Don't Miss!
- News
'ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ': ನಟಿ ಅಮಲಾ ಪೌಲ್ ಆರೋಪ
- Sports
ಭಾರತ vs ನ್ಯೂಜಿಲೆಂಡ್: ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಯುವ ಆಟಗಾರ ಇಶಾನ್ ಕಿಶನ್
- Lifestyle
ಶನಿದೋಷ ನಿವಾರಣೆಗೆ ಈ ಹನುಮಾನ್ ಮಂತ್ರ ಫವರ್ಫುಲ್, ಏಕೆ?
- Automobiles
ಇಂಡಿಕಾ ಕಾರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ; ರತನ್ ಟಾಟಾ ಭಾವನಾತ್ಮಕ ಪೋಸ್ವ್
- Finance
Bank Strike : 2 ದಿನ ಬ್ಯಾಂಕ್ ಮುಷ್ಕರ: ಯಾವೆಲ್ಲ ಬ್ಯಾಂಕ್ ಬಂದ್ ನೋಡಿ
- Technology
ಇನ್ಸ್ಟಾಗ್ರಾಮ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ; ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ತ್ರೀಲೋಲ ಪತಿಗೆ ಕರಿಷ್ಮಾ ಕಪೂರ್ ಸೋಡಾ ಚೀಟಿ
ಸುದೀರ್ಘ ಸಮಯದ ಬಳಿಕ ಮತ್ತೆ 'ಡೇಂಜರಸ್ ಇಷ್ಕ್' ಚಿತ್ರದ ಮೂಲಕ ಬಣ್ಣ ಹಚ್ಚಿರುವ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಸಂಸಾರ ಸಾಗರದಲ್ಲಿ ಇನ್ನೊಂದು ಸುತ್ತಿನ ಸುನಾಮಿ ಅಲೆಗಳೆದ್ದಿವೆ. 'ರಾಜ ಹಿಂದೂಸ್ತಾನಿ' ಚಿತ್ರದ ಮೂಲಕ ಪಡ್ಡೆಗಳ ಹೃದಯದ ಮೇಲೆ ಚಿರಮುದ್ರೆಯೊತ್ತಿದ ಈ ಬೆಡಗಿ ತನ್ನ ಗಂಡ ಸಂಜಯ್ ಕಪೂರ್ಗೆ ಕಡೆಗೂ ಡೈವೋರ್ಸ್ ನೀಡಲು ಅರ್ಜಿ ಸಲ್ಲಿಸಿದ್ದಾರೆ.
ಈ ಮೂಲಕ ಹಾಲು ನೀರಿನಂತೆ ಬೆರೆತುಹೋಗಿದ್ದ ಇವರಿಬ್ಬರ ಸಂಸಾರದಲ್ಲಿ ಹಾಲಾಹಲ ಎದ್ದಿದೆ. ತನ್ನ ಇಬ್ಬರು ಮಕ್ಕಳ ಪೋಷಣೆಗಾಗಿ ಕರಿಷ್ಮಾ ಮತ್ತೆ ಬೆಳ್ಳಿತೆರೆಗೆ ಅಡಿಯಿಟ್ಟು ಹೊಸ ಜೀವನ ಶುರು ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಸಂಜಯ್ ಜೊತೆ ಸಂಘರ್ಷ ನಡೆಯುತ್ತಲೇ ಇತ್ತು. ಡೈವೋರ್ಸ್ ಮೂಲಕ ಅದಕ್ಕೆ ಪೂರ್ಣ ವಿರಾಮ ಇಡಲು ಕರಿಷ್ಮಾ ಹೊರಟಿದ್ದಾರೆ.
ಸಾಕಷ್ಟು ಸಮಯದಿಂದ ತನ್ನ ಗಂಡ ಸಂಜಯ್ರಿಂದ ಕರಿಷ್ಮಾ ದೂರವೇ ಉಳಿದಿದ್ದರು. ಈಗ ಅಧಿಕೃತವಾಗಿ ಬೇರ್ಪಡಲು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರು ಆಗ ಸರಿಹೋಗುತ್ತಾರೆ, ಈಗ ಸರಿಹೋಗುತ್ತಾರೆ ಎಂದು ನಿರೀಕ್ಷೆಸಿದ್ದೇ ಬಂತು. ಕರಿಷ್ಮಾ ಪೋಷಕರು ಇವರಿಬ್ಬರನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲವೂ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಗಿದೆ.
ಕಡೆಗೆ ಇಬ್ಬರೂ ಬೇರ್ಪಡಲು ನಿರ್ಧರಿಸಿದ್ದಾರೆ. ಸಂಜಯ್ ಹೇಳಿಕೇಳಿ ಸ್ತ್ರೀಲೋಲ. ಈ ಬಗ್ಗೆ ಕರಿಷ್ಮಾ ಆತನಿಗೆ ಎಷ್ಟು ಬುದ್ಧಿ ಹೇಳಿದರು ಆತ ತನ್ನ ಚಾಳಿ ಬಿಡಲಿಲ್ಲ. ಕಡೆಗೆ ಆತನ ವರ್ತನೆ ಬಗ್ಗೆ ರೋಸಿಹೋಗಿ ಆತನಿಂದ ಬೇರ್ಪಡಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್)