Just In
Don't Miss!
- Lifestyle
ಭಾನುವಾರದ ದಿನ ಭವಿಷ್ಯ: ಮೇಷ-ಮೀನದವರೆಗಿನ ದಿನ ಭವಿಷ್ಯ
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಂಗನಾ ರಣೌತ್ ಗೆ ಉದ್ಯೋಗದ ಆಫರ್ ಕೊಟ್ಟ ನಟ ದಿಲ್ಜೀತ್
ಬಾಲಿವುಡ್ ನಟ-ನಟಿಯರ ಮೇಲಿನ ವಾಗ್ದಾಳಿಯನ್ನು ನಿಲ್ಲಿಸಿಲ್ಲ ನಟಿ ಕಂಗನಾ ರಣೌತ್. ಕೆಲವು ದಿನಗಳ ಹಿಂದೆ, ಪಂಜಾಬ್ ರೈತರ ಪ್ರತಿಭಟನೆ ವಿಷಯಕ್ಕೆ ಟ್ವಿಟ್ಟರ್ನಲ್ಲಿ ಕಿತ್ತಾಡಿಕೊಂಡಿದ್ದ ಕಂಗನಾ ಹಾಗೂ ನಟ ದಿಲ್ಜಿತ್ ನಡುವೆ ಈಗ ಮತ್ತೆ ಜಗಳ ಶುರುವಾಗಿದೆ.
ಪ್ರವಾಸದಲ್ಲಿದ್ದ ದಿಲ್ಜಿತ್ ದುಸ್ಸಾಂಜ್ ಪ್ರವಾಸದ ಕೆಲವು ಚಿತ್ರಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಇದು ಕಂಗನಾ ಕಣ್ಣು ಕುಕ್ಕಿದೆ. 'ದೇಶದಲ್ಲಿ ಬೆಂಕಿ ಹಾಕಿ, ರೈತರನ್ನು ರಸ್ತೆಯ ಮಧ್ಯೆ ಕೂರಿಸಿ, ನೀವು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದೀರಾ? ಇದಕ್ಕೇ ಹೇಳುವುದು ಲೋಕಲ್ ಕ್ರಾಂತಿ ಎಂದು' ಎಂದು ದಿಲ್ಜೀತ್ ಕಾಲೆಳೆದಿದ್ದಾರೆ ಕಂಗನಾ.
ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ದಿಲ್ಜೀತ್, 'ನಿಮಗೆ ನನ್ನ ಮೇಲೆ ಬಹಳ ಆಸಕ್ತಿ ಇದ್ದಂತಿದೆ, ನಿಮಗೆ ನನ್ನ ಪಿಆರ್ ಕೆಲಸ ಕೊಡುತ್ತೇನೆ ಎಂದು ಹೇಳಿದ್ದಾರೆ. ಮುಂದುವರೆದು, ನಿಮ್ಮ ಬಗ್ಗೆ ನಿಮಗೇ ಸಾಕಷ್ಟು ಗೊಂದಲಗಳು ಇವೆ. ನಾನು ಸದಾ ಪಂಜಾಬಿಯರ ಪರವಾಗಿ ಇದ್ದೇನೆ. ನೀವು ಪಂಜಾಬರಿಗೆ ಏನು ಮಾಡಿದಿರಿ, ಹೇಗೆ ಅವರನ್ನು ಅವಮಾನಿಸಿದಿರಿ ಎಂಬುದನ್ನು ಅವರು ಮರೆಯುವುದಿಲ್ಲ' ಎಂದು ಹೇಳಿದ್ದಾರೆ ದಿಲ್ಜಿತ್.

ಸಮಯ ಎಲ್ಲವನ್ನೂ ಹೇಳುತ್ತದೆ: ಕಂಗನಾ
ದಿಲ್ಜಿತ್ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಂಗನಾ, 'ಯಾರು ರೈತರ ಹಕ್ಕುಗಳಿಗಾಗಿ ಹೋರಾಡಿದರು, ಯಾರು ರೈತರ ವಿರುದ್ಧ ಇದ್ದರು ಎಂಬುದರ ಬಗ್ಗೆ ಕಾಲವೇ ಉತ್ತರ ನೀಡಲಿದೆ. ಹೃದಯದಿಂದ ಯಾರನ್ನಾದರೂ ಪ್ರೀತಿಸಿದರೆ ಅಂಥಹವರನ್ನು ಯಾರೂ ದ್ವೇಷಿಸುವುದಿಲ್ಲ. ಪಂಜಾಬಿಗರು ನನ್ನನ್ನು ದ್ವೇಷಿಸುತ್ತಾರೆ ಎಂಬ ನಿನ್ನ ಕನಸನ್ನು ಬಿಟ್ಟುಬಿಡು, ಸತ್ಯ ತಿಳಿದರೆ ನಿನ್ನ ಹೃದಯ ಒಡೆಯುತ್ತದೆ' ಎಂದಿದ್ದಾರೆ ಕಂಗನಾ.

ರೈತರ ಮೇಲೆ ಕಂಗನಾಗೆ ಏಕೆ ಕೋಪ ಅರ್ಥವಾಗುತ್ತಿಲ್ಲ: ದಿಲ್ಜೀತ್
ಮತ್ತೆ ಕಂಗನಾ ರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ದಿಲ್ಜೀತ್, 'ರೈತರ ಮೇಲೆ ಆಕೆಗೆ ಏಕಿಷ್ಟು ಕೋಪ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಎಲ್ಲಾ ಪಂಜಾಬಿಗರು ರೈತರ ಪರ ಇದ್ದಾರೆ. ಯಾರೂ ಸಹ ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ' ಎಂದಿದ್ದಾರೆ ದಿಲ್ಜೀತ್ ದುಸ್ಸಾಂಜ್.

ಊರ್ಮಿಳಾ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ
ಕೆಲವು ದಿನಗಳ ಹಿಂದಷ್ಟೆ ಕಂಗನಾ, ಎರಡನೇ ಬಾರಿ ನಟಿ, ಶಿವಸೇನಾ ಸದಸ್ಯೆ ಊರ್ಮಿಳಾ ಮತೋಡ್ಕರ್ ವಿರುದ್ಧ ಟ್ವಿಟ್ಟರ್ನಲ್ಲಿ ಟೀಕಾ ಪ್ರಹಾರ ನಡೆಸಿದ್ದರು. ಶಿವಸೇನಾ ಪಕ್ಷಕ್ಕೆ ಸೇರಿದ ಕೂಡಲೇ 3 ಕೋಟಿ ಮೌಲ್ಯದ ಕಚೇರಿ ತೆರೆದಿದ್ದೀಯಾ. ನಾನು ಬಿಜೆಪಿ ಪರ ವಹಿಸಿ 20-30 ಕೇಸು ದಾಖಲಿಸಿಕೊಂಡಿದ್ದೇನೆ ಎಂದಿದ್ದರು.

ಸಾಫ್ಟ್ ಪಾರ್ನ್ ನಟಿ ಎಂದಿದ್ದ ಕಂಗನಾ
ಈ ಹಿಂದೆಯೂ ಊರ್ಮಿಳಾ ಮತೋಡ್ಕರ್ ಬಗ್ಗೆ ಮಾತನಾಡಿದ್ದ ಕಂಗನಾ, ಊರ್ಮಿಳಾರನ್ನು 'ಸಾಫ್ಟ್ ಪಾರ್ನ್ ನಟಿ' ಎಂದಿದ್ದರು. ಇದಕ್ಕೆ ಮುನ್ನಾ ತಾಪ್ಸಿ ಪನ್ನು, ದೀಪಿಕಾ ಪಡುಕೋಣೆ, ಕರಣ್ ಜೋಹರ್, ಮಹೇಶ್ ಭಟ್, ಅಮೀರ್ ಖಾನ್, ಹೃತಿಕ್ ರೋಷನ್ ಇನ್ನೂ ಹಲವರ ವಿರುದ್ಧ ಮಾತನಾಡಿದ್ದರು.