Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ತೊರೆದ 'ಆರ್ಟಿಕಲ್-15' ನಿರ್ದೇಶಕ ಅನುಭವ್ ಸಿನ್ಹ ಸಿನಿಮಾ ಜರ್ನಿ
ಬಾಲಿವುಡ್ ನಲ್ಲಿ ಬೇರುಬಿಟ್ಟಿರುವ ಸ್ವಜನ ಪಕ್ಷಪಾತದ ವಿರುದ್ಧ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇದರ ವಿರುದ್ಧ ಅನೇಕರ ಕಲಾವಿದರು ಧ್ವನಿ ಎತ್ತಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನ ಕರಾಳಮುಖ ಬಹಿರಂಗವಾಗಿದೆ. ಬಾಲಿವುಡ್ ಒಳರಾಜಕಿಯದ ಬಗ್ಗೆ ಕೇಳಿ ಸಿನಿಪ್ರಿಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
Recommended Video
ನಟಿ ಕಂಗನಾ ರಣವಾತ್ ಈ ವಿಚಾರವಾಗಿ ಬಾಲಿವುಡ್ ನ ಪ್ರಬಲ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ದಬಂಗ್ ಸಿನಿಮಾ ನಿರ್ದೇಶಕ ಅಭಿನವ್ ಕಶ್ಯಪ್ ಸಲ್ಮಾನ್ ಖಾನ್ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಇದೀಗ ಖ್ಯಾತ ನಿರ್ದೇಶಕ ಅನುಭವ್ ಸಿನ್ಹ ಬಾಲಿವುಡ್ ಗೆ ಗುಡ್ ಬೈ ಹೇಳಿರುವುದು ಅಚ್ಚರಿ ಮೂಡಿಸಿದೆ. ಮುಂದೆ ಓದಿ...
ಅನುಭವ್ ಸಿನ್ಹ ಸಿನಿಮಾಗಳು
ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುಭವ್ ಸಿನ್ಹ ಬಾಲಿವುಡ್ ಮೇಲೆ ಬೇಸರ ಹೊರಹಾಕಿದ್ದಾರೆ. ರಾ ಒನ್, ಮುಲ್ಕ್, ಆರ್ಟಿಕಲ್ 15 ಮತ್ತು ಥಪ್ಪಡ್ ಅಂತಹ ಅದ್ಭುತ ಸಿನಿಮಾಗಳನ್ನು ನೀಡಿದ ನಿರ್ದೇಶಕ ಬಾಲಿವುಡ್ ಬಿಡುತ್ತಿರುವುದಾಗಿ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಅಚ್ಚರಿ ಮೂಡಿಸಿದೆ. ಸಮಕಾಲಿನ ಸಮಸ್ಯೆಯನ್ನು, ಸೂಕ್ಷ್ಮ ವಿಚಾರಗಳನ್ನುಅಷ್ಟೆ ಅಚ್ಚುಕಟ್ಟಾಗಿ ತೆರೆಮೇಲೆ ತರುವಲ್ಲಿ ಅನುಭವ್ ಎತ್ತಿದ ಕೈ. ಭಿನ್ನವಾದ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ನಿರ್ದೇಶಕ ಸಿನಿಮಾರಂಗ ತೊರೆದಿರುವುದು ಅಭಿಮಾನಿಗಳಿಗೆ ಬೇಸರ ಸಂಗತಿ.
ಬಾಲಿವುಡ್ ಗೆ ರಾಜಿನಾಮೆ ನೀಡಿರುವುದಾಗಿ ಅನುಭವ್ ಪೋಸ್ಟ್
"ಎನಫ್..ಬಾಲಿವುಡ್ ಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದೀನಿ" ಎಂದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಅನುಭವ್ ಸಿನ್ಹ ಎನ್ನುವ ಟ್ವಿಟ್ಟರ್ ಹ್ಯಾಂಡಲ್ ಪಕ್ಕದಲ್ಲಿ 'ನಾಟ್ ಬಾಲಿವುಡ್' ಸೇರಿಸಿಕೊಂಡಿದ್ದಾರೆ. ಸ್ವಜನಪಕ್ಷಪಾತದ ಬಗ್ಗೆ ಬಾಲವುಡ್ ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಅನುಭವ್ ಚಿತ್ರರಂಗ ತೊರೆಯುತ್ತಿರುವುದು ಅಚ್ಚರಿ ಮೂಡಿಸಿದೆ.
ಅಭಿಮಾನಿಗಳ ಬೇಸರ
ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಅನುಭವ್ ಮಾಡಿರುವ ಪೋಸ್ಟ್ ಕೆಳಗೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರು ತಾವು ಕೂಡ ಬಾಲಿವುಡ್ ಸಿನಿಮಾ ನೋಡುವುದಿಲ್ಲ, ಬಾಲಿವುಡ್ ತೊರೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.
ಬಿಹಾರ ಮೂಲದ ನಿರ್ದೇಶಕ ಅನುಭವ್
55 ವರ್ಷದ ಅನುಭವ್ ಸಿನ್ಹ ಬಿಹಾರ ಮೂಲದವರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಅನುಭವ್, ಸಿನಿಮಾ ಮೇಲಿನ ಪ್ರೀತಿಯಿಂದ ತೊಂಬತ್ತರ ದಶಕದಲ್ಲಿಯೆ ಮುಂಬೈಗೆ ಬಂದರು. 2001ರಲ್ಲಿ ತುಮ್ ಬಿನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಬಹಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. 2016ರಲ್ಲಿ ತುಮ್ ಬಿನ್ ಸಿನಿಮಾದ ಸೀಕ್ವಲ್ ಕೂಡ ಮಾಡಿದ್ದಾರೆ. ಇತ್ತೀಗೆ ಬಂದ ಆರ್ಟಿಕಲ್ 15 ಮತ್ತು ಥಪ್ಪಡ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾಗಳು. ಆದರೀಗ ದಿಢೀರ್ ಅಂತ ರಾಜಿನಾಮೆ ಕೊಟ್ಟಿರುವುದು ಅಭಿಮಾನಿಗಳಿಗೆ ಆಘಾತವುಂಟುಮಾಡಿದೆ.