Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ತ್ರೀಲೋಲ ಪತಿಗೆ ಕರಿಷ್ಮಾ ಕಪೂರ್ ಸೋಡಾ ಚೀಟಿ
ಸುದೀರ್ಘ ಸಮಯದ ಬಳಿಕ ಮತ್ತೆ 'ಡೇಂಜರಸ್ ಇಷ್ಕ್' ಚಿತ್ರದ ಮೂಲಕ ಬಣ್ಣ ಹಚ್ಚಿರುವ ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಸಂಸಾರ ಸಾಗರದಲ್ಲಿ ಇನ್ನೊಂದು ಸುತ್ತಿನ ಸುನಾಮಿ ಅಲೆಗಳೆದ್ದಿವೆ. 'ರಾಜ ಹಿಂದೂಸ್ತಾನಿ' ಚಿತ್ರದ ಮೂಲಕ ಪಡ್ಡೆಗಳ ಹೃದಯದ ಮೇಲೆ ಚಿರಮುದ್ರೆಯೊತ್ತಿದ ಈ ಬೆಡಗಿ ತನ್ನ ಗಂಡ ಸಂಜಯ್ ಕಪೂರ್ಗೆ ಕಡೆಗೂ ಡೈವೋರ್ಸ್ ನೀಡಲು ಅರ್ಜಿ ಸಲ್ಲಿಸಿದ್ದಾರೆ.
ಈ ಮೂಲಕ ಹಾಲು ನೀರಿನಂತೆ ಬೆರೆತುಹೋಗಿದ್ದ ಇವರಿಬ್ಬರ ಸಂಸಾರದಲ್ಲಿ ಹಾಲಾಹಲ ಎದ್ದಿದೆ. ತನ್ನ ಇಬ್ಬರು ಮಕ್ಕಳ ಪೋಷಣೆಗಾಗಿ ಕರಿಷ್ಮಾ ಮತ್ತೆ ಬೆಳ್ಳಿತೆರೆಗೆ ಅಡಿಯಿಟ್ಟು ಹೊಸ ಜೀವನ ಶುರು ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಸಂಜಯ್ ಜೊತೆ ಸಂಘರ್ಷ ನಡೆಯುತ್ತಲೇ ಇತ್ತು. ಡೈವೋರ್ಸ್ ಮೂಲಕ ಅದಕ್ಕೆ ಪೂರ್ಣ ವಿರಾಮ ಇಡಲು ಕರಿಷ್ಮಾ ಹೊರಟಿದ್ದಾರೆ.
ಸಾಕಷ್ಟು ಸಮಯದಿಂದ ತನ್ನ ಗಂಡ ಸಂಜಯ್ರಿಂದ ಕರಿಷ್ಮಾ ದೂರವೇ ಉಳಿದಿದ್ದರು. ಈಗ ಅಧಿಕೃತವಾಗಿ ಬೇರ್ಪಡಲು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಬ್ಬರು ಆಗ ಸರಿಹೋಗುತ್ತಾರೆ, ಈಗ ಸರಿಹೋಗುತ್ತಾರೆ ಎಂದು ನಿರೀಕ್ಷೆಸಿದ್ದೇ ಬಂತು. ಕರಿಷ್ಮಾ ಪೋಷಕರು ಇವರಿಬ್ಬರನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲವೂ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಗಿದೆ.
ಕಡೆಗೆ ಇಬ್ಬರೂ ಬೇರ್ಪಡಲು ನಿರ್ಧರಿಸಿದ್ದಾರೆ. ಸಂಜಯ್ ಹೇಳಿಕೇಳಿ ಸ್ತ್ರೀಲೋಲ. ಈ ಬಗ್ಗೆ ಕರಿಷ್ಮಾ ಆತನಿಗೆ ಎಷ್ಟು ಬುದ್ಧಿ ಹೇಳಿದರು ಆತ ತನ್ನ ಚಾಳಿ ಬಿಡಲಿಲ್ಲ. ಕಡೆಗೆ ಆತನ ವರ್ತನೆ ಬಗ್ಗೆ ರೋಸಿಹೋಗಿ ಆತನಿಂದ ಬೇರ್ಪಡಲು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್)