Don't Miss!
- News Lok Sabha Election: ಮತದಾನದ ದಿನ ಬಸ್ಗಳ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿರಿ ತಂದೆಗಿರುವ ಆ ದೊಡ್ಡ ಖಾಯಿಲೆ ಯಾವುದು ಗೊತ್ತಾ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಮತ್ತು ಸಿರಿ ಮದುವೆಯನ್ನು ದತ್ತ ತಾತ ಒಪ್ಪಿಕೊಂಡಿದ್ದಾರೆ. ಇದರಿಂದ ಸಂಧ್ಯಾಗೆ ಕೋಪ ಬಂದಿದೆ. ಅಲ್ಲದೇ, ಸಮರ್ಥ್ ತನ್ನ ನಾದಿನಿಯನ್ನು ಮದುವೆಯಾಗಬೇಕು ಎಂದು ಆಸೆ ಪಟ್ಟಿದ್ದಳು.
ಅದರಿಂದ ದತ್ತ ತಾತ ವಾಸವಿರುವ ಮನೆ ಸಂಪೂರ್ಣವಾಗಿ ತನ್ನದಾಗುತ್ತಿತ್ತು ಎಂದು ನಂಬಿದ್ದಳು. ಆದರೆ, ಇವರಿಬ್ಬರು ಮದುವೆಯಾಗಿರುವುದು ಸಂಧ್ಯಾಗೆ ಹೊಸ ತಲೆನೋವು ತಂದಂತಾಗಿದೆ. ಬರಬೇಕಿದ್ದ ಹಣವೂ ಕೂಡ ಕೈತಪ್ಪಿ ಹೋಯ್ತಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಹೇಗಾದರೂ ಮಾಡಿ ತಾತನ ಸಂಪೂರ್ಣ ಆಸ್ತಿಯನ್ನು ತನ್ನ ಪಾಲಾಗುವಂತೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಆದರೆ ಸಂಧ್ಯಾ ಆಸೆ ನೆರವೇರುತ್ತಾ ಇಲ್ಲವೋ ಗೊತ್ತಿಲ್ಲ.
ಮೊಮ್ಮೊಗಳನ್ನು ಒಪ್ಪಲಾರೆ ಎಂದ ತಾತ
ದತ್ತ ತಾತ ಸಿರಿ ಮತ್ತು ಸಮರ್ಥ್ ನನ್ನು ಒಪ್ಪಿಕೊಂಡಿರುವುದಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಈ ಬಗ್ಗೆ ತಾತನ ಸ್ನೇಹಿತ ಕೇಳಿದ್ದಕ್ಕೆ, ಸಮರ್ಥ್ ಸಿರಿಯನ್ನು ಮದುವೆಯಾಗಲು ಮೂರು ವರ್ಷ ಕಾದಿದ್ದಾನೆ. ನನ್ನ ಬಳಿ ಬಂದು ಹೇಳಿದ ಕೂಡ. ನಾನು ಖಡಾಖಂಡಿತವಾಗಿ ಆಗೊಲ್ಲ ಎಂದಿದ್ದಕ್ಕೆ ಅವನು ಮದುವೆಯಾಗಿದ್ದು. ಆದರೆ ಸಂಧ್ಯಾ ಹಾಗೆ ಮಾಡಲಿಲ್ಲ. ಅವಳು ತುಂಬಾ ಸ್ವಾರ್ಥಿ. ಅವಳು ಮನೆಗೆ ಬರುವುದು ಕೂಡ ಪ್ರೀತಿಯಿಂದ ಅಲ್ಲ. ನನ್ನ ಆಸ್ತಿ ಮೇಲೆ ಅವಳಿಗೆ ಕಣ್ಣಿದೆ. ಹಾಗಾಗಿ ನಾನು ಸಂಧ್ಯಾಳನ್ನ ಯಾವತ್ತೂ ಒಪ್ಪಲ್ಲ ಎಂದು ದತ್ತ ತಾತ ಹೇಳುತ್ತಾರೆ.
ತಾತನ ಕಂಡು ಆಶ್ಚರ್ಯಗೊಂಡ ಮನೆಯವರು
ದತ್ತ ತಾತ ಸಮರ್ಥ್ ಮತ್ತು ಸಿರಿಗೆ ಫಸ್ಟ್ ನೈಟ್ ಶಾಸ್ತ್ರ ಮಾಡಲು ತಯಾರಿ ನಡೆಸಿದ್ದಾರೆ. ಮನೆಯಲ್ಲಿ ತುಳಸಿ ಈ ಶಾಸ್ತ್ರವನ್ನು ಮಾಡಲು ಹೇಗೆ ಮಾವನ ಬಳಿ ಕೇಳುವುದು ಎಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ತಾತನೇ ಮನೆಗೆ ಹೂವು ಹಣ್ಣುಗಳನ್ನು ತಂದಿದ್ದಾರೆ. ತಾತನೇ ಮುಂದೆ ನಿಂತು ಸಮರ್ಥ್ ಬೆಡ್ ರೂಮ್ ಅನ್ನು ಸಿದ್ಧ ಪಡಿಸುತ್ತಿದ್ದಾರೆ. ಹೂವಿನ ಅಲಂಕಾರವನ್ನು ಮಾಡಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಸಮರ್ಥ್-ಸಿರಿ ಖುಷಿ ಪಡುತ್ತಿದ್ದಾರೆ.
ಮಗನಿಂದ ಬೇಸರಗೊಂಡ ಮಾಧವ
ಇನ್ನು ಮಾಧವ ಮನೆಗೆ ಗಣಪನ ವಿಗ್ರಹ ಒಂದನ್ನು ತಂದಿದ್ದಾರೆ. ಅದನ್ನು ಗಮನಿಸಿದ ಪೂರ್ಣಿಮಾ, ಮಾವ ನಿಮ್ಮ ರೂಮಿನಲ್ಲಿ ಅಷ್ಟೋಂದು ಆಂಟಿಕ್ ಪೀಸ್ ಗಳಿದ್ದರೂ, ಇದನ್ನೆಲ್ಲಾ ಯಾಕೆ ತರುತ್ತೀರಾ? ನಿಮಗೆ ಹಳೆಯ ವಸ್ತುಗಳೆಂದರೆ ಅಷ್ಟೊಂದು ಇಷ್ಟಾನಾ ಎಂದು ಕೇಳುತ್ತಾಳೆ. ಅದಕ್ಕೆ ಮಾಧವ ಈ ಹಳೆಯ ವಸ್ತುಗಳಿಂದ ಆ ಕಾಲದಲ್ಲಿ ಬುದುಕಿರುವವರ ನೆನಪಿರುತ್ತದೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿಸಿಕೊಂಡ ಅಭಿ ಅಲ್ಲಿಗೆ ಬಂದು ಪೂರ್ಣಿಮಾಗೆ ಬೈಯುತ್ತಾನೆ. ಇದರಿಂದ ಮಾಧವ ಬೇಸರಗೊಳ್ಳುತ್ತಾರೆ.
ಬೀಗರನ್ನು ವಿಚಾರಿಸಿಕೊಂಡ ತುಳಸಿ
ಇನ್ನು ಮನೆಯಲ್ಲಿ ಸಿರಿ ಅವರ ತಂದೆ ಮಗಳನ್ನು ಹುಡುಕುತ್ತಿರುತ್ತಾರೆ. ಮಗಳು ಮದುವೆಯಾಗಿದ್ದಾಳೆ ಎಂಬುದನ್ನೂ ಮರೆತು, ಮನೆಯಲ್ಲಾ ಹುಡುಕಾಡುತ್ತಾರೆ. ಇದೇ ವೇಳೆಗೆ ತುಳಸಿ ಕರೆ ಮಾಡುತ್ತಾಳೆ. ಆದರೆ ಅವರಿಗೆ ನೆನಪಾಗುವುದಿಲ್ಲ. ತುಳಸಿಯೇ ತನ್ನ ಪರಿಚಯ ಮಾಡಿಕೊಂಡು, ಸಿರಿಗೆ ಮದುವೆಯಾದ ವಿಚಾರವನ್ನೂ ನೆನಪಿಸುತ್ತಾರೆ. ಆಗ ನೆನಪು ಮಾಡಿಕೊಂಡ ಸಿರಿ ತಂದೆಗೆ ತುಳಸಿ ಊಟ ಮಾಡಲು ಹೇಳುತ್ತಾಳೆ. ಸಿರಿ ಇಲ್ಲದ ಕಾರಣ ಅಡುಗೆ ಯಾರೂ ಮಾಡಿಲ್ಲ ಎನ್ನುತ್ತಾನೆ. ತುಳಸಿ ಹಣ್ಣು ತಿಂದು ಮಾತ್ರೆ ತೆಗೆದುಕೊಳ್ಳುವಂತೆ ಹೇಳುತ್ತಾಳೆ. ಆದರೆ ಈ ವಿಚಾರವನ್ನು ಸಿರಿಯಿಂದ ತುಳಸಿ ಮುಚ್ಚಿಡುತ್ತಾಳೆ.