Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರ ಎನಿಸುತ್ತಿದೆ: ಕಂಗನಾ ವಿವಾದ
ಸಿನಿಮಾಗಳ ಬದಲಾಗಿ ವಿವಾದಗಳಿಂದಷ್ಟೆ ಸುದ್ದಿಯಾಗಿರುತ್ತಿರುವ ನಟಿ ಕಂಗನಾ ರನೌತ್, ಈಗ ಮತ್ತೊಂದು ಗುರುತರ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಭಾರತದ ಹೃದಯ ಎನಿಸಿಕೊಳ್ಳುವ ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದಾರೆ ಈ ನಟಿ.
Recommended Video
'ಮುಂಬೈ ಪೊಲೀಸರು, ಮಾಫಿಯಾ ಗೂಂಡಾಗಳಿಗಿಂತಲೂ ಭಯ ಹುಟ್ಟಿಸುತ್ತಾರೆ' ಎಂದು ಕಂಗನಾ ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಆಡಳಿತ ಪಕ್ಷ ಶಿವಸೇನಾ ಹಾಗೂ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಕಂಗನಾ ಬದುಕಿನ ಕರಾಳ ಘಟನೆಗಳು: ಅಬ್ಬಾ ಭಯಾನಕ!
ಮುಂಬೈ ಪೊಲೀಸರ ಬಗ್ಗೆ ಕಂಗನಾ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ, ಶಿವಸೇನಾ ಪಕ್ಷದ ಮುಖ್ಯಸ್ಥ, ಸಂಜಯ್ ರಾವತ್, 'ಮುಂಬೈ ಪೊಲೀಸರ ಬಗ್ಗೆ ಅಷ್ಟೋಂದು ಭಯವಿದ್ದರೆ, ಮುಂಬೈ ಗೆ ಹಿಂದಿರುಗಿ ಬರಬೇಡಿ' ಎಂದು ಕಂಗನಾ ಗೆ ಹೇಳಿದ್ದರು.
ಮುಂಬೈ ಪಾಕ್ ಆಕ್ರಮಿತ ಕಾಶ್ಮೀರವಾಗಿದೆ: ಕಂಗನಾ
ಸಂಜಯ್ ರಾವತ್ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಕಂಗನಾ, 'ಸಂಜಯ್ ರಾವತ್ ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮೊದಲಿಗೆ 'ಆಜಾದಿ ಗ್ಯಾಂಗ್'ಗಳು ಮುಂಬೈ ರಸ್ತೆಗಳಲ್ಲಿ ಅಬ್ಬರಿಸಿದವು, ಈಗ ಬಹಿರಂಗ ಬೆದರಿಕೆ ಹಾಕಲಾಗುತ್ತಿದೆ. ಮುಂಬೈ, ಪಾಕ್ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ' ಎಂದಿದ್ದಾರೆ ಕಂಗನಾ ರನೌತ್.
ಕಂಗನಾ ವಿರುದ್ಧ ಟ್ವೀಟ್ಗೆ ಪೊಲೀಸ್ ಅಧಿಕಾರಿ ಲೈಕ್?
ಕೆಲವು ದಿನಗಳ ಹಿಂದೆ ಕಂಗನಾ ಕುರಿತ ಋಣಾತ್ಮಕ ಟ್ವೀಟ್ ಒಂದಕ್ಕೆ ಮುಂಬೈ ಪೊಲೀಸ್ ನ ಉನ್ನತ ಅಧಿಕಾರಿಯೊಬ್ಬರು ಲೈಕ್ ಒತ್ತಿದ್ದು ಸುದ್ದಿಯಾಗಿತ್ತು. ಹಾಗಾಗಿ ಕಂಗನಾ ಮುಂಬೈ ಪೊಲೀಸರ ವಿರುದ್ಧ ಟ್ವೀಟ್ ವಾಗ್ದಾಳಿ ನಡೆಸುತ್ತಿದ್ದಾರೆ. ಕಂಗನಾ ವಿರುದ್ಧ ಟ್ವೀಟ್ಗೆ ಲೈಕ್ ಒತ್ತಿದ್ದನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.
ಬಾಲಿವುಡ್ ನಟರ ಮೇಲೆ ಕಂಗನಾ ನೇರ ಆರೋಪ
ಇತ್ತೀಚೆಗಷ್ಟೆ ಕಂಗನಾ, ಬಾಲಿವುಡ್ನ ಪ್ರಮುಖ ನಟರಾದ, ರಣ್ವೀರ್ ಸಿಂಗ್, ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೊಕೇನ್ ಮಾದಕ ವಸ್ತು ವ್ಯಸನಿಗಳು ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.
'ಇಬ್ಬರು Below Average....,ಅವರ ಟೈಂ ಮುಗಿತು': 'ಲವ್ಬರ್ಡ್ಸ್' ಕಾಲೆಳೆದ ಕಂಗನಾ