ್ ಶೆಟ್ಟಿ ಹೊರಬರಲು ಕೆಲ ಸಮಯ ತೆಗೆದುಕೊಳ್ಳಬೇಕಾಯಿತು.
'ಬಿಗ್ ಬಾಸ್' ಗೆದ್ದ ಅರ್ಹ ವ್ಯಕ್ತಿ ಚಂದನ್ ಶೆಟ್ಟಿ: ವೀಕ್ಷಕರಿಗೆ ಖುಷಿಯೋ ಖುಷಿ.!
ದಿವಾಕರ್ ಗೆ ಚಂದನ್ ಕೊಟ್ಟ ಮುತ್ತು
ಈ ಘಟನೆಯ ಬಳಿಕ ದಿವಾಕರ್ ಜರ್ನಿ ವಿಡಿಯೋ ತೋರಿಸಲಾಯಿತು. ಚಂದನ್ ಕೂಡ ಸ್ನೇಹಿತ ದಿವಾಕರ್ ಗೆ ಮುತ್ತು ನೀಡಿದರು. ಆದ್ರೆ, ಚಂದನ್ ಕೆನ್ನೆಯ ಮೇಲೆ ಚುಂಬಿಸಿದರು. ಈ ಮುತ್ತಿನ ವೇಳೆಯೂ ಹಳೆಯ ಮುತ್ತು ನೆನಪಾಗುತ್ತಿತ್ತು. ಒಂದಂತೂ ಸತ್ಯ, ಈ ಮುತ್ತು ಅಚಾನಕ್ ಆಗಿ ಆಗಿದ್ದು. ಹಾಸ್ಯಕ್ಕೆ ಕಾರಣವಾಯಿತು ಅಷ್ಟೇ.
ವೀಕ್ಷಕರ ಆಸೆ ಈಡೇರಿತು: ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದುಬಿಟ್ಟರು.!