Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!
ಯಾವುದು ಆಗಬಾರದು ಅಂತ ದಿನಕರ್ ಅಂದುಕೊಂಡಿದ್ರೋ, ಅದು ನಡೆದೇ ಹೋಯ್ತು. ಇಷ್ಟು ದಿನ ಯಾರಿಗೂ ಗೊತ್ತಾಗದ ಹಾಗೆ 'ಅವನಿ' ಮ್ಯಾಟರ್ ಡೀಲ್ ಮಾಡುತ್ತಿದ್ದ ದೀಪಿಕಾ ಇದೀಗ ಇಕ್ಕಟ್ಟಿಗೆ ಸಿಲುಕುವ ಹಾಗೆ ಆಯ್ತು.
'ತುಂಬ ಮುಖ್ಯವಾದ ಕೆಲಸ ಇದೆ' ಅಂತ ಮನೆಯಲ್ಲಿ ಎಲ್ಲರಿಗೂ ಸುಳ್ಳು ಹೇಳಿ ಹೊರಗೆ ಬಂದಿದ್ದ ಸಿತಾರ ದೇವಿ ನೇರವಾಗಿ ತೆರಳಿದ್ದು 'ಅವನಿ' ಆಪರೇಶನ್ ನಡೆಯುತ್ತಿದ್ದ ಆಸ್ಪತ್ರೆಗೆ.
'ಅವನಿ'ಗೆ ಆಪರೇಶನ್ ಮಾಡುತ್ತಿರುವ ಸಂಗತಿ ಕುಟುಂಬದವರಿಗೆ ಗೊತ್ತಾಗಬಾರದು, ಅದರಲ್ಲೂ ಅಮ್ಮ ಸಿತಾರಗೆ ತಿಳಿಯಬಾರದು ಅಂತ ದೀಪಿಕಾ ಸೀಕ್ರೆಟ್ ಮೇನ್ಟೇನ್ ಮಾಡಿದ್ದಳು. ಇನ್ನೂ ದಿನಕರ್ ಕೂಡ ಗುಟ್ಟಾಗಿಯೇ ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದರು.
ಆದ್ರೆ, ಆಪರೇಶನ್ ಮುಗಿದು 'ಅವನಿ' ಫಿಟ್ ಅಂಡ್ ಫೈನ್ ಆಗಬೇಕು ಎಂಬ ಹೊತ್ತಲ್ಲಿ ಮತ್ತೆ ವಿಘ್ನ ಎದುರಾಗಿದೆ. 'ಅವನಿ'ಗೆ ಆಪರೇಶನ್ ನಡೆಯುತ್ತಿರುವ ಸತ್ಯ ಸಿತಾರಗೆ ಗೊತ್ತಾಗಿದೆ. ಮುಂದೆ ಓದಿರಿ...
ದಿನಕರ್ ಪ್ಲಾನ್ ಫ್ಲಾಪ್ ಆಯ್ತು.!
'ಅವನಿ'ಗೆ ಆಪರೇಶನ್ ಮಾಡುವ ಮುನ್ನ ಒಪ್ಪಿಗೆ ಪತ್ರಕ್ಕೆ ತಾನೇ ಸಹಿ ಹಾಕಬೇಕು ಎಂದು ದಿನಕರ್ ಪ್ಲಾನ್ ಮಾಡಿದ್ದರು. ಯಾರಿಗೂ ವಿಷಯ ತಿಳಿಸದೆ ಆಸ್ಪತ್ರೆಗೆ ಹೋಗುತ್ತಿದ್ದರೂ, ದಿನಕರ್ ಕಾರ್ ನ ರಮಣ್ ಫಾಲೋ ಮಾಡ್ತಿದ್ರು. ರಮಣ್ ಫಾಲೋ ಮಾಡ್ತಿರೋದು ಗೊತ್ತಾದ್ಮೇಲೆ, 'ಅವನಿ'ಗೆ ಆಪರೇಶನ್ ನಡೆಯುವ ಸಂಗತಿ ರಮಣ್ ಗೆ ತಿಳಿಯಬಾರದು ಅಂತ ಆಸ್ಪತ್ರೆಗೆ ಹೋಗದೆ, ಬಂದ ದಾರಿಯಲ್ಲೇ ದಿನಕರ್ ವಾಪಸ್ ತೆರಳಿದರು. ಅಲ್ಲಿಗೆ, ದಿನಕರ್ ಪ್ಲಾನ್ ಎಲ್ಲ ತಲೆಕೆಳಗಾಯಿತು.
'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?
ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ದೀಪಿಕಾ
'ಅವನಿ' ಆಪರೇಶನ್ ಗೆ ಸಮ್ಮತಿ ಸೂಚಿಸಿ, ಒಪ್ಪಿಗೆ ಪತ್ರಕ್ಕೆ ದೀಪಿಕಾ ಸಹಿ ಹಾಕಿದ್ದಾಯ್ತು. ಆಪರೇಶನ್ ಕೂಡ ಶುರುವಾಯ್ತು. ಅಲ್ಲಿಗೆ, ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತಿದೆ ಅಂತ ದೀಪಿಕಾ ನಿಟ್ಟುಸಿರು ಬಿಡುತ್ತಿರುವಾಗಲೇ, ಆಸ್ಪತ್ರೆಯಲ್ಲಿ ಸಿತಾರ ದೇವಿ ಪ್ರತ್ಯಕ್ಷ.!
ಕೂಗಾಡಿದ ಸಿತಾರ ದೇವಿ
ಫೋನ್ ಮಾಡಿದ್ರೆ, ಸರಿಯಾಗಿ ಉತ್ತರ ಕೊಡಲ್ಲ, ಸುಳ್ಳು ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ವಿನಯ್ ಮೇಲೆ ಸಿತಾರ ದೇವಿ ಕೂಗಾಡಿದರು. ಇದೇ ಗ್ಯಾಪ್ ನಲ್ಲಿ 'ಅವನಿ'ಗೆ ಆಪರೇಶನ್ ನಡೆಯುತ್ತಿರುವ ಸತ್ಯ ಕೂಡ ಸಿತಾರ ದೇವಿಗೆ ಗೊತ್ತಾಗ್ಹೋಯ್ತು.!
ದೀಪಿಕಾ ವಿಲ ವಿಲ.!
ಯಾವುದು ಆಗಬಾರದು ಅಂತ ದೀಪಿಕಾ ದೇವರಲ್ಲಿ ಬೇಡಿಕೊಳ್ತಿದ್ಲೋ, ಅದು ಆಗೇ ಹೋಯ್ತು. ಸಿತಾರ ದೇವಿಗೆ 'ಅವನಿ' ಆಪರೇಶನ್ ಬಗ್ಗೆ ಗೊತ್ತಾಯ್ತು. ಮುಂದೇನು ಮಾಡೋದು ಅಂತ ದೀಪಿಕಾ ತಲೆ ಕೆಡಿಸಿಕೊಂಡಿದ್ದಾಳೆ. ಇತ್ತ ರಾಧಾ ಟೀಚರ್ ಗೆ ದೇವಸ್ಥಾನದಲ್ಲಿ 'ಅವನಿ' ಬಗ್ಗೆ ಗೊತ್ತಿರುವ ಡಾಕ್ಟರ್ ಸಿಕ್ಕಿದ್ದಾರೆ. ಮುಂದೇನಾಗುತ್ತೋ, ಆ 'ಗಣೇಶ'ನೇ ಬಲ್ಲ.