Don't Miss!
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾನ್ಹವಿಯ ಸ್ನಾನದ ಕೋಣೆಗೆ ಚಿಲಕವೇ ಇಲ್ಲ! ಯಾಕೆ?
ಬಾಲಿವುಡ್ನ ಜನಪ್ರಿಯ ಯುವನಟಿ ಜಾನ್ಹವಿ ಕಪೂರ್ ಅವರು ತಮ್ಮ ಚೆನ್ನೈ ಮನೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಜಾನ್ಹವಿ ತಮ್ಮ ಚೆನ್ನೈ ಮನೆಯ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಅಲ್ಲಿನ ಚಿತ್ರಗಳನ್ನು ತೋರಿಸಿದ್ದಾರೆ. ವಿವಿಧ ಕೋಣೆಗಳು, ಮನೆಯೊಂದಿಗಿನ ತಮ್ಮ ನಂಟು ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕೆಲವು ಸಂಬಂಧಿಗಳ ಪರಿಚಯವನ್ನೂ ಮಾಡಿದ್ದಾರೆ.
ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್ನ ರಣ್ವೀರ್ ಸಿಂಗ್ ಕೆನ್ನೆಗೆ ಬಿತ್ತು ಏಟು!
ಆದರೆ ವಿಡಿಯೋದಲ್ಲಿ ಜಾನ್ಹವಿ ಹೇಳಿರುವ ವಿಷಯವೊಂದು ಆಸಕ್ತಿಕರವಾಗಿದೆ. ಚೆನ್ನೈನ ಮನೆಯಲ್ಲಿ ಜಾನ್ಹವಿ ಕಪೂರ್ ಬಳಸುವ ಸ್ನಾನದ ಕೋಣೆಯ ಬಾಗಿಲಿಗೆ ಚಿಲಕವೇ ಇಲ್ಲವಂತೆ! ಹೌದು, ಮನೆಯ ಯಾವುದಾದರೊಂದು ಕೋಣೆಗೆ ಚಿಲಕ ಅತ್ಯಂತ ಅಗತ್ಯವೆಂದರೆ ಅದುವೇ ಸ್ನಾನದ ಕೋಣೆ ಅಥವಾ ಬಾತ್ ರೂಂ. ಆದರೆ ಜಾನ್ಹವಿಯ ಸ್ನಾನದ ಕೋಣೆಗೆ ಚಿಲಕ ಇಲ್ಲವಂತೆ. ಇದೇಕೆ ಹೀಗೆ ಎಂಬುದನ್ನು ವಿಡಿಯೋದಲ್ಲಿ ಅವರೇ ವಿವರಿಸಿದ್ದಾರೆ.
ಕಾವ್ಯಶ್ರಿಗೆ ಎಲ್ಲರನ್ನೂ ಕಂಟ್ರೋಲ್ನಲ್ಲಿಡಬೇಕೆಂಬ ಆಸೆ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದರೆ ಸ್ಪೆಷಲ್ ರೂಮ್ ಸಿಗುತ್ತೆ. ಒಂದಷ್ಟು ಅಧಿಕಾರ ಸಿಗುತ್ತೆ. ಆದ್ರೆ ಕಾವ್ಯಾ ಕ್ಯಾಪ್ಟನ್ ಆದ ಮೇಲೆ ಬೇರೆಯದ್ದೇ ಅಧಿಕಾರ ತೆಗೆದುಕೊಂಡಂತೆ ಕಾಣುತ್ತಿದೆ. ಎಲ್ಲರನ್ನು ಅಲ್ಲಿ ನಿಲ್ಲಬೇಡಿ, ಇಲ್ಲಿ ನಿಲ್ಲಬೇಡಿ, ಅದು ಮಾಡಬೇಡಿ, ಇದು ಮಾಡಬೇಡಿ ಎಂದೇ ಹೇಳುತ್ತಿದ್ದಾರೆ. ಆಟವಾಡುವುದಕ್ಕೂ ಮುನ್ನ ಹೀಗೆ ಇರಿ ಎಂದು ಆರ್ಡರ್ ಮಾಡುತ್ತಿದ್ದಾರೆ.
ದೀಪಿಕಾ ಮೇಲೆ ಕಾವ್ಯಶ್ರೀ ವಾಗ್ಯುದ್ಧ
ದೀಪಿಕಾ ದಾಸ್ ತುಂಬಾನೇ ಕೇರ್ ಫುಲ್ ಆಗಿ ಎಲ್ಲರನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಆಟದಲ್ಲಿ ಪೆಟ್ಟಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜಗಳವಾಡಲು ಶುರು ಮಾಡಿದರೆ ಅದನ್ನು ಬಿಡಿಸಿ, ಬುದ್ದಿ ಹೇಳುತ್ತಾರೆ. ಆದ್ರೆ ಈಗ ಕಾವ್ಯಶ್ರೀ ದೀಪಿಕಾ ದಾಸ್ಗೆ ಬುದ್ಧಿ ಹೇಳುತ್ತಿದ್ದಾರೆ. ನೀವೂ ಅಲ್ಲಿ ಕೈ ಹಾಕಬೇಡಿ ಎಂದಿದ್ದಾರೆ. ಇದು ದೀಪಿಕಾ ದಾಸ್ಗೆ ಬೇಸರ ತರಿಸಿದೆ. ಆಗ ಸಮಾಧಾನವಾಗಿಯೇ ಹೇಳಿದ್ದಾರೆ. ನೋಡಿ ನಾನೊಬ್ಬಳೆ ಅಲ್ಲ, ಅವರು ಇಟ್ಟಿದ್ದರು. ಅವರಿಗೂ ಹೇಳಿ ಎಂದಿದ್ದಾರೆ. ಆಗ ಕಾವ್ಯಾ ನಾನು ನೋಡಿಲ್ಲ ಎಂದಾಗ ಹಾಗಾದ್ರೆ ಸುಮ್ಮನೆ ಇರಿ ನನಗೂ ಹೇಳಬೇಡಿ ಎಂದು ದೀಪಿಕಾ ಹೇಳಿದ್ದಾರೆ. ಆಗ ರೊಚ್ಚಿಗೆದ್ದ ಕಾವ್ಯ ನಾನು ಕ್ಯಾಪ್ಟನ್. ನನಗೆ ಹೇಳುವ ಅಧಿಕಾರವಿದೆ ಎಂದಿದ್ದಾರೆ.
ಮತ್ತೆ ರಾಜಣ್ಣನ ಜೊತೆ ಕಾವ್ಯಾ ಜಗಳ
ದೀಪಿಕಾ ದಾಸ್ ಜೊತೆ ಜಗಳ ಮಾಡುತ್ತಿರುವಾಗ ರೂಪೇಶ್ ರಾಜಣ್ಣ ಏನೋ ಹೇಳುತ್ತಾರೆ. ಆಗ ರೂಪೇಶ್ ಶೆಟ್ಟಿ ಇದ್ದವರು ಸುಮ್ಮನೆ ಇರಿ ರಾಜಣ್ಣ ನೀವೂ ಮಾತನಾಡಬೇಡಿ ಎಂದಿದ್ದಾರೆ. ಆಗ ಕಾವ್ಯಶ್ರೀ ರೈಸ್ ಆಗಿದ್ದಾರೆ. ಇದನ್ನು ಕೇಳಿಸಿಕೊಂಡ ರಾಜಣ್ಣ, ನಿನ್ನ ಲಾರ್ಡ್ ಎಲ್ಲಾ ಇಲ್ಲಿ ಇಟ್ಟುಕೊಳ್ಳಬೇಡ ಕಾವ್ಯಶ್ರೀ. ಬಾಯಿ ಮೇಲೆ ಹಿಡಿತ ಇರಲಿ ಎಂದಿದ್ದಾರೆ. ಆಗ ಕಾವ್ಯಾ, ನಿಮಗೂ ಹಿಡಿತ ಇರಲಿ. ನಿಮಗೆ ಒಬ್ಬರಿಗೆ ಅಲ್ಲ ಎಂದು ರೈಸ್ ಆಗಿದ್ದಾರೆ.
ಕಾವ್ಯಾಳ ವರ್ತನೆ ಮನೆ ಗಡಗಡ
ಕಾವ್ಯಶ್ರೀ ಮತ್ತು ರಾಜಣ್ಣನ ಮಾತಿಗೆ ಮಾತು ಬೆಳೆದು ಯುದ್ಧದ ತನಕ ಹೋಗಿದೆ. ನಾನು ಕ್ಯಾಪ್ಟನ್ ಎಂಬುದು ಕಾವ್ಯಶ್ರೀ ವಾದ. ಕ್ಯಾಪ್ಟನ್ ಆದರೆ ಎಲ್ಲವನ್ನು ಕಂಟ್ರೋಲ್ ಮಾಡಬಹುದಾ ಎಂಬುದು ರಾಜಣ್ಣನ ವಾದ. ಕ್ಯಾಪ್ಟನ್ ಆಗಿರೋದು ನಾನು. ನೀನು ಹೇಳಿದ ಹಾಗೆ ನಾನು ಕೇಳುವುದಕ್ಕೆ ಬಂದಿಲ್ಲ ಎಂದು ಕಾವ್ಯಶ್ರೀ ಹೇಳಿದರೆ, ರಾಜಣ್ಣ ಆಟ ಆಡು ಹೋಗು, ಕಾಮನ್ ಸೆನ್ಸ್ ಇಲ್ವಾ ನಿನಗೆ ಅಂತ ಕಿಡಿಕಾರಿದ್ದಾರೆ. ಅದಕ್ಕೆ ರೊಚ್ಚುಗೆದ್ದ ಕಾವ್ಯಶ್ರೀ ಯಾಕೆ ನಿಮಗಿಲ್ವಾ ಕಾಮನ್ ಸೆನ್ಸ್ ಅಂತ ಮೈಮೇಲೆಯೆ ಬೀಳುವಂತೆ ಹೋಗಿದ್ದಾರೆ. ಇಬ್ಬರನ್ನು ತಡೆಯುವುದಕ್ಕೆ ರೂಪೇಶ್ ಶೆಟ್ಟಿ ಹರಸಾಹಸ ಪಟ್ಟಿದ್ದಾರೆ.