Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವರ ರೀತಿ ರಿಷಬ್ ಶೆಟ್ಟಿ ಆಗುವುದು ಬೇಡ, ಎಚ್ಚರಿಕೆ ನೀಡಿದ ಬಾಲಿವುಡ್ ಸ್ಟಾರ್ ನಿರ್ದೇಶಕ
'ಕಾಂತಾರ' ಒಂದೇ ಸಿನಿಮಾ ಮೂಲಕ ರಿಷಬ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ನಿರ್ದೇಶಕ ಎನಿಸಿಕೊಂಡಿದ್ದಾರೆ.
ಹಿಂದಿಯ ಜನಪ್ರಿಯ ಮಾಧ್ಯಮ ಸಂಸ್ಥೆಗಳು ರಿಷಬ್ರನ್ನು ಕರೆದು ವಿಶೇಷ ಸಂದರ್ಶನಗಳನ್ನು ಮಾಡಿವೆ. ಮಾಧ್ಯಮಗಳ ಕಾನ್ಕ್ಲೇವ್ಗಳಲ್ಲಿ ಭಾಗವಹಿಸಿದ್ದಾರೆ. ಬಾಲಿವುಡ್-ದಕ್ಷಿಣದ ಸಿನಿಮಾ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಕೆಲವು ಬಾಲಿವುಡ್ ನಿರ್ದೇಶಕರು ರಿಷಬ್ ಅವರನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್ನವರು ಹೀಗೆ ಸಿನಿಮಾ ಮಾಡಬೇಕು ಎಂದಿದ್ದಾರೆ. ಈ ನಡುವೆ ಬಾಲಿವುಡ್ನ ಟಾಪ್ ನಿರ್ದೇಶಕನೊಬ್ಬ ರಿಷಬ್ ಶೆಟ್ಟಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ರಿಷಬ್ ಮಾತ್ರವೇ ಅಲ್ಲದೆ, ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಗೂ ಕೆಲವು ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.
ಬಾಲಿವುಡ್ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್, ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದ ಅನುರಾಗ್ ಕಶ್ಯಪ್, ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆಯೂ ಅದೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರಿಗೆ ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ.
ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಸಲಹೆ
ರಿಷಬ್ ತಮ್ಮ ತನ ಬಿಟ್ಟುಕೊಡಬಾರದು. ಒಂದೊಮ್ಮೆ ಅವರು ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದರೆ ಮರಾಠಿ ಚಿತ್ರರಂಗ ಹಾಳಾದಂತೆ ಕನ್ನಡವೂ ಆಗುತ್ತದೆ ಎಂದಿದ್ದಾರೆ. ಮರಾಠಿಯ 'ಸೈರಾಟ್' ಸಿನಿಮಾ ಹಿಟ್ ಆದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಅಷ್ಟು ಕಡಿಮೆ ಬಜೆಟ್ನಲ್ಲಿ ಕೋಟಿಗಳು ಸಂಪಾದಿಸಬಹುದು ಎಂಬುದು ಗೊತ್ತಾಯಿತು. ಆದರೆ ಸೈರಾಟ್ ನಿಂದಾಗಿ ಮರಾಠಿ ಚಿತ್ರರಂಗ ಹಾಳಾಯಿತು ಎಂದಿದ್ದಾರೆ ಅನುರಾಗ್ ಕಶ್ಯಪ್.
'ಮರಾಠಿ ಚಿತ್ರರಂಗವನ್ನು ಹಾಳು ಮಾಡಿತು 'ಸೈರಾಟ್'
'ಸೈರಾಟ್' ಸಿನಿಮಾ ಹಿಟ್ ಆದ ಬಳಿಕ ಎಲ್ಲರೂ ಅದೇ ರೀತಿಯ ಸಿನಿಮಾ ಮಾಡಲು ಮುಂದಾದರು. ಎಲ್ಲರೂ ಸಹ ದೊಡ್ಡ ಮೊತ್ತದ ಕಲೆಕ್ಷನ್ ಮೇಲೆ ಕಣ್ಣಿಟ್ಟರು. ಕಡಿಮೆ ಬಜೆಟ್ನಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದ ನಿರ್ದೇಶಕರು ಸಹ ಸೈರಾಟ್ನಿಂದ ಪ್ರೇರಣೆಗೊಂಡು ಬಾಕ್ಸ್ ಆಫೀಸ್ಗಾಗಿ ಸಿನಿಮಾ ಮಾಡಲು ಆರಂಭಿಸಿದರು ಇದರಿಂದಾಗಿ ಮರಾಠಿ ಸಿನಿಮಾಗಳ ಗುಣಮುಟ್ಟವೇ ಕುಸಿಯಿತು ಎಂದಿದ್ದಾರೆ ಅನುರಾಗ್ ಕಶ್ಯಪ್.
ಬಾಕ್ಸ್ ಆಫೀಸ್ಗಾಗಿ ರಿಷಬ್ ಸಿನಿಮಾ ಮಾಡಬಾರದು: ಅನುರಾಗ್
ರಿಷಬ್ ಶೆಟ್ಟಿ ಸಹ ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಳ್ಳದೆ ತಮ್ಮದೇ ಮಾದರಿಯಲ್ಲಿ ಸಿನಿಮಾ ಮಾಡುತ್ತಾ ಸಾಗಬೇಕು. ಒಂದೊಮ್ಮೆ ಅವರು ಬಾಕ್ಸ್ ಆಫೀಸ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದರೆ ಸೋಲನುಭವಿಸುತ್ತಾರೆ. ಅನವಶ್ಯಕವಾಗಿ ತಮ್ಮ ಸಿನಿಮಾ ಬಜೆಟ್ ಏರಿಸಿಕೊಳ್ಳುವುದು ಸಹ ಸೂಕ್ತವಲ್ಲ. ರಿಷಬ್ ಮಾತ್ರವಲ್ಲ, ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಸಹ ತಮ್ಮ ತನವನ್ನು ಬಿಟ್ಟು ಬಾಕ್ಸ್ ಆಫೀಸ್ಗಾಗಿ ಸಿನಿಮಾ ಮಾಡಬಾರದು ಎಂದಿದ್ದಾರೆ.
ಹಾಲಿವುಡ್ ನಿರ್ದೇಶಕನ ಉದಾಹರಣೆ
ಹಾಲಿವುಡ್ ನಿರ್ದೇಶಕನೊಬ್ಬನ ಉದಾಹರಣೆಯನ್ನೂ ಅನುರಾಗ್ ಕಶ್ಯಪ್ ನೀಡಿದ್ದು, ಜೇಸಮ್ ಬ್ಲಮ್ ಈ ವಿಷಯದಲ್ಲಿ ನನಗೆ ಬಹಳ ಇಷ್ಟ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಎಷ್ಟೇ ದೊಡ್ಡ ಹಿಟ್ ಆದರೂ ಸಹ ಅವರು ತಮ್ಮ ಸಿನಿಮಾಗಳ ಬಜೆಟ್ ಅನ್ನು ಹೆಚ್ಚಿಸಿಕೊಳ್ಳಲಿಲ್ಲ. ತಾವು ಹೇಗೆ ಸಿನಿಮಾ ಮಾಡುತ್ತಿದ್ದರೋ ಆ ವಿಧಾನಕ್ಕೆ ನಿಷ್ಠರಾಗಿದ್ದು ಅವರ ಸ್ಟೈಲ್ನಂತೆಯೇ ಸಿನಿಮಾ ಮಾಡುತ್ತಾ ಹೋದರು ಎಂದಿದ್ದಾರೆ ಅನುರಾಗ್.