Don't Miss!
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಿಯಲ್ ದೋಸ್ತಾನಾ! ಮದುವೆಯಾಗ್ತಾರಂತೆ ರಣ್ವೀರ್-ಅರ್ಜುನ್
ನಿಮ್ಮ ಕಣ್ಣನ್ನ ನೀವೇ ನಂಬೋಕೆ ಆಗದಿದ್ದರೂ, ನೀವು ಓದಿದ್ದು ಅಕ್ಷರಶಃ ಸತ್ಯ. ಯಾವುದು ''ನಮ್ಮ ಭಾರತೀಯರಿಗಲ್ಲ'' ಅಂತ ಇಲ್ಲಿವರೆಗೂ ಪರಿಗಣಿಸಲಾಗುತ್ತಿತ್ತೋ, ಅದನ್ನ ಸಾಧ್ಯ ಮಾಡಿ ತೋರಿಸುವ ಇರಾದೆ ಇದೆ ಬಾಲಿವುಡ್ ನ ಈ ಯುವ ನಟರಿಗೆ!
'ಗುನ್ ಡೇ' ಸಿನಿಮಾದಲ್ಲಿ ಖಾಸಾ ಖಾಸಾ ದೋಸ್ತಾಗಿ ನಟಿಸಿದ್ದ ರಣ್ವೀರ್ ಸಿಂಗ್ ಮತ್ತು ಅರ್ಜುನ್ ಕಪೂರ್, ನಿಜಜೀವನದಲ್ಲೂ ಆತ್ಮೀಯ ಸ್ನೇಹಿತರು. ಅದು ಬಹಿರಂಗವಾಗಿ 'ಮಿತಿ' ಮೀರಿದಂತೆ ಕೆಲವರಿಗೆ ಕಂಡ ಪರಿಣಾಮ ಇಬ್ಬರನ್ನೂ 'ಬೇರೆ' ತರಹ ಪರಿಗಣಿಸಲಾಗುತ್ತಿತ್ತು.
ಅಲ್ಲಿಂದ ಶುರುವಾದ ಅಂತೆ-ಕಂತೆಗಳಿಗೆ ಬ್ರೇಕ್ ಹಾಕುವುದಕ್ಕೆ ಹೋಗಿ, ಅರ್ಜುನ್ ಕಪೂರ್ ಮೊನ್ನೆ ಇದ್ದಿಕ್ಕಿದ್ಹಂಗೆ ಹೊಸ ಬಾಂಬ್ ಸಿಡಿಸಿಬಿಟ್ಟರು. ''ಕಾನೂನು ಬದಲಾದರೆ ರಣ್ವೀರ್ ಸಿಂಗ್ ನ ಮದುವೆಯಾಗುವುದಕ್ಕೆ ಸಿದ್ಧ'', ಅಂತ ಅರ್ಜುನ್, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. [ಚಿಕ್ಕಿ ಶ್ರೀದೇವಿ ಬಗ್ಗೆ ಅರ್ಜುನ ಉವಾಚವೇನು?]
ತಮ್ಮ 'ತೇವರ್' ಚಿತ್ರದ ಪ್ರೋಮೋಷನ್ ವೇಳೆ 'ರಣ್ವೀರ್ ಸಿಂಗ್' ಬಗ್ಗೆ ತೂರಿಬಂದ ಪ್ರಶ್ನೆಗೆ ಕಿಂಚಿತ್ತೂ ಅಂಜಿಕೆ ವ್ಯಕ್ತಪಡಿಸದೆ ಅರ್ಜುನ್ ಕಪೂರ್ ''ಕಾನೂನು ಅನುಮತಿ'' ಕೋರಿದ ಪರಿ ಇದು.
ಹಾಗಂತ ಅರ್ಜುನ್, ರಣ್ವೀರ್ ನ ವರಿಸಿದರೆ ಪಾಪ, ದೀಪಿಕಾ ಕಥೆ ಏನು? ಅಂತ ಯೋಚಿಸಬೇಡಿ. ಯಾಕಂದ್ರೆ ಇದು ಅರ್ಜುನ್ ಮಾತಿನ ಚಟಾಕಿ ಅಷ್ಟೆ. ರಣ್ವೀರ್ ಸಿಂಗ್ ಕುರಿತಾದ ಪ್ರಶ್ನೆಗೆ ನಗುನಗುತ್ತಲ್ಲೇ ಉತ್ತರಿಸಿದ ಅರ್ಜುನ್, ಕೊಂಚ ಕಾಮಿಡಿ ಮಾಡುವುದರ ಜೊತೆಗೆ ತಮ್ಮ ಸ್ನೇಹದ ಆತ್ಮೀಯ ಕ್ಷಣಗಳನ್ನು ಮೆಲುಕು ಹಾಕಿದರು.
''ರಣ್ವೀರ್ ಜೊತೆಗಿನ ನನ್ನ ಸ್ನೇಹ ನಿಷ್ಕಲ್ಮಶವಾದದ್ದು. ನಮ್ಮ ಸ್ನೇಹದಲ್ಲಿ ಸುಳ್ಳು ಅನ್ನುವುದಕ್ಕೆ ಜಾಗವಿಲ್ಲ. ನಮ್ಮ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತೀವಿ. ಸಿನಿಮಾಗೆ ಕಾಲಿಡುವುದಕ್ಕೂ ಮುನ್ನವೇ ರಣ್ವೀರ್ ನನ್ನ ಗೆಳೆಯ. ಹೀಗಾಗಿ ಆತ್ಮೀಯತೆ ಹೆಚ್ಚು'', ಅಂತ ಅರ್ಜುನ್ ಕಪೂರ್ ಹೇಳಿದರು. ಅಲ್ಲಿಗೆ ಒಂದು ಬಾಂಬ್ ಶಬ್ದ ಕೇಳಿ ಗಾಬರಿಯಾಗಿದ್ದ ಪತ್ರಕರ್ತರು ನಿಟ್ಟುಸಿರು ಬಿಡುವಂತಾಯ್ತು. (ಏಜೆನ್ಸೀಸ್)