Don't Miss!
- News
Breaking; ಕುತೂಹಲ ಮೂಡಿಸಿದ ಎಂ. ಆರ್. ಸೀತಾರಾಂ ಮುಂದಿನ ನಡೆ!
- Sports
SL-w vs IND-w 2ನೇ ಟಿ20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಕೌರ್ ಪಡೆ; ಪಂದ್ಯ ಯಾವಾಗ, ಎಲ್ಲಿ?
- Finance
ಡೇಟಿಂಗ್ ಆಪ್ ಪರಿಚಯ: ಯುವತಿಗೆ ರೂಪಾಯಿ 5.7 ಕೋಟಿ ನೀಡಿದ ಬ್ಯಾಂಕ್ ಮ್ಯಾನೇಜರ್ ಬಂಧನ
- Automobiles
ಹೇಗಿವೆ ಗೊತ್ತಾ ರಾಯಲ್ ಎನ್ಫೀಲ್ಡ್ ಕಸ್ಟಮೈಸ್ಡ್ ಬೈಕ್ಗಳು: ಅಭಿಮಾನಿಗಳಿಗಾಗಿ 4 ಮಾದರಿಗಳ ಪ್ರದರ್ಶನ
- Education
BECIL Recruitment 2022 : 44 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಆಪಲ್ನಿಂದ ಬ್ಯಾಕ್ ಟು ಸ್ಕೂಲ್ ಪ್ರೋಗ್ರಾಂ ಘೋಷಣೆ! ಏನೆಲ್ಲಾ ಡಿಸ್ಕೌಂಟ್?
- Lifestyle
ಪುರುಷರಲ್ಲಿ ಲೈಂಗಿಕ ಶಕ್ತಿಯ ಸಮಸ್ಯೆಗೆ ಈ ಹಣ್ಣುಗಳೇ ಪವರ್ಫುಲ್ ಮದ್ದು
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಗ್ಯಾಂಗ್ಸ್ಟರ್ ಹಿಟ್ ಲಿಸ್ಟ್ನಲ್ಲಿ ಕರಣ್ ಜೋಹರ್ ಹೆಸರು!
ಬಾಲಿವುಡ್ ಹಾಗೂ ಭೂಗತ ಜಗತ್ತಿನ ನಂಟು ಬಹಳ ಹಳೆಯದ್ದು. ಹಲವಾರು ಬಾಲಿವುಡ್ ಸಿನಿಮಾಗಳ ಮೇಲೆ ಭೂಗತ ಜಗತ್ತು ಹಣ ಹೂಡಿತ್ತು ಭೂಗತ ಜಗತ್ತು. ಹಲವು ಸ್ಟಾರ್ ನಟರಿಗೆ, ನಿರ್ಮಾಪಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಸಹ ಮಾಡಿತ್ತು.
ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲಿವುಡ್ ಮೇಲೆ ಭೂಗತ ಜಗತ್ತಿನ ದರ್ಪ ಕಡಿಮೆ ಆಗಿತ್ತು. ಆದರೆ ಇದೀಗ ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ಗೆ ಬಂದ ಜೀವ ಬೆದರಿಕೆ ಪತ್ರದ ತನಿಖೆಯಿಂದಾಗಿ ಭೂಗತ ಜಗತ್ತಿನವರು, ಬಾಲಿವುಡ್ ನಟ, ನಿರ್ಮಾಪಕರನ್ನು ಸುಲಿಗೆ ಮಾಡಲು ತಯಾರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಒಡ್ಡಲಾಗಿರುವ ಪ್ರಕರಣದ ಪ್ರಮುಖ ಆರೋಪಿ ಲಾರೆನ್ಸ್ ಬಿಷ್ಣೋಯಿಯ ಗ್ಯಾಂಗ್ನ ಪ್ರಮುಖ ಸದಸ್ಯ ಸಿದ್ಧೇಶ್ ಕಾಂಬ್ಳೆ ಅಲಿಯಾಸ್ ಮಹಾಕಾಲ್ ಪೊಲೀಸರೆದುರು ಬಾಯ್ಬಿಟ್ಟಿರುವ ಮಾಹಿತಿಯಂತೆ ಕರಣ್ ಜೋಹರ್ ಸಹ ಅವರ ಹಿಟ್ಲಿಸ್ಟ್ನಲ್ಲಿ ಇದ್ದರಂತೆ.
ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ತಂಡವು ಹಣಕ್ಕಾಗಿ ಹಲವು ಬಾಲಿವುಡ್ ನಟ-ನಿರ್ಮಾಪಕರಿಗೆ ಬೆದರಿಕೆ ಹಾಕಲು ನಿಶ್ಚಯಿಸಿತ್ತು. ಅದರಲ್ಲಿ ನಿರ್ಮಾಪಕ, ನಟ ಕರಣ್ ಜೋಹರ್ ಹೆಸರು ಸಹ ಇದೆ.
ಕರಣ್ ಜೋಹರ್ಗೆ ಬೆದರಿಕೆ ಹಾಕಿ ಆತನಿಂದ ಐದು ಕೋಟಿ ಹಣ ವಸೂಲಿ ಮಾಡುವ ಪ್ಲ್ಯಾನ್ ಹಾಕಲಾಗಿತ್ತು. ಅದು ಮಾತ್ರವೇ ಅಲ್ಲದೆ, ಮಾದಕ ವಸ್ತು ಕೇಸ್ನಲ್ಲಿದ್ದ ಮಹಿಳೆ, ಸಿಖ್ ಧರ್ಮಗ್ರಂಥಕ್ಕೆ ಅಪಮಾನ ಮಾಡಿದ ವೈದ್ಯನೊಬ್ಬ ಸಹ ಇವರ ಹಿಟ್ ಲಿಸ್ಟ್ನಲ್ಲಿ ಇದ್ದಾನಂತೆ.
ಪುಣೆಯ ಗ್ರಾಮಾಂತರ ಪೊಲೀಸರ ವಶದಲ್ಲಿದ್ದ ಸಿದ್ಧೇಶ್ ಕಾಂಬ್ಳೆಯನ್ನು ಸಲ್ಮಾನ್ ಖಾನ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಹತ್ಯೆಯಾದ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲಾನ ಹತ್ಯೆ ಮಾಡಿದ ಸಂತೋಶ್ ಜಾಧವ್ ಜೊತೆ ಸಿದ್ಧೇಶ್ ಕಾಂಬ್ಳಿಗೆ ನಿಕಟ ಸಂಪರ್ಕ ಇದೆ ಎನ್ನಲಾಗುತ್ತದೆ.
ಅಲ್ಲದೆ ಈ ಪಟ್ಟಿಯನ್ನೆಲ್ಲ ಸಿಧು ಮೂಸೆವಾಲಾನ ಹತ್ಯೆಯ ಪ್ರಮುಖ ಆರೋಪಿಗಳಾದ ಬ್ರಾರ್ ಸಹೋದರು ಮಾಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ಗೆ ಬೆದರಿಕೆ ಪತ್ರ ನೀಡಲೆಂದು ವಿಕ್ರಮ್ ಬ್ರಾರ್, ಮೂವರನ್ನು ನೇಮಿಸಿದ್ದ, ಅವರು ಮುಂಬೈಗೆ ಬಂದು ಕೆಲ ಕಾಲ ಪರಿಸ್ಥಿತಿ ಅವಲೋಕನ ನಡೆಸಿ ಬಳಿಕ ಬೆದರಿಕೆ ಪತ್ರ ತಲುಪುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ಗೆ ಜೂನ್ 06 ರಂದು ಬೆದರಿಕೆ ಪತ್ರ ದೊರೆತಿದೆ. ಸಲೀಂ ಖಾನ್ ತಾವು ಪ್ರತಿದಿನ ಜಾಗಿಂಗ್ ಮಾಡುವ ಬಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಎಂದಿಗೂ ಕುಳಿತುಕೊಳ್ಳುವ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಂಡಾಗ ಅಲ್ಲಿಯೇ ಒಂದು ಪತ್ರ ಸಲೀಂ ಖಾನ್ಗೆ ಸಿಕ್ಕಿದೆ. ಅದರಲ್ಲಿ, ''ಸಲೀಂ ಖಾನ್, ಸಲ್ಮಾನ್ ಖಾನ್ಗೆ ಆದಷ್ಟು ಬೇಗ ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆದಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಚಾಲ್ತಿಯಲ್ಲಿದೆ.