ಶ್ರೀದೇವಿ ಸಾವಿನ ಪ್ರಕರಣಕ್ಕೆ ಮರುಜೀವ: ಸುಪ್ರೀಂ ಅಂಗಳದಲ್ಲಿ ಡೆತ್ ಮಿಸ್ಟರಿ.!

By Bharath Kumar

ಫೆಬ್ರವರಿ 24, ರಂದು ದುಬೈ ಹೋಟೆಲ್ ವೊಂದರಲ್ಲಿ ಬಾಲಿವುಡ್ ನಟಿ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಸಂಬಂಧಿಕರ ಮದುವೆಗೆ ತೆರೆಳಿದ್ದ ನಟಿ ಹೋಟೆಲ್ ರೂಂನ ಬಾತ್ ಟಾಬ್ ನಲ್ಲಿ ಮುಳುಗಿ ನಿಧನರಾಗಿದ್ದರು.

ಮೇಲ್ನೋಟಕ್ಕೆ ಇದು ಅನುಮಾನಾಸ್ಪದಕ ಸಾವು ಎಂದೆನಿಸಿದರು, ದುಬೈ ಪೊಲೀಸರು 'ಇದೊಂದು ಆಕಸ್ಮಿಕ ಸಾವು, ಅತೀಯಾದ ಪಾನಮತ್ತರಾಗಿದ್ದರಿಂದ ಬಾತ್ ಟಾಬ್ ನಲ್ಲಿ ಮುಳುಗಿದ್ದಾರೆ' ಎಂದು ದುಬೈ ಪೊಲೀಸರು ಪ್ರಕರಣದ ತನಿಖೆಯನ್ನ ಪೂರ್ಣಗೊಳಿಸಿದ್ದರು.

ನಂತರ ದುಬೈ ಕಾನೂನು ರೀತಿಯಲ್ಲಿ ದಾಖಲೆಗಳನ್ನ ಸಲ್ಲಿಸಿ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತಂದು, ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಯಿತು. ಆದ್ರೆ, ಭಾರತದಲ್ಲಿ ಶ್ರೀದೇವಿ ಸಾವಿನ ಬಗ್ಗೆ ಯಾರೊಬ್ಬರು ದನಿ ಎತ್ತಲಿಲ್ಲ. ಆದ್ರೀಗ, ಬಾಲಿವುಡ್ ನಿರ್ಮಾಪಕನೊಬ್ಬ ಶ್ರೀದೇವಿ ಸಾವಿನ ತನಿಖೆ ಮತ್ತೆ ನಡೆಸಲು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಮೊರೆಹೋದ ನಿರ್ಮಾಪಕ

ಸುಪ್ರೀಂ ಮೊರೆಹೋದ ನಿರ್ಮಾಪಕ

ಬಾಲಿವುಡ್ ನಿರ್ಮಾಪಕ ಸುನೀಲ್ ಸಿಂಗ್ ಎಂಬುವವರು ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನ ಪರಿಷ್ಕರಿಸಿದ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿದೆ.

ಸುನೀಲ್ ಸಿಂಗ್ ಗೆ ಅನುಮಾನ

ಸುನೀಲ್ ಸಿಂಗ್ ಗೆ ಅನುಮಾನ

ಶ್ರೀದೇವಿ ದುಬೈನಲ್ಲಿ ಸಾವುಗೀಡಾದಾಗ ಸುನೀಲ್ ಸಿಂಗ್ ಕೂಡ ಅಲ್ಲೇ ಇದ್ದರಂತೆ. ಶ್ರೀದೇವಿ ತಂಗಿದ್ದ ಹೋಟೆಲ್ ಸಿಬ್ಬಂದಿ, ಕೆಲಸಗಾಗರ ಬಳಿ ಮಾತನಾಡಿದ್ದ ನಿರ್ಮಾಪಕನಿಗೆ ಬೇರೆ ಮಾಹಿತಿ ಸಿಕ್ಕಿತಂತೆ. ಹೀಗಾಗಿ, ಸಾವಿನ ಹಿಂದೆ ಬೇರೆಯದ್ದೇ ಕಾರಣವಿರಬಹುದು ಎಂದು ವಿಚಾರಣೆ ನಡೆಸಲು ಮನವಿ ಸಲ್ಲಿಸಿದ್ದಾರಂತೆ.

ಅರ್ಜಿ ತಿರಸ್ಕರಿಸಿದ ಕೋರ್ಟ್

ಅರ್ಜಿ ತಿರಸ್ಕರಿಸಿದ ಕೋರ್ಟ್

ಸುನೀಲ್ ಸಿಂಗ್ ಅವರ ಅರ್ಜಿಯನ್ನ ಶುಕ್ರವಾರ ವಿಚಾರಣೆ ನಡೆಸಿದ ಕೋರ್ಟ್ ಈ ಪ್ರಕರಣವನ್ನ ತಿರಸ್ಕರಿಸಿದೆ. ''ಈಗಾಗಲೇ ಎರಡು ಅರ್ಜಿಯನ್ನ ಈ ಪ್ರಕರಣದಲ್ಲಿ ತಿರಸ್ಕರಿಸಿದ್ದೇವೆ. ತನಿಖೆಗೆ ನಾವು ಮಧ್ಯೆ ಪ್ರವೇಶಿಸಬಾರದು'' ಎಂದು ಮುಖ್ಯ ನ್ಯಾಯಾಧೀಶರು ತಿಳಿಸಿದ್ದಾರಂತೆ.

ಅರ್ಜಿದಾರರ ವಾದವೇನು.?

ಅರ್ಜಿದಾರರ ವಾದವೇನು.?

ನಟಿ ಶ್ರೀದೇವಿ ಅವರ ಹೆಸರಿನಲ್ಲಿ ಸುಮಾರು 240 ಕೋಟಿ ವಿಮೆ ಮಾಡಿಸಲಾಗಿದೆ. ಶ್ರೀದೇವಿ ಸಾವಿನ ಬಳಿಕವೇ ಆ ಹಣ ಕೈಸೇರುವುದು. ಹೀಗಾಗಿ, ಇದರ ಹಿಂದೆ ಏನಾದರೂ ಕಾರಣವಿರಬಹುದಾ ಎಂದು ಆರೋಪಿಸಿದ್ದರು.

ಕುಟುಂಬದವರಿಗಿಲ್ಲದ ಯೋಚನೆ ಇವರಿಗ್ಯಾಕೆ.?

ಕುಟುಂಬದವರಿಗಿಲ್ಲದ ಯೋಚನೆ ಇವರಿಗ್ಯಾಕೆ.?

ಶ್ರೀದೇವಿ ಕುಟುಂಬದವರೇ ಆಕೆಯೆ ಸಾವಿನ ಬಗ್ಗೆ ಯಾವುದೇ ತನಿಖೆಗೆ ಮುಂದಾಗಿಲ್ಲ. ಆದ್ರೆ, ಈ ನಿರ್ಮಾಪಕನಿಗೇಕೆ ಈ ಯೋಚನೆ ಎಂದು ಪ್ರಶ್ನೆ ಕಾಡುತ್ತಿದೆ.

More from Filmibeat

English summary
A request for an investigation into actor Sridevi's death in February was rejected today by the Supreme Court, Sunil Singh had approached the Supreme Court after his petition was rejected by the Delhi High Court.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X