Don't Miss!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Sports
ಟಿ20 ವಿಶ್ವಕಪ್ ಭಾರತದ ಸಂಭಾವ್ಯ ತಂಡದಲ್ಲಿ ಈ ಸ್ಟಾರ್ ವೇಗಿಗೆ ಸ್ಥಾನವಿಲ್ಲ; ವರದಿ
- News
ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ
- Lifestyle
ಗರ್ಲ್ಸ್ ಪುರುಷರ ಈ ಸೀಕ್ರೆಟ್ ತಿಳಿದುಕೊಂಡ್ರೆ ರಿಲೇಷನ್ಶಿಪ್ನಲ್ಲಿ ಸಮಸ್ಯೆನೇ ಬರಲ್ಲ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ನೃತ್ಯಗಾತಿಯಾಗಿದ್ದ ತೀರ್ಥಹಳ್ಳಿಯ ಯಶಸ್ವಿನಿ ನಟಿಯಾಗಿದ್ದು ಹೇಗೆ?
ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಮಲೆನಾಡ ಬೆಡಗಿ ಯಶಸ್ವಿನಿಯ ಅಭಿನಯಕ್ಕೆ ಮನಸೋಲದವರಿಲ್ಲ. ಶಿವಮೊಗ್ಗದ ತೀರ್ಥಹಳ್ಳಿಯ ಯಶಸ್ವಿನಿ ರವೀಂದ್ರ ಇಂದು ರಚನಾ ಆಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ತಂಗಿ ಎಂದರೇ ರಚನಾ ಥರ ಇರಬೇಕು, ಫ್ರೆಂಡ್ ಎಂದರೆ ರಚನಾ ಥರ ಇರಬೇಕು ಎಂದು ಅಂದುಕೊಳ್ಳುವವರಿಗೇನೂ ಕಡಿಮೆ ಇಲ್ಲ.
ರಚನಾ ಆಲಿಯಾಸ್ ಯಶಸ್ವಿನಿ ಬಗ್ಗೆ ಪೀಠಿಕೆ ಅಗತ್ಯವಿಲ್ಲ. ಕಿರುತೆರೆ ವೀಕ್ಷಕರಿಗೆಲ್ಲಾ ಆಕೆ, ಆಕೆಯ ಅಭಿನಯ ಚಿರಪರಿಚಿತ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕ ರಿಷಿಯ ತಂಗಿ ರಚನಾ ಪಾತ್ರಕ್ಕೆ ಜೀವ ತುಂಬುತ್ತಿರುವ ಯಶಸ್ವಿನಿ ಬಿಕಾಂ ಪದವೀಧರೆ.
ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಮಹಾನಗರಿ ಬೆಂಗಳೂರಿಗೆ ಕಾಲಿಟ್ಟರು. ಬೆಂಗಳೂರಿನಲ್ಲಿ ಬಂದ ಯಶಸ್ವಿನಿ ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸ ಮಾಡಿದರು. ಕೆಲಸ ಮಾಡುವ ಸಂದರ್ಭದಲ್ಲಿ ನೃತ್ಯದತ್ತ ಒಲವು ಮೂಡಿದ್ದ ಕಾರಣ ನೃತ್ಯ ಕಲಿಯುವ ಆಲೋಚನೆ ಮಾಡಿದರು. ರಂಜಿತಾ ಅವರ ಬಳಿ ಕಥಕ್ ನೃತ್ಯ ಕಲಿತರು. ನೃತ್ಯ ಕಲಿಯುತ್ತಿರುವಾಗಲೇ ನಟನೆಯತ್ತಲೂ ಆಸಕ್ತಿ ಮೂಡಿತು.
ಮುಂದೆ ಆಡಿಶನ್ ಗಳಲ್ಲಿ ಭಾಗವಹಿಸಿದ ಯಶಸ್ವಿನಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಿ.ಶೇಷಾದ್ರಿ ನಿರ್ದೇಶನದ ಸಾಕ್ಷಿ ಧಾರಾವಾಹಿಗೆ ಸೆಲೆಕ್ಟ್ ಆದರು. ಆದರೆ ಅವರು ಬಾಣಂತಿ ಪಾತ್ರಕ್ಕೆ ಆಯ್ಕೆ ಆಗಿದ್ದರು. ಸಣ್ಣ ಪ್ರಾಯದ ಹುಡುಗಿಗೆ ಬಾಣಂತಿ ಪಾತ್ರ ಮಾಡುವುದು ಹೇಗೆಂದು ಗೊಂದಲದಲ್ಲಿದ್ದ ಯಶಸ್ವಿನಿ ಇದ್ದಾಗ, ಆ ಪಾತ್ರ ಬೇಡ ನಿರ್ದೇಶಕರೇ ಅಂದುಬಿಟ್ಟರು. ನಂತರ ನಾಯಕನ ಅತ್ತೆ ಮಗಳ ಪಾತ್ರಕ್ಕೆ ಅವರು ಆಯ್ಕೆ ಆದರು. ದಿಶಾ ಹೆಸರಿನ ಬಬ್ಲಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಯಶಸ್ವಿನಿ ವೀಕ್ಷಕರ ಮನ ಸೆಳೆದು ಬಿಟ್ಟರು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯಶಸ್ವಿನಿ ನಿರೂಪಣೆಯಲ್ಲೂ ಎತ್ತಿದ ಕೈ. ನಿರೂಪಣೆಯ ಜೊತೆಗೆ ಕಂಠದಾನಕ್ಕೂ ಈಕೆ ಸೈ. ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಯಶಸ್ವಿನಿ ನಂತರ 'ಮನೆ ದೇವರು' ಧಾರಾವಾಹಿಯಲ್ಲಿ ನಟಿಸಿದರು. ಅಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಮಿಂಚಿದರು. ಚಾಲೆಂಜಿಂಗ್ ಆಗಿರುವ ಆ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ ಮುಂದೆ ತಮಿಳಿನ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದರು
'ಕಾಲವೇ ಮೋಸಗಾರ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಯಶಸ್ವಿನಿ ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ರಚನಾ ಪಾತ್ರಧಾರಿಯಾಗಿ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಮಲೆನಾಡ ಕುವರಿ ಇನ್ನು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಇಂದು ನಾನು ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದೇ ಎಂದರೆ ಅದಕ್ಕೆ ಮನೆಯವರ ಪ್ರೋತ್ಸಾಹವೇ ಕಾರಣ