ಕಿರಣ್ ಬೇಡಿಗೆ ಯು ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ?

ಕಿರಣ್ ಬೇಡಿ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ತೋರಿರುವ ಮೃದು ದೋರಣೆಗೆ ಕಾರಣ ಏನು? ಲಾಂಗು, ಮಚ್ಚು, ರಕ್ತಪಾತ...ಕ್ರೌರ್ಯ ...ಹೀಗೆ ಯಾವುದರಲ್ಲೂ ಕಿರಣ್ ಬೇಡಿ ಕಡಿಮೆ ಇಲ್ಲ. ಈ ಚಿತ್ರಕ್ಕೆ ಎ ಸರ್ಟಿಫಿಕೇಟ್ ಅಲ್ಲದಿದ್ದರೂ ಕನಿಷ್ಠ ಯು/ಎ ಪ್ರಮಾಣ ಪತ್ರವನ್ನಾದರೂ ಕೊಡಬೇಕಿತ್ತು ಎಂಬುದು ಗಾಂಧಿನಗರದ ವಾದ.
ಸಾಮಾನ್ಯವಾಗಿ ರಕ್ತಪಾತದ ಚಿತ್ರಗಳಿಗೆ ನೂರೆಂಟು ಪ್ರಶ್ನೆಗಳನ್ನು ಕೇಳಿ ಮುಲಾಜಿಲ್ಲದೆ ಎ ಸರ್ಟಿಫಿಕೇಟ್ ಕೊಡುತ್ತಿತ್ತು . ರಕ್ತಪಾತದ ಚಿತ್ರಗಳಿಗೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ನಿರ್ಮಾಪಕರನ್ನು ದಿನಗಟ್ಟಲೆ ಅಲೆಯುವಂತೆ ಮಾಡುತ್ತಿತ್ತು. ಆದರೆ ಕಿರಣ್ ಬೇಡಿ ಬಗ್ಗೆ ಯಾಕೆ ಈ ಸಾಫ್ಟ್ ಕಾರ್ನರ್?
ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಬಗ್ಗೆ ಬೆರಳು ತೋರಿಸುವಂತಿಲ್ಲ. ಆದರೂ ಸೆನ್ಸಾರ್ ಮಂಡಳಿಯ ಈ ಮೃದು ಧೋರಣೆ ಹಲವರ ಹುಬ್ಬೇರಿಸುವಂತೆ ಮಾಡಿದೆ. ಈ ಪ್ರಶ್ನೆಗಳಿಗೆಲ್ಲಾ ಸೆನ್ಸಾರ್ ಮಂಡಳಿಯೆ ಉತ್ತರಿಸಬೇಕು? ಏನಂತೀರಾ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್
ಪ್ರೇಕ್ಷಕರ ಎದೆ ಝಲ್ಲೆನ್ನಿಸಲಿದ್ದಾರೆ ಮಾಲಾಶ್ರೀ
ಕನ್ನಡ ಚಿತ್ರರಂಗದ ದುಸ್ಥಿತಿಯ ಬಗ್ಗೆ ರಾಮು ವಿಷಾದ


Click it and Unblock the Notifications











