Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೂ.ಎನ್ಟಿಆರ್ ಸಹನಟಿಗೆ ಕಾಡುತ್ತಿದೆ ಖಿನ್ನತೆ: ಸಾಯುವ ಭೀತಿ!
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಸಾವಿಗೆ ಖಿನ್ನತೆಯೇ ಕಾರಣ ಎನ್ನಲಾಗುತ್ತಿದೆ.
Recommended Video
ಸುಶಾಂತ್ ಸಿಂಗ್ ಸಾವಿನ ನಂತರ ಖಿನ್ನತೆ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಹಲವಾರು ನಟ-ನಟಿಯರು ಖಿನ್ನತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಜೂ.ಎನ್ಟಿಆರ್ ಜೊತೆ ನಟಿಸಿದ್ದ ನಟಿಯೊಬ್ಬರು ಆಘಾತಕಾರಿ ಮಾಹಿತಿಯನ್ನು ಹೊರಗೆಡವಿದ್ದು, ತಾವು ಕೆಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ತಾವು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಹೇಳುತ್ತಿದ್ದಾರೆ.
ಊಸರವಳ್ಳಿ ಸಹನಟಿಗೆ ಖಿನ್ನತೆ
ಜೂ.ಎನ್ಟಿಆರ್-ತಮನ್ನಾ ನಟಿಸಿದ್ದ 'ಊಸರವಳ್ಳಿ' ಸಿನಿಮಾದಲ್ಲಿ ಚಿತ್ರ ಪಾತ್ರ ನಿರ್ವಹಿಸಿದ್ದ ನಟಿ ಪಾಯಲ್ ಘೋಷ್ ಕಳೆದ ಐದು ವರ್ಷದಿಂದ ಖಿನ್ನತೆಯಿಂದ ಬಳಲುತ್ತಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಸಾಯುವ ಭಯ ಕಾಡುತ್ತದೆಯಂತೆ
ನನಗೆ ಸಾಯುವ ಭಯ ಕಾಡುತ್ತದೆ. ಆಗಾಗ ತೀವ್ರ ಆಘಾತಕ್ಕೆ ಒಳಗಾಗುತ್ತೇನೆ. 'ನನಗೆ ಸಾಯುವ ಭಯ ಕಾಡುತ್ತದೆ. ಯಾರೊ ಕೊಲ್ಲುತ್ತಾರೆ ಎನಿಸುತ್ತಾರೆ, ಕೂಡಲೆ ನಾನು ಕೋಕಿಲಾಬೆನ್ ಆಸ್ಪತ್ರೆಗೆ ಹೋಗುತ್ತೇನೆ' ಎಂದು ತಾವೆದುರಿಸುತ್ತಿರುವ ಸಮಸ್ಯೆ ಬಗ್ಗೆ ಬರೆದುಕೊಂಡಿದ್ದಾರೆ ಪಾಯಲ್.
'ಕುಟುಂಬದವರು, ಸ್ನೇಹಿತರು ಸಹಾಯ ಮಾಡುತ್ತಾರೆ'
ಈ ರೀತಿಯ ಆಘಾತಗಳಾದಾಗ ನನಗೆ ನನ್ನ ಕುಟುಂಬದವರು, ಸ್ನೇಹಿತರು ಬೆಂಬಲ ಕೊಡುತ್ತಾರೆ. ನನ್ನ ಈ ಅಸಂಬಂಧ್ಧ ವರ್ತನೆಗಳನ್ನೆಲ್ಲಾ ಅವರು ಸಹಿಸಿಕೊಂಡು ಸಹಕರಿಸುತ್ತಿದ್ದಾರೆ. ನಾನು ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ ನಟಿ.
'ತಾಯಿ ಮತ್ತು ತಂಗಿಗೂ ಹೀಗೆ ಆಗುತ್ತದೆ'
ಮುಂದುವರೆದು, 'ಈ ಮಾನಿಸಕ ಆಘಾತಗಳು ಅನುವಂಶಿಕವಾಗಿ ನನಗೆ ಬಂದಿವೆ. ನನ್ನ ತಾಯಿಗೂ ಹೀಗೆ ಆಗುತ್ತಿತ್ತು, ನನ್ನ ಸಹೋದರಿಗೂ ಆಗುತ್ತದೆ, ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಸಮಸ್ಯೆ ಇಲ್ಲ, ನಾನು ಸಂತೋಷವಾಗಿದ್ದೇನೆ. ನನ್ನ ಜೀವನವನ್ನು ನಾನು ಪ್ರೀತಿಸುತ್ತಿದ್ದೇನೆ' ಎಂದಿದ್ದಾರೆ ನಟಿ.
ಜೂ.ಎನ್ಟಿಆರ್ ಬೆಂಬಲಕ್ಕೆ ನಿಂತಿದ್ದ ನಟಿ
ಜೂ.ಎನ್ಟಿಆರ್ ಅಭಿಮಾನಿಗಳ ಮೇಲೆ ಮೀರಾ ಚೋಪ್ರಾ ಗರಂ ಆಗಿದ್ದಾಗ, ಎನ್ಟಿಆರ್ ಬೆಂಬಲಕ್ಕೆ ನಿಂತಿದ್ದ ನಟಿ ಪಾಯಲ್ ಘೋಷ್, ಎನ್ಟಿಆರ್ ಗೆ ಮಹಿಳೆಯರನ್ನು ಗೌರವಿಸುವುದು ಗೊತ್ತು' ಎಂದಿದ್ದರು. ಅದಕ್ಕೆ ಘಟನೆಯನ್ನು ಉದಾಹರಣೆಯಾಗಿಯೂ ನೀಡಿದ್ದರು.