ತುಂಬು ಗರ್ಭಿಣಿ ಐಶ್ವರ್ಯ ರೈ ಸುಸೂತ್ರ ಹೆರಿಗೆಗೆ ವಿಘ್ನ

ಆದರೆ ಐಶ್ವರ್ಯ ರೈ ಹೆರಿಗೂ ಅವರ ಮುಷ್ಕರಕ್ಕೂ ಸಂಬಂಧವಿಲ್ಲದಿದ್ದರೂ. ಇದೇ ಸೂಕ್ತ ಸಮಯ ಎಂದುಕೊಂಡು ನರ್ಸ್ಗಳು ತಮ್ಮ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ. ಆದರೆ ಆಸ್ಪತ್ರೆ ಮ್ಯಾನೇಜ್ಮೆಂಟ್ ಇವರ ಮುಷ್ಕರಕ್ಕೆ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ.
ಇಷ್ಟಕ್ಕೂ ಅವರ ಬೇಡಿಕೆ ಏನೆಂದರೆ ಸಂಬಳ ಹೆಚ್ಚಿಸಬೇಕು ಎಂಬುದು. ಬಹಳ ದಿನಗಳಿಂದ ನಾವು ಕಾದದ್ದೇ ಬಂತು. ಕಡೆಗೂ ಆಸ್ಪತ್ರೆ ಮ್ಯಾನೇಜ್ಮೆಂಟ್ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ವಿಧಿಯಿಲ್ಲದೆ ನಾವು ಮುಷ್ಕರಕ್ಕೆ ಮುಂದಾದೆವು ಎಂದಿದ್ದಾರೆ.
ಐಶ್ವರ್ಯ ರೈಗೆ ಸುಸೂತ್ರ ಹೆರಿಗೆ ಮಾಡಿಸಿ ಮನೆಗೆ ಕಳುಹಿಸುವ ಭರವಸೆಯನ್ನು ಬಚ್ಚನ್ ಕುಟುಂಬಕ್ಕೆ ಆಸ್ಪತ್ರೆ ಮ್ಯಾನೇಜ್ಮೆಂಟ್ ನೀಡಿತ್ತು. ಆದರೆ ಇದ್ದಕ್ಕಿದ್ದಂತೆ ನರ್ಸ್ಗಳು ಕೈಯೆತ್ತಿದ್ದ ಮೇಲೆ ಮ್ಯಾನೇಜ್ಮೆಂಟ್ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಸಮಸ್ಯೆಯನ್ನು ಪರಿಹರಿಸಿದೆ.
ಬಳಿಕ ಮುಷ್ಕರವನ್ನು ನರ್ಸ್ಗಳು ವಾಪಸ್ಸು ತೆಗೆದುಕೊಂಡಿದ್ದಾಗಿ ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆ ಮ್ಯಾನೇಜ್ಮೆಂಟ್ ಮಾತ್ರ ತುಟಿಪಿಟಕ್ ಎನ್ನುತ್ತಿಲ್ಲ.
ಶೇ.15ರಷ್ಟು ಸಂಬಳ ಏರಿಕೆ ಮಾಡುವುದಾಗಿ ಹೇಳಿದ್ದರಂತೆ. ನರ್ಸ್ಗಳ ಮೂಗಿಗೆ ಕೊಂಚ ತುಪ್ಪ ಸವರಿ ಅವರ ಮುಷ್ಕರಕ್ಕೆ ಅಂತ್ಯ ಹಾಡಿದ್ದಾರೆ. (ಏಜೆನ್ಸೀಸ್)


Click it and Unblock the Notifications











