twitter
    For Quick Alerts
    ALLOW NOTIFICATIONS  
    For Daily Alerts

    'ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡ್ತಿರುವ ನಟರಿಗೆ ಸಿನಿಮಾ ಮಾಡಲು ಸಮಯವಿಲ್ಲ'

    |

    ಸಿನಿಮಾ ನಟರು ಅಥವಾ ಯಾವುದೇ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸತಲ್ಲ. ಆದರೆ ನಟರು ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸದೇ ಕೇವಲ ಜಾಹೀರಾತುಗಳ ಮೇಲಷ್ಟೇ ಗಮನ ಹರಿಸುತ್ತಿದ್ದಾರೆ. ಸದ್ಯ ಭಾರತೀಯ ಚಿತ್ರರಂಗದ ಬೆಳವಣಿಗೆ ಇದಾಗಿದ್ದು, ಈ ಬಗ್ಗೆ ಸಿನಿ ಪ್ರಿಯರು ಕೂಡ ಬೇಸರಗೊಂಡಿದ್ದಾರೆ.

    ಕೆಲವು ವಸ್ತುಗಳಿಗೆ ಕೆಲ ನಟರು ಬ್ರಾಂಡ್​ ಅಂಬಾಸಿಡರ್​ಗಳಾಗಿದ್ದಾರೆ. ಆ ವಸ್ತುವಿನ ಪ್ರಚಾರದಲ್ಲೇ ಸದಾ ಅವರು ಬ್ಯುಸಿಯಾಗಿರುತ್ತಾರೆ. ಇತ್ತ ತಮ್ಮ ಚಿತ್ರಗಳು ಸಾಲು ಸಾಲು ಸೋಲು ಕಂಡರೂ ಕ್ಯಾರೇ ಎನ್ನದ ನಟರು ಜಾಹೀರಾತು ಚಿತ್ರೀಕರಣದಲ್ಲಿ ಬ್ಯೂಸಿಯಾಗುತ್ತಾರೆ. ಈ ಬಗ್ಗೆ ನಿರ್ಮಾಪಕರು ನಿರ್ದೇಶಕರು ಅಷ್ಟೇ ಅಲ್ಲ. ಸ್ಟಾರ್​ ನಟರ ಅಭಿಮಾನಿಗಳು ಕೂಡ ಅಸಮಾಧಾನಗೊಂಡಿದ್ದಾರೆ.

    ಬಾಲಿವುಡ್​ ನಟರಾದ ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಶಾರುಖ್​ ಖಾನ್​ ಇತ್ತೀಚಿಗೆ ಪಾನ್​ ಮಸಾಲ ಜಾಹೀರಾತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ್ರೂ ಕೂಡ ನಟರು ಕ್ಯಾರೇ ಎನ್ನುತ್ತಿಲ್ಲ. ಆದರೆ ಈ ನಟರ ಚಿತ್ರಗಳು ಸೋಲು ಕಂಡು ನಿರ್ಮಾಪಕರಿಗೆ ಬರೆ ಹಾಕುತ್ತಿವೆ. ಈ ಬಗ್ಗೆ 'ರಾಜ್​ನೀತಿ' ಸೇರಿದಂತೆ ಅನೇಕ ವೆಬ್​ ಸೀರಿಸ್​ಗಳನ್ನು ಮಾಡಿರುವ ಪ್ರಕಾಶ್​ ಝಾ ಬಾಲಿವುಡ್​ ನಿರ್ದೇಶಕರ ಪರವಾಗಿ ಮೊದಲ ಬಾರಿಗೆ ನಟರ ವಿರುದ್ಧ ತುಟಿ ಬಿಚ್ಚಿದ್ದಾರೆ.

     ನಿರ್ದೇಶಕರ ಪರ ತುಟಿ ಬಿಚ್ಚಿದ ಪ್ರಕಾಶ್​ ಝಾ

    ನಿರ್ದೇಶಕರ ಪರ ತುಟಿ ಬಿಚ್ಚಿದ ಪ್ರಕಾಶ್​ ಝಾ

    ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಕಾಶ್​ ಝಾ, ಪಾನ್​ ಮಸಾಲಾ ಬ್ರಾಂಡ್​ಗಳಿಗೆ ಜಾಹೀರಾತು ನೀಡುತ್ತಿರುವ ನಟರನ್ನು ಟೀಕಿಸಿದ್ದಾರೆ. "ಕೆಲವು ಕಂಪನಿಗಳು ನಟರನ್ನು ಕೊಳ್ಳಲು ಸಿದ್ಧವಾಗಿದೆ. ಗುಟ್ಕಾ ಜಾಹೀರಾತಿನಲ್ಲಿ ಹಣ ಮಾಡಲು ನಿರತರಾಗಿರುವ ಕೆಲವು ಸ್ಟಾರ್​ ನಟರಿಗೆ ನಮ್ಮಂತಹ ನಿರ್ದೇಶಕರ ಜೊತೆ ಕೆಲಸ ಮಾಡಲು ಸಮಯವಿಲ್ಲ. ಜಾಹೀರಾತಿನಲ್ಲಿ ನಟಿಸಿ ಈಗಾಗಲೇ ಅವರ ಖಾತೆಯಲ್ಲಿ 50 ಕೋಟಿ ರೂ. ಇದೆ. ಹೀಗಿರುವಾಗ ಅವರು ಸಿನಿಮಾಗಳ ಬಗ್ಗೆ ಯಾಕೆ ಯೋಚಿಸುತ್ತಾರೆ" ಎಂದು ಟೀಕಿಸಿದರು.

     ಬಾಲಿವುಡ್​ ನಟರ ವಿರುದ್ಧ ಸಿಡಿಮಿಡಿಗೊಂಡ ನಿರ್ದೇಶಕ

    ಬಾಲಿವುಡ್​ ನಟರ ವಿರುದ್ಧ ಸಿಡಿಮಿಡಿಗೊಂಡ ನಿರ್ದೇಶಕ

    "ಇನ್ನು ಈ ಸ್ಟಾರ್​ ನಟರು ಪ್ರಚಾರ ಮಾಡುವ ಪಾನ್​ ಮಸಾಲ ಜಾಹೀರಾತು ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಟರು ಪ್ರಚಾರ ಮಾಡುವುದರಿಂದ ಮಕ್ಕಳು ಕೂಡ ಕೆಟ್ಟ ಅಭ್ಯಾಸಗಳನ್ನು ಕಲಿಯುತ್ತಿದ್ದಾರೆ ಎಂದು ಪ್ರಾಂಶುಪಾಲರೊಬ್ಬರು ಹೇಳಿದ್ದರು" ಎಂದು ಪ್ರಕಾಶ್​ ಝಾ ನೆನಪಿಸಿಕೊಂಡರು. ತಮ್ಮ ಅಭಿಮಾನಿಗಳು ತಮ್ಮ ಸೈಲ್​ ಮಾತ್ರವಲ್ಲದೇ ತಮ್ಮ ನಡೆಯನ್ನು ತಾವು ಹೇಳುವ ವಿಚಾರವನ್ನು ಅನುಸರಿಸುತ್ತಾರೆ ಎನ್ನುವ ಪ್ರಜ್ಞೆ ಇಲ್ಲದೆ ನಟಿಸುವ ನಟರ ಬಗ್ಗೆ ಪ್ರಕಾಶ್​ ಝಾ ಬೇಸರ ವ್ಯಕ್ತಪಡಿಸಿದರು.

     ಬಾಲಿವುಡ್​ ನಟರಿಗೆ ಸಿನಿಮಾ ಬಗ್ಗೆ ಚಿಂತೆ ಇಲ್ಲ

    ಬಾಲಿವುಡ್​ ನಟರಿಗೆ ಸಿನಿಮಾ ಬಗ್ಗೆ ಚಿಂತೆ ಇಲ್ಲ

    ಇತ್ತೀಚೆಗೆ ಸ್ಯಾಂಡಲ್​ವುಡ್​ ಸೇರಿದಂತೆ ಅನೇಕ ಚಿತ್ರರಂಗವನ್ನು ಹಿಂದಿಕ್ಕುತ್ತಿರುವ ಹಾಗೂ ಬಾಲಿವುಡ್​ ಸಿನಿಮಾಗಳ ಸೋಲಿನ ಬಗ್ಗೆ ಮಾತನಾಡಿದ ಅವರು, "ಬಾಲಿವುಡ್​ ನಟರು ತಮ್ಮ ಸಂಭಾವನೆ 400 ಕೋಟಿ ಎಂದು ತಿಳಿದು ಬಳಿಕ ಅವರು ಚಿತ್ರದ ಬಗ್ಗೆಯಾಗಲಿ, ಚಿತ್ರದ ಕಥಾ ವಸ್ತು ಬಗ್ಗೆಯಾಗಲಿ ಚಿಂತೆ ಮಾಡುವುದಿಲ್ಲ. ಅದು ಆತನ ತಪ್ಪಲ್ಲ. ಈ ಬಗ್ಗೆ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಮತ್ತು ಚಿತ್ರತಂಡ ಯೋಚಿಸಬೇಕು. ನಟರ ಸಂಭಾವನೆ ಹಾಗೂ ಆತನ ಕೆಲಸದ ಬಗ್ಗೆ ನಿರ್ಮಾಪಕರು ಗಂಭೀರವಾಗಿ ಯೋಚಿಸಬೇಕು" ಎಂದರು.

     ಒಳ್ಳೆ ಸಿನಿಮಾಗೆ ಬಾಯ್‌ಕಾಟ್​ ಭಯವಿಲ್ಲ

    ಒಳ್ಳೆ ಸಿನಿಮಾಗೆ ಬಾಯ್‌ಕಾಟ್​ ಭಯವಿಲ್ಲ

    ಇನ್ನು ಕೆಲದಿನಗಳಿಂದ ಬಾಲಿವುಡ್​ನಲ್ಲಿ ಬಾಯ್‌ಕಾಟ್ ಎನ್ನುವ ಶಬ್ದ ಭಾರೀ ಜನಪ್ರಿಯವಾಗಿದೆ. ಚಿತ್ರದ ನಾಯಕ ಅಥವಾ ಚಿತ್ರದ ಕಥಾವಸ್ತುವಿನಿಂದ ಪ್ರೇಕ್ಷಕರು ಇತ್ತೀಚಿಗೆ ಚಿತ್ರವನ್ನೇ ಬಹಿಷ್ಕರಿಸುವ ಅಭಿಯಾನ ನಡೆಸುತ್ತಿದ್ದಾರೆ. ಇತ್ತೀಚಿಗೆ ತೆರೆ ಕಂಡ ಬ್ರಹ್ಮಾಸ್ತ್ರ ಚಿತ್ರತಂಡಕ್ಕೂ ಬಾಯ್ಕಾಟ್​ ಬಿಸಿ ತಟ್ಟಿತ್ತು. ಈ ಬಗ್ಗೆ ಪ್ರಕಾಶ್ ಶಾ ಮಾತನಾಡಿದ್ದು, ಒಂದು ಒಳ್ಳೆಯ ಕಥೆ ಇಟ್ಟುಕೊಂಡು ಕೆಲಸ ಮಾಡಲು ಹೊರಟಿರುವ ವ್ಯಕ್ತಿ ಈ ಬಗ್ಗೆ ಯೋಚಿಸುವ ಅವಶ್ಯಕತೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡುವುದೇ ದೊಡ್ಡ ಸವಾಲು ಎಂದು ಬಾಲಿವುಡ್​ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    English summary
    Director Prakash jha slammed certain bollywood actors for endorsing pan masala brands.
    Sunday, September 18, 2022, 20:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X