Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೀನಾ ಅಂಬಾನಿ ಕೊಟ್ಟ ಉಡುಗೊರೆ ನೋಡಿ ಕಣ್ಣೀರಿಟ್ಟ ಬೋನಿ ಕಪೂರ್
ಮೋಹಿತ್ ಮಾರ್ವ ಮದುವೆಗೆಂದು ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಭಾರತಕ್ಕೆ ಹಿಂದಿರುಗಿ ಬರಲೇ ಇಲ್ಲ. ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ರು ನಟಿ ಶ್ರೀದೇವಿ. 'ಅತಿಲೋಕ ಸುಂದರಿ'ಯ ಹಠಾತ್ ನಿಧನದಿಂದ ಇಡೀ ಭಾರತವೇ ಆಘಾತಗೊಂಡಿತ್ತು.
ಈಗಾಗಲೇ ನಿಮಗೆಲ್ಲ ಗೊತ್ತಿರುವ ಹಾಗೆ, ಅಂಬಾನಿ ಕುಟುಂಬ ಹಾಗೂ ಕಪೂರ್ ಕುಟುಂಬದ ನಡುವೆ ಉತ್ತಮ ಒಡನಾಟ, ಸ್ನೇಹ, ಬಾಂಧವ್ಯ ಇದೆ. ಅಸಲಿಗೆ, ಅನಿಲ್ ಅಂಬಾನಿ ಪತ್ನಿ ಟೀನಾ ಸಂಬಂಧಿಯನ್ನೇ ಬೋನಿ ಕಪೂರ್ ಸಹೋದರಿಯ ಪುತ್ರ ಮೋಹಿತ್ ಮಾರ್ವಾ ವಿವಾಹವಾಗಿರೋದ್ರಿಂದ ಅನಿಲ್ ಅಂಬಾನಿ ಮತ್ತು ಬೋನಿ ಕಪೂರ್ ಸಂಬಂಧಿಗಳಾಗಿದ್ದಾರೆ.
ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲು ಅನಿಲ್ ಅಂಬಾನಿ ತಮ್ಮ ಪ್ರೈವೇಟ್ ಜೆಟ್ ನ ದುಬೈಗೆ ಕಳುಹಿಸಿಕೊಟ್ಟಿದ್ದು ನಿಮಗೆ ನೆನಪಿರಬಹುದು.
ಅಷ್ಟಕ್ಕೂ, ಶ್ರೀದೇವಿ ಮೃತದೇಹ ತರಲು ಅನಿಲ್ ಅಂಬಾನಿ ಯಾಕೆ ಪ್ರೈವೇಟ್ ಜೆಟ್ ಕಳುಹಿಸಬೇಕು.?
ಶ್ರೀದೇವಿ ಮರಣ ಹೊಂದಿದ ಬಳಿಕ, ಆಕೆಯ ನೆನಪಲ್ಲಿ ಅನಿಲ್ ಅಂಬಾನಿ ಪತ್ನಿ ಟೀನಾ ಬೋನಿ ಕಪೂರ್ ಗೆ ಶ್ರೀದೇವಿಯ ಫೋಟೋ ಒಂದನ್ನ ನೀಡಿದ್ದಾರೆ.
ಟೀನಾ ಅಂಬಾನಿ ಅವರ 61ನೇ ಹುಟ್ಟುಹಬ್ಬದಂದು ಕ್ಲಿಕ್ ಆಗಿದ್ದ ಶ್ರೀದೇವಿಯವರ ಫೋಟೋ ಅದು. ಅದಕ್ಕೆ ಬೆಳ್ಳಿ ಫ್ರೇಮ್ ಹಾಕಿಸಿ, ಬೋನಿ ಕಪೂರ್ ಗೆ ಟೀನಾ ಅಂಬಾನಿ ನೀಡಿದ್ದರು. ಶ್ರೀದೇವಿ ಭಾವಚಿತ್ರವನ್ನ ನೋಡಿ ಬೋನಿ ಕಪೂರ್ ಗದ್ಗದಿತರಾದರು.
ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?
ಅಷ್ಟಕ್ಕೂ, ಟೀನಾ ಅಂಬಾನಿ ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಫೆಬ್ರವರಿ 11, 2018 ರಲ್ಲಿ. ಅಂದ್ರೆ, ಶ್ರೀದೇವಿ ನಿಧನರಾದ ಹದಿಮೂರು ದಿನಗಳ ಹಿಂದೆ.
ಟೀನಾ ಅಂಬಾನಿ ಜನ್ಮದಿನವನ್ನ ನಟಿ ಶ್ರೀದೇವಿ, ಕರಣ್ ಜೋಹರ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ದಿಗ್ಗಜರೆಲ್ಲ ಸೇರಿ ಮುಂಬೈನಲ್ಲಿ ಸೆಲೆಬ್ರೇಟ್ ಮಾಡಿದ್ದರು. ದುರಂತ ಅಂದ್ರೆ, ಅದೇ ನಟಿ ಶ್ರೀದೇವಿಯ ಕಟ್ಟ ಕಡೆಯ ಪಾರ್ಟಿ ಆಗಿದೆ.