twitter
    For Quick Alerts
    ALLOW NOTIFICATIONS  
    For Daily Alerts

    ಸಿಡಿದ್ದೆದ್ದ ಹಿಂದೂ ಸಂಘಟನೆ: ಕರ್ನಾಟಕದಲ್ಲಿ ಬ್ಯಾನ್ ಆಗುತ್ತಾ 'ಥ್ಯಾಂಕ್​ ಗಾಡ್'..?

    |

    ಇತ್ತೀಚಿನ ದಿನಗಳಲ್ಲಿ ಕೆಲ ಚಿತ್ರಗಳು ಬಿಡುಗಡೆಗೂ ಮುನ್ನವೇ ಭಾರೀ ವಿವಾದಗಳ ಸುಳಿಯಲ್ಲಿ ಸಿಲುಕುತ್ತಿವೆ. ಅದು ಚಿತ್ರದ ಪ್ರಮುಖ ಪಾತ್ರಗಳ ವರ್ತನೆಯಿಂದಲೂ ಇರಬಹುದು ಅಥವಾ ಚಿತ್ರ ಕಥಾ ವಸ್ತುವಿನಂದಲೂ ಇರಬಹುದು. ಇದೀಗ ಇತಂಹ ವಿವಾದಿತ ಚಿತ್ರಗಳ ಸಾಲಿಗೆ ಬಾಲಿವುಡ್​ ನಟ ಅಜಯ್​ ದೇವಗನ್​ ನಟನೆಯ 'ಥ್ಯಾಂಕ್​ ಗಾಡ್' ​ ಚಿತ್ರ ಕೂಡ ಸೇರಿದೆ.

    ಅಜಯ್​ ದೇವಗನ್​ ನಟನೆಯ 'ಥ್ಯಾಂಕ್​ ಗಾಡ್​' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಚಿತ್ರದ ವಿರುದ್ಧ ದೂರು ದಾಖಲಾಗಿದೆ.

    ಧಾರ್ಮಿಕ ಭಾವನೆಗೆ ಧಕ್ಕೆ: ಸಂಕಷ್ಟದಲ್ಲಿ ಅಜಯ್ ದೇವಗನ್-ಸಿದ್ಧಾರ್ಥ್ ಸಿನಿಮಾ!ಧಾರ್ಮಿಕ ಭಾವನೆಗೆ ಧಕ್ಕೆ: ಸಂಕಷ್ಟದಲ್ಲಿ ಅಜಯ್ ದೇವಗನ್-ಸಿದ್ಧಾರ್ಥ್ ಸಿನಿಮಾ!

    ಮಲ್ಟಿ ಸ್ಟಾರ್​ ನಟನೆಯ 'ಥ್ಯಾಂಕ್​ ಗಾಡ್​' ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು, ಟ್ರೈಲರ್​ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸನ್ನಿವೇಶವಿದೆ. ಹೀಗಾಗಿ ಈ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ. ಟ್ರೈಲರ್​ನಲ್ಲಿ ಚಿತ್ರಗುಪ್ತ ಪಾತ್ರವನ್ನು ಆಧುನಿಕ ವೇಶಭೂಷಣದಲ್ಲಿ ಚಿತ್ರಿಸಲಾಗಿದ್ದು, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದ್ದು, ಈ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣಬಾರದು ಎಂದು ಆಗ್ರಹಿಸಿದ್ದಾರೆ.

    Hindu fringe group demands ban on Ajay Devgns Thank God film in Karnataka

    ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್​ ಗೌಡ ಮಾತನಾಡಿದ್ದು, ಥ್ಯಾಂಕ್​ ಗಾಡ್​ ಚಿತ್ರದ ಟ್ರೈಲರ್​ನಲ್ಲಿ ಹಿಂದೂ ದೇವರನ್ನು ಅಪಹಾಸ್ಯ ಮಾಡುತ್ತಿರುವುದು ಕಂಡುಬಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ದೇವರು ಚಿತ್ರಗುಪ್ತ ಹಾಗೂ ಯಮನನ್ನು ಅಪಹಾಸ್ಯ ಮಾಡುವುದನ್ನು ನಾವು ಸಹಿಸುವುದಿಲ್ಲ. ಈ ಟ್ರೈಲರ್​ ಬಿಡುಗಡೆಯಾಗುವರೆಗೂ ಸೆನ್ಸಾರ್​ ಮಂಡಳಿ ನಿದ್ದೆ ಮಾಡುತ್ತಿದ್ದೆಯೇ..? ಎಂದು ಪ್ರಶ್ನಿಸಿದ್ದಾರೆ.

    ಹಿಂದೂ ಧಾರ್ಮಿಕ ಪರಿಕಲ್ಪನೆ ಹಾಗೂ ದೇವತೆಗಳನ್ನು ಲೇವಡಿ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ 'ಥ್ಯಾಂಕ್​ ಗಾಡ್'​ ಚಿತ್ರವನ್ನು ರಾಜ್ಯ ಮತ್ತು ಕೇಂದ್ರ ಗೃಹ ಸಚಿವಾಲಯಗಳು ನಿಷೇಧಿಸಬೇಕು. ಇಲ್ಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇನ್ನು ಥ್ಯಾಂಕ್​ ಗಾಡ್​ ಚಿತ್ರದ ಟ್ರೈಲರ್​ ವೈರಲ್​ ಆಗುತ್ತಿದ್ದಂತೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಚಿತ್ರದ ನಟ ಅಜಯ್​ ದೇವಗನ್​, ಸಿದ್ದಾರ್ಥ ಮಲ್ಹೋತ್ರಾ ಹಾಗೂ ನಿರ್ದೇಶಕ ಇಂದ್ರ ಕುಮಾರ್​ ವಿರುದ್ಧ ದೂರು ದಾಖಲಾಗಿದೆ.

    English summary
    Hindu fringe group demands Ajay Devgn's Thank God film ban in Karnataka for hurting religious sentiments.
    Friday, September 16, 2022, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X