Don't Miss!
- News ನೇಹಾ ಹಿರೇಮಠ್ ಹತ್ಯೆ; ಕಾಣದ ಕೈಗಳಿಂದ ಕೊಲೆ ಆರೋಪಿ ರಕ್ಷಣೆ ಎಂದ ಜೆಡಿಎಸ್
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕ್ಯಾಬರೇ' ಡ್ಯಾನ್ಸರ್ ಆದ 'ಬೌಲರ್' ಶ್ರೀಶಾಂತ್!
ಆಟಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಖ್ಯಾತಿ ಗಳಿಸಿರುವ ಭಾರತೀಯ ಕ್ರಿಕೆಟ್ ಆಟಗಾರ ಶ್ರೀಶಾಂತ್. ಸ್ಟೇಡಿಯಂ ನಲ್ಲಿ 'ರೋಷಾವೇಶ'ದಿಂದ ಮೆರೆದು ಶ್ರೀಶಾಂತ್ ಮಾಡಿಕೊಂಡ ಎಡವಟ್ಟುಗಳನ್ನ ಮರೆಯುವಹಾಗೆ ಇಲ್ಲ.
ಸಿಟ್ಟಿಗೆ ಬಲಿಯಾಗಿ ಒಮ್ಮೆ ಕೆನ್ನೆ ಊದಿಸಿಕೊಂಡಿದ್ದ 'ಶ್ರೀ' ಇದೀಗ ಅದೇ ಕೆನ್ನೆಗೆ ಬಣ್ಣ ಹಚ್ಚುವುದಕ್ಕೆ ಮುಂದಾಗಿದ್ದಾರೆ. ಅರ್ಥಾತ್ ಕ್ರಿಕೆಟ್ ಬಿಟ್ಟು ಬಾಲಿವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ.
ಮುಂಗೋಪಿ
'ಶ್ರೀಶಾಂತ್'ರನ್ನ
ಬಾಲಿವುಡ್
ಗೆ
ಕರೆತರುತ್ತಿರುವುದು
ಖ್ಯಾತ
ನಿರ್ಮಾಪಕಿ
ಪೂಜಾ
ಭಟ್.
ತಮ್ಮ
ನಿರ್ಮಾಣದ
'ಕ್ಯಾಬರೆ'
ಚಿತ್ರದ
ಪ್ರಮುಖ
ಪಾತ್ರಕ್ಕೆ
ಶ್ರೀಶಾಂತ್
ರನ್ನ
ಸೆಲೆಕ್ಟ್
ಮಾಡಿದ್ದಾರೆ
ಪೂಜಾ
ಭಟ್.
ಎಲ್ಲರಿಗೂ ಗೊತ್ತಿರುವ ಹಾಗೆ ಶ್ರೀಶಾಂತ್ ಫಾಸ್ಟ್ ಬೌಲರ್ ಮಾತ್ರ ಅಲ್ಲ, ಉತ್ತಮ ಡ್ಯಾನ್ಸರ್ ಕೂಡ ಹೌದು. ಅದು ಸ್ಟೇಡಿಯಂನಲ್ಲೇ ಹಲವಾರು ಬಾರಿ ಪ್ರೂವ್ ಮಾಡಿದ್ದ ಶ್ರೀಶಾಂತ್, ಈಗ 'ಕ್ಯಾಬರೇ' ಮೂಲಕ ತಮ್ಮ ನಾಟ್ಯ ಪ್ರತಿಭೆಯನ್ನ ತೆರೆಮೇಲೆ ತರಲಿದ್ದಾರೆ.
'ಕ್ಯಾಬರೇ'
ಅನ್ನುವ
ಹೆಸರೇ
ಸೂಚಿಸುವಂತೆ
ಓರ್ವ
ಕ್ಯಾಬರೇ
ಡ್ಯಾನ್ಸರ್
ಸುತ್ತ
ಹೆಣೆದಿರುವ
ಚಿತ್ರ
ಇದು.
ರೀಚಾ
ಚಡ್ಡಾ
ಕ್ಯಾಬರೇ
ಡ್ಯಾನ್ಸರ್
ಆಗಿ
ಕಾಣಿಸಿಕೊಂಡರೆ,
ಆಕೆಯ
ಮಾಸ್ಟರ್
ಆಗಿ
ಶ್ರೀಶಾಂತ್
ನೃತ್ಯ
ಪಾಠ
ಮಾಡಲಿದ್ದಾರಂತೆ.
ಮೂಲತಃ ಮಲಯಾಳಿಯಾಗಿರುವ ಶ್ರೀಶಾಂತ್, ಚಿತ್ರದಲ್ಲೂ 'ಮಲ್ಲು ಚೆಟ್ಟಾ'ನಾಗೇ ಮಿಂಚಲಿದ್ದಾರೆ. ಇದೇ ಕಾರಣಕ್ಕೆ 'ಶ್ರೀ' ಮದುವೆ ವೀಡಿಯೋ ನೋಡಿ, ಅವ್ರನ್ನ ಸೆಲೆಕ್ಟ್ ಮಾಡಿದರಂತೆ ಪೂಜಾ ಭಟ್.
ಕೌಸ್ತವ್ ನಾರಾಯಣ್ ನಿಯೋಗಿ 'ಕ್ಯಾಬರೇ' ಮೂಲಕ ಶ್ರೀಶಾಂತ್ ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನೇನು ಸೆಟ್ಟೇರಬೇಕಾಗಿರುವ 'ಕ್ಯಾಬರೆ' ಮೂಲಕ ಶ್ರೀಶಾಂತ್ ತೆರೆಮೇಲೆ ಕಾಣಿಸಿಕೊಳ್ಳುವುದು ಮುಂದಿನ ವರ್ಷದ ಹೊತ್ತಿಗೆ. (ಏಜೆನ್ಸೀಸ್)