Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಚಾಂದನಿ' ಶ್ರೀದೇವಿಯ ಕಟ್ಟಕಡೆಯ ಎರಡು ಫೋಟೋಗಳಿವು
ಒಂದು ಕಾಲದಲ್ಲಿ ಸಿನಿ ಪ್ರಿಯರ ಹೃದಯದ ಅರಸಿಯಾಗಿ ಮೆರೆದವರು 'ಸುರಸುಂದರಿ' ಶ್ರೀದೇವಿ. ಆಕೆಯ ಕೆಣಕುವ ಕಣ್ಣೋಟ, ಮೋಹಕ ಮೈಮಾಟಕ್ಕೆ ಮನಸೋಲದವರೇ ಇರಲಿಲ್ಲ.
ವಯಸ್ಸು ಐವತ್ತು ದಾಟಿದ್ದರೂ, 'ಸೌಂದರ್ಯದ ಸಿರಿದೇವಿ' ಆಗಿಯೇ ಕಂಗೊಳಿಸುತ್ತಿದ್ದ ನಟಿ ಶ್ರೀದೇವಿ ಇಂದು ನೆನಪು ಮಾತ್ರ. 'ಅತಿಲೋಕ ಸುಂದರಿ' ಎಂದೇ ಕರೆಯಿಸಿಕೊಳ್ಳುತ್ತಿದ್ದ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ದುಬೈ ಹೋಟೆಲ್ ನಲ್ಲಿನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಬಿದ್ದು, ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರುವುದು ಫೋರೆನ್ಸಿಕ್ ವರದಿಯಲ್ಲಿ ಸ್ಪಷ್ಟವಾಗಿದೆ.
ಮುಖದಲ್ಲಿ ಸುಕ್ಕು ಇಲ್ಲದೆ ತುಂಬಿದ ಕೆನ್ನೆಗಳಿಂದ ಸದಾ ಸುಂದರವಾಗಿ ಕಾಣಬಯಸಿದ್ದ ಶ್ರೀದೇವಿಯ ಕಟ್ಟಕಡೆಯ ಎರಡು ಫೋಟೋಗಳಿವು.
ದುಬೈನಲ್ಲಿ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಮುಗಿದ ಬಳಿಕ ಒಂದು ಫೋಟೋ ಕ್ಲಿಕ್ ಆಗಿದ್ರೆ, ಮುಂಬೈನಲ್ಲಿ ಶ್ರೀದೇವಿಯ ಅಂತಿಮ ಯಾತ್ರೆ ಆರಂಭ ಆಗುವ ಮುನ್ನ ಮತ್ತೊಂದು ಫೋಟೋ ಕ್ಲಿಕ್ ಆಗಿದೆ.
ಸೌಂದರ್ಯ ಪ್ರಜ್ಞೆ ಹೊಂದಿದ್ದ ಶ್ರೀದೇವಿ ಪಾರ್ಥೀವ ಶರೀರಕ್ಕೆ ಮೇಕಪ್ ಮಾಡಲಾಗಿದೆ. ಶ್ರೀದೇವಿಯ ಇಚ್ಛಾನುಸಾರ ಅವರ ಪಾರ್ಥೀವ ಶರೀರಕ್ಕೆ ಗೋಲ್ಡನ್ ಬಾರ್ಡರ್ ಇರುವ ಕಾಂಚೀವರಂ ನ ಕೆಂಪು ಸೀರೆಯುಡಿಸಲಾಗಿದೆ. ಮುತ್ತೈದೆಯಾಗಿ ಸಾವನ್ನಪ್ಪಿದ ಶ್ರೀದೇವಿ ಪಾರ್ಥೀವ ಶರೀರಕ್ಕೆ ಕರಿಮಣಿ ಮಾಂಗಲ್ಯ ಸರದ ಜೊತೆಗೆ ಚಿನ್ನಾಭರಣ ಕೂಡ ತೊಡಿಸಲಾಗಿದೆ.
ಶ್ರೀದೇವಿಗೆ ಬಿಳಿ ಬಣ್ಣದ ಹೂ ಅಂದ್ರೆ ತುಂಬಾ ಇಷ್ಟ. ಹೀಗಾಗಿ, ಪಾರ್ಥೀವ ಶರೀರಕ್ಕೆ ಮಲ್ಲಿಗೆ ಹೂ ಕೂಡ ಮುಡಿಸಲಾಗಿದೆ.
'ಊರು ಉಪಕಾರ ಅರಿಯದು, ಹೆಣ ಸಿಂಗಾರ ಅರಿಯದು' ಎಂಬ ಗಾದೆ ಮಾತಿದೆ. ಆದ್ರೆ, ತಮ್ಮ ಅಂತ್ಯಕ್ರಿಯೆ ಹಾಗೂ ಅಂತಿಮ ಯಾತ್ರೆ ಹೇಗೆ ಇರಬೇಕು ಅಂತ ಶ್ರೀದೇವಿ ಬಯಸಿದ್ರೋ, ಅದನ್ನ ಕಪೂರ್ ಕುಟುಂಬ ತುಂಬಾ ಕಾಳಜಿ ವಹಿಸಿ ಈಡೇರಿಸಿದೆ.
ಶ್ರೀದೇವಿಯ ಸುಂದರ ವದನವನ್ನ ಇಷ್ಟು ದಿನ ಕಣ್ತುಂಬಿಕೊಂಡವರಿಗೆ, ಕಟ್ಟಕಡೆಯ ಈ ಫೋಟೋಗಳು ಕಣ್ಣಲ್ಲಿ ನೀರು ತರಿಸದೇ ಇರದು.
'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು
ಶ್ರೀದೇವಿ ಅನಾರೋಗ್ಯದ ಗುಟ್ಟು ರಟ್ಟು ಮಾಡಿದ ಆತ್ಮೀಯ ಗೆಳತಿ
ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?