Don't Miss!
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Automobiles ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಉರ್ಫಿ ವಿರುದ್ಧ ಬಿಜೆಪಿ ದೂರು, ಸಮನ್ಸ್ ನೀಡಿದ ಮುಂಬೈ ಪೊಲೀಸರು
ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆ ಪ್ರದರ್ಶನ ಆರೋಪದ ಬೆನ್ನಲ್ಲೆ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಉರ್ಫಿ ಜಾವೇದ್ ಗೆ ಮುಂಬೈ ಪೊಲೀಸರು ಬುಲಾವ್ ನೀಡಿದ್ದಾರೆ.
ಉರ್ಫಿ ಜಾವೇದ್ ತಮ್ಮ ಚಿತ್ರ ವಿಚಿತ್ರ ಬಟ್ಟೆಗಳಿಂದ, ಅತಿ ಗ್ಲಾಮರಸ್ ಫೋಟೊಗಳಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. ತೀರಾ ಅತಿಯಾಗಿ ದೇಹ ಕಾಣುವಂತ ಬಟ್ಟೆಗಳನ್ನು ಧರಿಸುವ ಉರ್ಫಿ ವಿರುದ್ಧ ಇತ್ತೀಚೆಗೆ ಕೆಲವು ಸಂಪ್ರದಾಯವಾದಿಗಳು ಹರಿಹಾಯ್ದಿದ್ದರು.
ಆದರೆ ಇದಕ್ಕೆಲ್ಲ ಬಗ್ಗದೇ ಇದ್ದ ಉರ್ಫಿ ಜಾವೇದ್, ನನ್ನ ಸ್ತನ ಹಾಗೂ ಜನನಾಂಗ ಮುಚ್ಚಿರುವ ವರೆಗೂ ಯಾರೂ ನನ್ನನ್ನು ಜೈಲಿಗೆ ಕಳಿಸಲಾರಿರಿ ಎಂದು ಸವಾಲು ಹಾಕದಿದ್ದರು. ಅದರ ಬೆನ್ನಲ್ಲೆ ಬಿಜೆಪಿ ಮುಖಂಡೆ ವಿತ್ರಾ ವಾಗ್ ಉರ್ಫಿ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.
ಸಾರ್ವಜನಿಕ ಪ್ರದೇಶದಲ್ಲಿ ದೇಹ ಪ್ರದರ್ಶನ, ಅಸಮಂಜಸ ವರ್ತನೆ ಆರೋಪಗಳನ್ನು ಬಿಜೆಪಿ ಮುಖ್ಯಸ್ಥೆ ಉರ್ಫಿ ವಿರುದ್ಧ ಹೊರಿಸಿದ್ದರು. ಅದಕ್ಕೆ ತಕ್ಕಂತೆ ಉರ್ಫಿ ಜಾವೇದ್ ಸಹ ಬಿಜೆಪಿ ನಾಯಕಿ ವಿರುದ್ಧ ಪ್ರತಿದೂರು ನೀಡಿ, ಬೆದರಿಕೆ, ಮಾನಹಾನಿ ದೂರುಗಳನ್ನು ದಾಖಲಿಸಿದ್ದರು.
ಇದೀಗ ಚೈತ್ರಾ ನೀಡಿದ್ದ ದೂರಿನ ಆಧಾರದ ಮೇಲೆ ಉರ್ಫಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ. ಸಾರ್ವಜನಿಕವಾಗಿ ಅಂಗಾಂಗ ಕಾಣುವಂಥಹಾ ಬಟ್ಟೆಗಳನ್ನು ಧರಿಸದಂತೆ ಉರ್ಫಿ ಜಾವೇದ್ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡುವ ಸಾಧ್ಯತೆ ಇದೆ.
ಚೈತ್ರಾ ತನ್ನ ವಿರುದ್ಧ ದೂರು ನೀಡಿದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಉರ್ಫಿ, ''ರಾಜಕಾರಣಿಗಳ ಬಗ್ಗೆ ಸಾಮಾಜಿಕ ಜಾಳತಾಣದಲ್ಲಿ ಹಾಕುವುದು ಬಹಳ ಅಪಾಯಕಾರಿ ಎಂಬುದು ನನಗೆ ತಿಳಿದಿದೆ. ಆದರೆ ಈ ಜನ ನನ್ನನ್ನು ಬಿಡುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ನನ್ನನ್ನು ಪೀಡಿಸುತ್ತಿದ್ದಾರೆ. ಒಂದೋ ನಾನು ನನ್ನನ್ನೇ ಕೊಂದುಕೊಳ್ಳಬೇಕು ಅಥವಾ ಅವರೇ ನನ್ನನ್ನು ಕೊಲ್ಲುವವರೆಗೂ ಕಾಯಬೇಕು. ಮತ್ತೊಮ್ಮೆ ಹೇಳುತ್ತಿದ್ದೇನೆ, ಈ ವಿವಾದವನ್ನು ನಾನು ಪ್ರಾರಂಭಿಸಿದ್ದಲ್ಲ. ನಾನು ಎಂದಿಗೂ ಯಾರಿಗೂ ತೊಂದರೆ ಮಾಡಿದವಳಲ್ಲ. ಆದರೆ ಇವರು ನನ್ನ ಹಿಂದೆ ಬಿದ್ದಿದ್ದರೆ ಅದೂ ಯಾವುದೇ ಕಾರಣಗಳಿಲ್ಲದೆ'' ಎಂದಿದ್ದಾರೆ.