Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇತನ್ ರ ಹೊಸ ಝಾನ್ಸಿ ರಾಣಿ ಐಶ್ವರ್ಯ ರೈ
ಕೇತನ್ ಮೆಹತಾ ಈ ಚಿತ್ರಕ್ಕಾಗಿ ಕತೆ, ಚಿತ್ರಕತೆಯನ್ನು ಸಿದ್ಧಪಡಿಸಿಕೊಂಡಿದ್ದರು. ಚಿತ್ರದ ಮುಖ್ಯ ಪಾತ್ರಕ್ಕಾಗಿ ಐಶ್ವರ್ಯ ರೈ ಅವರನ್ನು ಆಯ್ಕೆ ಮಾಡಿಕೊಂಡಿದ್ದ್ದರು. ಐಶ್ ಸಹ ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಕುದುರೆ ಸವಾರಿ, ಕತ್ತಿ ವರಸೆಯಲ್ಲಿ ತರಬೇತಿಯನ್ನೂ ಪಡೆದಿದ್ದರು. ಇನ್ನೇನು ಚಿತ್ರ ಸೆಟ್ಟೇರಬೇಕು ಎನ್ನುವ ಹೊತ್ತಿಗೆ ಸುಸ್ಮಿತಾ ಸೇನ್ ಸಹ ಇದೇ ಕಥಾಂಶವುಳ್ಳ ಸಿನಿಮಾವನ್ನು ತೆಗೆಯುತ್ತಿದ್ದಾರೆಂದು ಚಿತ್ರೋದ್ಯಮದಲ್ಲಿ ಗುಲ್ಲೆದ್ದಿತು.
ಸ್ವತಃ ತಾವೇ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶೀರ್ಷಿಕೆ ಪಾತ್ರವನ್ನು ಪೋಷಿಸುತ್ತಿರುವುದಾಗಿ ಸುಸ್ಮಿತಾ ಪ್ರಕಟಿಸಿಯೂ ಬಿಟ್ಟರು! ಕೇತನ್ ಮೆಹತಾ ಪರಿಸ್ಥಿತಿ ಭೂಮಿ ಬಾಯ್ಬಿಟ್ಟಂತಾಯ್ತು. ಅವರು ವಿಧಿಯಿಲ್ಲದೆ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಚಿತ್ರಕ್ಕೆ ಎಳ್ಳುನೀರು ಬಿಟ್ಟರು. ಇತ್ತೀಚೆಗೆ ಸುಸ್ಮಿತಾ ತಮ್ಮ ಆಲೋಚನೆಯನ್ನು ಬದಲಾಯಿಸಿಕೊಂಡು ಝಾನ್ಸಿ ರಾಣಿ ಸಿನಿಮಾ ತೆಗೆಯುವ ಉದ್ದೇಶ ತಮಗಿಲ್ಲವೆಂದು ಸ್ಪಷ್ಟಪಡಿಸಿದರು.
ಕೂಡಲೆ ಕೇತನ್ ದೂಳು ತಿನ್ನುತ್ತಿದ್ದ ತಮ್ಮ ಹಳೆಯ ಸ್ಕ್ರಿಪ್ಟ್ ನ ರಿಪೇರಿ ಕಾರ್ಯದಲ್ಲಿ ಮಗ್ನರಾದರು.ಐಶ್ ರೊಂದಿಗೆ ಝಾನ್ಸಿ ಪಾತ್ರ ಪೋಷಿಸುವ ಕುರಿತು ಈಗಾಗಲೇ ಮಾತುಕತೆ ನಡೆದಿದೆ. ಐಶ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಮತ್ತೆ ಹಳಿ ಹತ್ತಲಿದೆ.
(ಏಜೆನ್ಸೀಸ್)
ಹೊಸ
ವಿವಾದದಲ್ಲಿ
ಮಾಜಿ
ವಿಶ್ವಸುಂದರಿ
ಐಶ್ವರ್ಯ
ರೈ
ಲೋಕಸಭೆಗೆ
ಐಶ್ವರ್ಯ
ರೈ
ಬೆಕ್ಕಿನ
ನಡಿಗೆ!
ಟವೆಲ್
ನಲ್ಲಿ
ಬಂಧಿಯಾದ
ಐಶ್ವರ್ಯ
ರೈ
ವಿಡಿಯೊ