Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು
ಸ್ಟಾರ್ ನೆಟ್ವರ್ಕ್ ಒಡೆತನದ ಕನ್ನಡ ಮನರಂಜನಾ ವಾಹಿನಿಯಾದ ಸುವರ್ಣ ವಾಹಿನಿಯು ಈಗ 'ಶ್ರೀಮತಿ ಭಾಗ್ಯಲಕ್ಷ್ಮಿ' ಮತ್ತು 'ಖುಷಿ' ಎರಡು ಹೊಸ ಧಾರಾವಾಹಿಗಳನ್ನು ಇದೇ ಜನವರಿ 12 ರಿಂದ ಪ್ರಸಾರ ಪ್ರಾರಂಭಿಸುತ್ತಿದೆ.
ಸ್ತ್ರೀ ತನ್ನ ವ್ಯಕ್ತಿತ್ವವನ್ನು ಜೀವನದ ವಿವಿಧ ಘಟ್ಟಗಳಲ್ಲಿ ಒಂದೊಂದು ರೀತಿಯಲ್ಲಿ ಗುರ್ತಿಸಲ್ಪಡುತ್ತಾ ಯಾರೋ ಒಬ್ಬರಿಗೆ ಮೀಸಲಿಡುತ್ತಾ ಬರುತ್ತಾಳೆ. ಅವಳು ತಾಯಿಯಾಗಿ, ಹೆಂಡತಿಯಾಗಿ ಹಾಗೂ ಮಗಳಾಗಿ ಇತ್ಯಾದಿ ಪಾತ್ರಗಳಲ್ಲಿ ತೋರ್ಪಡುತ್ತಾಳೆ. ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯು ಹೃದಯ ತುಂಬಿ ಬರುವ ಗೌತಮಿಯ ಕಥೆ.
ಕೆಲವೊಂದು ಸಂದರ್ಭಗಳ ನಿಮಿತ್ತವಾಗಿ ತನ್ನ ಗುರುತನ್ನು ಬದಲಾಯಿಸಿಕೊಳ್ಳಬೇಕಾಗುವ ಇವಳು ಕಳೆದು ಹೋದ ಜಿಜ್ಞಾಸೆಯ ಬದುಕಿನಲ್ಲಿ ಹೇಗೆ ಹೊಸ ಪಾತ್ರಕ್ಕೆ ಹೊಂದಿಕೊಳ್ಳುತ್ತಾಳೆ ಎಂಬುದೇ ಕಥೆಯ ತಾತ್ಪರ್ಯ.
ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಸುವರ್ಣ ವಾಹಿನಿಯಲ್ಲಿ ಮೂಡಿಬಂದ ಜನಪ್ರಿಯ 'ಗುರು ರಾಘವೇಂದ್ರ ವೈಭವ' ಧಾರಾವಾಹಿಯನ್ನು ನಿರ್ದೇಶಿಸಿದ ನಿರ್ದೇಶಕ ಆದರ್ಶ ಹೆಗಡೆ ನಿರ್ದೇಶನದಲ್ಲಿ ಮೂಡಿಬರುತ್ತಿರುವುದು ವಿಶೇಷ.ಶ್ರೀಮತಿ ಭಾಗ್ಯಲಕ್ಷ್ಮಿ ಧಾರಾವಾಹಿಯು ಜನವರಿ 12, 2015 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಇನ್ನು 'ಖುಷಿ' ಧಾರಾವಾಹಿಯು ಅನನ್ಯ ಪ್ರೇಮ ಕಥೆಯಾಗಿದ್ದು ಎರಡು ವಿಭಿನ್ನ ವ್ಯಕ್ತಿಗಳ ಮಧ್ಯೆ ಹೆಣೆಯಲ್ಪಟ್ಟಿದೆ. ಈ ಕಥೆಯು ಮುಖ್ಯವಾಗಿ 2 ಪಾತ್ರಧಾರಿಗಳಾದ ರಜನಿ ಮತ್ತು ವಿಷ್ಣುವರ್ಧನನ ಸುತ್ತ ಸುತ್ತುವರೆಯುತ್ತದೆ. ಮುಖ್ಯ ಪಾತ್ರಧಾರಿ ರಜನಿಯು ತನ್ನ ಅತ್ತೆಯ ಜೀವನದಲ್ಲಿ ಸಾಮರಸ್ಯವನ್ನು ಮೂಡಿಸಲು ಹೇಗೆ ಚಾಲೆಂಜ್ ಗಳನ್ನು ಎದುರಿಸುತ್ತಾಳೆ ಮತ್ತು ತನ್ನ ಗಂಡನಿಗೆ ಆತನ ಅಪ್ಪನ ನಿಜವಾದ ಸ್ವಭಾವವನ್ನು ತಿಳಿದುಕೊಳ್ಳುವಂತೆ ಮಾಡುತ್ತಾಳೆ ಎಂಬುದೇ ಕಥೆಯ ಸಾರಾಂಶ.
ಖುಷಿ ಧಾರಾವಾಹಿಯನ್ನು ಪ್ರೀತಮ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಖುಷಿ ಧಾರಾವಾಹಿಯು ಜನವರಿ 12, 2015 ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:30 ಕ್ಕೆ ಪ್ರಸಾರವಾಗಲಿದೆ. ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ನಮ್ಮ ಈ ಎರಡು ಹೊಸ ಧಾರಾವಾಹಿಗಳು ಅನನ್ಯ ಪ್ರೇಮ ಕಥೆಯಾಗಿದ್ದು ಕೌಟುಂಬಿಕ ಕಥಾನಕವನ್ನು ಹೊಂದಿವೆ.
ಈ ಧಾರಾವಾಹಿಗಳ ಥೀಮ್ ಮತ್ತು ಸ್ಕ್ರಿಪ್ಟ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇವೆ. ಅದರ ಮೂಲಕ ನಮ್ಮ ವೀಕ್ಷಕರಿಗೆ ಆಸಕ್ತಿ ಹುಟ್ಟಿಸುವಂತಹ ಮತ್ತು ಅವರ ನೋಡಿ ಎಂಜಾಯ್ ಮಾಡಿ ಪ್ರಶಂಸಿಸುವಂತಹ ಧಾರಾವಾಹಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಮ್ಮ ಈ ಹೊಸ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನೋರಂಜನೆಯ ಮಹಾಪರ್ವವನ್ನು ಉಣಬಡಿಸುತ್ತೇವೆ ಎನ್ನುತ್ತಾರೆ ಅನುಪ್. (ಫಿಲ್ಮಿಬೀಟ್ ಕನ್ನಡ)