Don't Miss!
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಅಖಾಡಕ್ಕೆ
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕ್ರಿಮಿನಲ್ ಕೇಸ್ ನಿಂದ ಕ್ಲೀನ್ ಚಿಟ್ ಪಡೆದ ಹೃತಿಕ್ ಮಾಜಿ ಪತ್ನಿ ಸುಸೇನ್
ಬಾಲಿವುಡ್ ನ ಸುಂದರ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರ ವಿರುದ್ಧ, ಎರಡು ತಿಂಗಳ ಹಿಂದೆ (ಜೂನ್ ತಿಂಗಳಿನಲ್ಲಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಸುಮಾರು 1.9 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು, ಆರೋಪಿಸಿ ಎಂ.ಜಿ ಎಂಟರ್ ಪ್ರೈಸಸ್, ಗೋವಾ ಠಾಣೆಗೆ ದೂರು ನೀಡಿತ್ತು.[ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್]
ಸುಸೇನ್ ಖಾನ್ ವಾಣಿಜ್ಯೋದ್ಯಮಿ ಹಾಗೂ ಒಳಾಂಗಣ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ವಿರುದ್ಧ ಎಂ.ಜಿ ಎಂಟರ್ ಪ್ರೈಸಸ್ ಕಂಪೆನಿ (Emgee Enterprises), ತಮಗೆ ಸುಸೇನ್ ಖಾನ್ ಅವರು ಚೀಟ್ ಮಾಡಿದ್ದಾರೆ ಎಂದು ಗೋವಾ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.[ಮಕ್ಕಳಿಗೋಸ್ಕರ ಮತ್ತೆ ಒಂದಾದ್ರಾ ಹೃತಿಕ್-ಸುಸೇನ್.?]
ಆದರೆ ಇದೀಗ ಈ ಕಂಟಕದಿಂದ ಸುಸೇನ್ ಅವರಿಗೆ ಮುಕ್ತಿ ದೊರೆತಿದ್ದು, ಹೃತಿಕ್ ಮಾಜಿ ಪತ್ನಿ ಉಸ್ಸಪ್ಪಾ...ಅಂತ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದೆ ಓದಿ......
ತಳ್ಳಿ ಹಾಕಿದ ಕೋರ್ಟ್
ಇದೀಗ ಈ ಕೇಸ್ ಅನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಗುರುವಾರ (ಆಗಸ್ಟ್ 25) ದಂದು ಕೇಸ್ ನಡೆಸಿದ ಹೈಕೋರ್ಟ್, ಸುಸೇನ್ ಖಾನ್ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಅನ್ನು ಸಾರಾಸಗಾಟವಾಗಿ ತಳ್ಳಿ ಹಾಕಿದೆ.[ಉಗ್ರರ ಬಾಂಬ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹೃತಿಕ್]
ಎಫ್.ಐ.ಆರ್ ನಲ್ಲಿ ಏನೇನೂ ಇಲ್ಲ
"ಸುಸೇನ್ ಖಾನ್ ವಿರುದ್ಧ ದಾಖಲಾಗಿದ್ದ ಎಫ್.ಐ.ಆರ್ ನಲ್ಲಿ ಯಾವುದೇ ರೀತಿಯಲ್ಲಿ ಸರಿಯಾದ ಮಾಹಿತಿ ಇಲ್ಲ. ಜೊತೆಗೆ ಅವರು 1.9 ಕೋಟಿ ರೂಪಾಯಿ ವಂಚನೆ(ಅಪರಾಧ) ಮಾಡಿದ್ದಾರೆ ಅನ್ನೋದು ಕೂಡ ಎಫ್.ಐ.ಆರ್ ನಲ್ಲಿ ಬಹಿರಂಗ ಆಗಲಿಲ್ಲ" ಎಂದು ಕೋರ್ಟ್ ತಿಳಿಸಿದೆ.
ವಾದ-ವಿವಾದ ಪರಿಶೀಲಿಸಿದ ಕೋರ್ಟ್
"ಸುಸೇನ್ ಖಾನ್ ಅವರ ವಕೀಲರಾದ ನಿತಿನ್ ಸರ್ ದೇಸಾಯಿ ಮತ್ತು ಹಿತೇಶ್ ಜೈನ್ ಅವರ ವಾದವನ್ನು ಪರಿಶೀಲಿಸಿ, ಈ ಅಪರಾಧವನ್ನು ಸುಸೇನ್ ಅವರು ಮಾಡಿಲ್ಲ" ಎಂಬುದಾಗಿ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
'ಮಧ್ಯಂತರ ಆದೇಶ' ಮುಂದೂಡಿದ ಕೋರ್ಟ್
ಸುಸೇನ್ ಖಾನ್ ಅವರ ಮೇಲೆ ಯಾವುದೇ ರೀತಿಯಲ್ಲಿ ದಬ್ಬಾಳಿಕೆ ಮಾಡೋದಾಗಲಿ, ಅಥವಾ ಇನ್ನಿತರೇ ಆಕ್ಷನ್ ತೆಗೆದುಕೊಳ್ಳುವುದಾಗಲಿ ಮಾಡಬಾರದು ಎಂದು ಕಳೆದ ತಿಂಗಳು ಕೋರ್ಟ್ ಗೋವಾ ಪೊಲೀಸರಿಗೆ ಮಧ್ಯಂತರ ಆದೇಶ ನೀಡಿತ್ತು. ಅದನ್ನೂ ಇಲ್ಲಿಯವರಗೆ ಮುಂದೂಡಲಾಗಿತ್ತು ಕೂಡ.
ಎಂಟರ್ ಪ್ರೈಸಸ್ ಕೊಟ್ಟ ದೂರಿನಲ್ಲೇನಿತ್ತು.?
"2013 ರಲ್ಲಿ ಸುಸೇನ್ ಖಾನ್ ಅವರು ತಾನೊಬ್ಬ ವಾಸ್ತು ಶಿಲ್ಪಿ (an architect) ಎಂದು ಹೇಳಿಕೊಂಡು ನಮ್ಮ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ನಿಗದಿತ ಸಮಯದೊಳಗೆ ಒಪ್ಪಿಕೊಂಡ ಕೆಲಸವನ್ನು ಪೂರೈಸುವಲ್ಲಿ ಸುಸೇನ್ ಖಾನ್ ವಿಫಲವಾಗಿದ್ದಾರೆ" ಎಂದು ಎಂ.ಜಿ ಎಂಟರ್ ಪ್ರೈಸನ್ ಗೋವಾ (Emgee Enterprises) ತಮ್ಮ ದೂರಿನಲ್ಲಿ ತಿಳಿಸಿತ್ತು.
ತಳ್ಳಿ ಹಾಕಿದ್ದ ಸುಸೇನ್
ಆದರೆ ಈ ಆರೋಪವನ್ನು ಸುಸೇನ್ ಖಾನ್ ಅವರು ಕೂಡ ತಳ್ಳಿ ಹಾಕಿದ್ದರು. ಜೊತೆಗೆ ಇದಕ್ಕೆ ಪ್ರತಿಕ್ರಿಯಿಸಿ, 'ಇಂತಹ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ. ಇದರಿಂದ ನಾನು ಅಪರಾಧಿಯಲ್ಲ ಎಂಬುದನ್ನು ಸಾಬೀತು ಪಡಿಸಲು ಕಾನೂನು ಹೋರಾಟ ನಡೆಸುತ್ತೇನೆ"ಎಂದು ಎಚ್ಚರಿಕೆ ನೀಡಿದ್ದರು.