Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಥಕ್ ನೃತ್ಯ ಪಾರಂಗತ ಬಿರ್ಜು ಮಹಾರಾಜ್ ನಿಧನ: ಬಾಲಿವುಡ್ಡಿಗರ ಸಂತಾಪ
'ವಿಶ್ವರೂಪಂ', 'ದಿಲ್ ತೋ ಪಾಗಲ್ ಹೇ', 'ದೇವ್ದಾಸ್' ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಸಿನಿಮಾಗಳ ಐಕಾನಿಕ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದ ಕಥಕ್ ನೃತ್ಯ ಸಾಮ್ರಾಟ ಪಂಡಿತ್ ಬಿರ್ಜು ಮಹಾರಾಜ್ ಭಾನುವಾರ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದು ಈ ಖೇದಕರ ವಿಷಯವನ್ನು ಬಿರ್ಜು ಮಹಾರಾಜರ ಮೊಮ್ಮಗ ಸ್ವರಾಂಶ ಮಿಶ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್ ನಟಿಸಿದ್ದ 'ವಿಶ್ವರೂಂಪಂ' ಸಿನಿಮಾದ 'ಉನ್ನ ಕಾಣಾದೆ' ಹಾಡಿಗೆ ಮಾಡಿದ ಅದ್ಭುತ ನೃತ್ಯ ಸಂಯೋಜನೆಗೆ ಬಿರ್ಜು ಮಹಾರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ಅದು ಮಾತ್ರವೇ ಅಲ್ಲದೆ ಎರಡನೇ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ 1986ರಲ್ಲಿಯೇ ಅವರಿಗೆ ಸಂದಿದೆ.
'ದೇವ್ದಾಸ್' ಸಿನಿಮಾದ 'ಕಾಹೆ ಚೇಡೆ ಮೋಹೆ' ಹಾಡನ್ನು ಹಾಡಿರುವುದಲ್ಲದೆ ಹಾಡಿಗೆ ನೃತ್ಯ ಸಂಯೋಜನೆ ಸಹ ಮಾಡಿದ್ದಾರೆ. ಬಾಲಿವುಡ್ನ ಅತ್ಯುತ್ತಮ ಹಾಡುಗಳಲ್ಲಿ ಇದು ಸಹ ಒಂದು. ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರೊಟ್ಟಿಗೂ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ. 'ಡೇಡ್ ಇಷ್ಕಿಯಾ', 'ದಿಲ್ ತೋ ಪಾಗಲ್ ಹೇ', ಭಾಜಿರಾವ್ ಮಸ್ತಾನಿ' ಇನ್ನೂ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬಿರ್ಜು ಮಹಾರಾಜ್ ಕೆಲಸ ಮಾಡಿದ್ದಾರೆ.
ಬಿರ್ಜು ಮಹಾರಾಜ್ ನಿಧನಕ್ಕೆ ಬಾಲಿವುಡ್ನ ಹಲವು ಖ್ಯಾತ ನಾಮರು ಸಂತಾಪ ವ್ಯಕ್ತಪಡಿಸಿದ್ದಾರೆ.