Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧಾರ್ಮಿಕ ಭಾವನೆಗೆ ಧಕ್ಕೆ: ಸಂಕಷ್ಟದಲ್ಲಿ ಅಜಯ್ ದೇವಗನ್-ಸಿದ್ಧಾರ್ಥ್ ಸಿನಿಮಾ!
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ನಟ ಅಜಯ್ ದೇವಗನ್-ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಸಿನಿಮಾ ಗುರಿಯಾಗಿದೆ.
ಅಜಯ್ ದೇವಗನ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಒಟ್ಟಿಗೆ ನಟಿಸಿದ್ದ 'ಥ್ಯಾಂಕ್ ಗಾಡ್' ಹಿಂದಿ ಸಿನಿಮಾದ ಟ್ರೈಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಟ್ರೈಲರ್ ನೋಡಿದ ವಕೀಲ ಹಿಮಾಂಶು ಶ್ರೀವಾಸ್ತವ್ ಎಂಬುವರು ಉತ್ತರ ಪ್ರದೇಶದ ಜಾನ್ಪುರದಲ್ಲಿ ಸಿನಿಮಾದ ವಿರುದ್ಧ ದೂರು ದಾಖಲಿಸಿದ್ದಾರೆ.
ಥ್ಯಾಂಕ್ ಗಾಡ್ ಚಿತ್ರದ ಟ್ರೇಲರ್, ಹಿಂದು ಧರ್ಮವನ್ನು ಅಪಹಾಸ್ಯ ಮಾಡಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿದಾರ ಹಿಮಾಂಶು ಶ್ರೀವತ್ಸ ದೂರಿನಲ್ಲಿ ಆರೋಪಿಸಿದ್ದಾರೆ. ಟ್ರೈಲರ್ನಲ್ಲಿರುವಂತೆ ಅಜಯ್ ದೇವಗನ್ ಆಧುನಿಕ ಅವತಾರದ ಚಿತ್ರಗುಪ್ತನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ, ಇದು ಹಿಂದು ಧಾರ್ಮಿಕ ಭಾವನೆಗೆ ತಂದಿರುವ ಧಕ್ಕೆ ಎಂದಿರುವ ಅರ್ಜಿದಾರರು, ಭಗವಾನ್ ಚಿತ್ರಗುಪ್ತರನ್ನು ಆಕ್ಷೇಪಕರ ರೀತಿಯಲ್ಲಿ ಪ್ರಸ್ತುತಪಡಿಸಿದ್ದಾರೆ ಮತ್ತು ಚಿತ್ರಗುಪ್ತನ ಪಾತ್ರಧಾರಿ ಅಸಹ್ಯವಾದ ಜೋಕ್ಗಳು ಮತ್ತು ಆಕ್ಷೇಪಾರ್ಹ ಪದಗಳನ್ನು ಬಳಸಿರುವುದನ್ನು ತೋರಿಸಲಾಗಿದೆ ಎಂದು ಶ್ರೀವಾಸ್ತವ್ ಆರೋಪಿಸಿದ್ದಾರೆ.
'ಥ್ಯಾಂಕ್ ಗಾಡ್' ಸಿನಿಮಾದ ಟ್ರೈಲರ್ನಲ್ಲಿ ಭಗವಾನ್ ಚಿತ್ರಗುಪ್ತರನ್ನು ಅಪಮಾನ ಮಾಡಲಾಗಿದೆ ಎಂದಿರುವ ಶ್ರೀವಾಸ್ತವ್, ಚಿತ್ರಗುಪ್ತರನ್ನು ಕರ್ಮಗಳ ದೇವರೆಂದು ಪರಿಗಣಿಸಲಾಗುತ್ತದೆ. ಆತ ಮನುಷ್ಯರ ಪಾಪ-ಪುಣ್ಯಗಳ ಲೆಕ್ಕ ಇಡುತ್ತಾರೆ. ಚಿತ್ರಗುಪ್ತ ದೇವರನ್ನು ಹೀಗೆ ತುಚ್ಛವಾಗಿ ಚಿತ್ರೀಕರಿಸಿರುವುದು ದೇವರಿಗೆ, ಹಿಂದುಗಳ ಧಾರ್ಮಿಕ ಭಾವನೆಗೆ ಮಾಡಿದ ಧಕ್ಕೆ'' ಎಂದಿದ್ದಾರೆ.
'ದೇವರು ಮತ್ತು ದೇವತೆಗಳನ್ನು ಗೇಲಿ ಮಾಡುವ ಮೂಲಕ ಸಾರ್ವಜನಿಕ ಶಾಂತಿಯನ್ನು ಕದಡಲು ಬಾಲಿವುಡ್ನ ಯೋಜಿತ ಪಿತೂರಿ ಇದು' ಎಂದಿರುವ ದೂರುದಾರ ಶ್ರೀವಾಸ್ತವ್, 'ಥ್ಯಾಂಕ್ ಗಾಡ್' ಸಿನಿಮಾದ ನಿರ್ಮಾಪಕ ಮತ್ತು ನಟರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನವೆಂಬರ್ 18ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.
'ಥ್ಯಾಂಕ್ ಗಾಡ್' ಸಿನಿಮಾದಲ್ಲಿ ಅಜಯ್ ದೇವಗನ್ ಚಿತ್ರಗುಪ್ತನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಸೂಟು ಭೂಟು ಧರಿಸಿದ ಆಧುನಿಕ ಚಿತ್ರಗುಪ್ತನ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದಾರೆ. ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯೊಬ್ಬ (ಸಿದ್ಧಾರ್ಥ್ ಮಲ್ಹೋತ್ರಾ) ಯಮಲೋಕಕ್ಕೆ ಹೋದಾಗ ಅವನಿಗೆ ಅವನ ಪಾಪದ ಲೆಕ್ಕಗಳನ್ನು ತೋರಿಸಿ ಮನುಷ್ಯನ ದುರ್ಗುಣಗಳು, ಮನೋವಿಕಾರಗಳು, ಚಂಚಲತೆ ಇನ್ನಿತರೆಗಳ ಬಗ್ಗೆ ಪಾಠ ಕಲಿಸುತ್ತಾನೆ. ಆದರೆ ಇದನ್ನು ಹಾಸ್ಯಮಯವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾದಲ್ಲಿ ಅಜಯ್ ದೇವಗನ್, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ರಕುಲ್ ಪ್ರೀತ್ ಸಿಂಗ್, ನೋರಾ ಫತೇಹಿ, ಶಾಲಿನಿ ತಾರಕ, ವಿಕ್ರಂ ಕೊಚ್ಚರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಇಂದ್ರ ಕುಮಾರ್ ನಿರ್ದೇಶನ ಮಾಡಿದ್ದು, ಅಕ್ಟೋಬರ್ 25 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.