Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಹಾದೇವ'ನೊಂದಿಗೆ ಸುವರ್ಣ ತಾರೆಗಳ ಬೆಳಕಿನ ಹಬ್ಬ
50 ಸಂಚಿಕೆಯನ್ನು ಪೂರ್ಣಗೊಳಿಸಿರುವ 'ಹರ ಹರ ಮಹಾದೇವ' ತಂಡದೊಂದಿಗೆ ಸ್ಟಾರ್ ಸುವರ್ಣ ತಾರೆಗಳು ಬೆಳಕಿನ ಹಬ್ಬ 'ದೀಪಾವಳಿ'ಯನ್ನು ಬಹಳ ಅದ್ಧೂರಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ.
ಈಗಾಗಲೇ ಕರುನಾಡ ಜನತೆಯ 'ಮನೆ-ಮನ'ಗಳಲ್ಲಿ ಹೆಸರುವಾಸಿಯಾಗಿರುವ 'ಹರ ಹರ ಮಹಾದೇವ' ಧಾರಾವಾಹಿ ತಂಡ, ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು, ಬೃಹತ್ ವೇದಿಕೆಯ ಮುಖಾಂತರ ಜನರ ಬಳಿ ಬರುತ್ತಿದ್ದಾರೆ.[ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್]
ವೈವಿಧ್ಯತೆ, ವೈಶಿಷ್ಟ್ಯತೆ, ವಿಶೇಷತೆ ಮತ್ತು ವೈಭವದಿಂದ ಕೂಡಿದ ಈ 'ಸುವರ್ಣ ದೀಪೋತ್ಸವ' ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಹಾಡು-ನೃತ್ಯಗಳು ಜನಮನಸೆಳೆಯಲಿವೆ.
ಈ 'ದೇವರ ದೇವ ಮಹಾದೇವ'ನ ಜೊತೆ ಸ್ಟಾರ್ ಸುವರ್ಣ ವಾಹಿನಿಯ ಪರಿವಾರದ ಸದಸ್ಯರು ಕೂಡ ಎಲ್ಲರನ್ನು ರಂಜಿಸಲಿದ್ದಾರೆ.[ಮಹಾದೇವ ವೀರಭದ್ರ ಅವತಾರ ತಾಳುವ ರೋಚಕ ಸನ್ನಿವೇಶ]
ಬೆಂಗಳೂರಿನ ವಿಜಯನಗರದ ಗೋವಿಂದರಾಜನಗರದ ಬಾಲಗಂಗಾಧರ ಮೈದಾನದಲ್ಲಿ, ಇದೇ ಸೋಮವಾರ (ಅಕ್ಟೊಬರ್ 17ರಂದು) ಸಂಜೆ 6 ಗಂಟೆಗೆ ನಡೆಯಲಿರುವ, ವಿಜೃಂಭಣೆಯ ಕಾರ್ಯಕ್ರಮಕ್ಕೆ ಆಗಮಿಸಲು ಎಲ್ಲರಿಗೂ ಉಚಿತ ಪ್ರವೇಶವಿದೆ.
ಆದ್ದರಿಂದ ಸರ್ವರೂ ಆಗಮಿಸಿ, ಸ್ಟಾರ್ ಸುವರ್ಣ ಪರಿವಾರದವರ ಜೊತೆ ಬೆಳಕಿನ ಹಬ್ಬ 'ದೀಪಾವಳಿ'ಯನ್ನು ಸಂಭ್ರಮದಿಂದ ಆಚರಿಸಬಹುದು.