Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಗಧೀರ' ವಿತರಕ ವಿಜಯಕುಮಾರ್ ತಲೆದಂಡ
ಕನ್ನಡ ಚಿತ್ರ ನಿರ್ಮಾಪಕರ ಒತ್ತಡಕ್ಕೆ ಮಣಿದ ಚಲನಚಿತ್ರ ವಾಣಿಜ್ಯ ಮಂಡಲಿ ಚೇಂಬರ್ ನ ಸದಸ್ಯತ್ವದಿಂದ ಕೆ ವಿ ವಿಜಯಕುಮಾರ್ ಅವರನ್ನು ಇಂದು ವಜಾಗೊಳಿಸಿತು. ಪರಭಾಷಾ ಚಿತ್ರಗಳ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನಿರ್ಮಾಪಕರ ಸಂಘಕ್ಕೆ ಕೊಂಚ ಮಟ್ಟಿಗೆ ಜಯ ಸಿಕ್ಕಂತಾಗಿದೆ. ವಿಜಯಕುಮಾರ್ ತೆಲುಗಿನ 'ಮಗಧೀರ' ಚಿತ್ರದ ವಿತರಕರು.
ಸದಸ್ಯ ಸ್ಥಾನದಿಂದ ವಿಜಯಕುಮಾರ್ ಅವರನ್ನು ವಜಾ ಮಾಡದಿದ್ದರೆ ನಾವು ಬೀದಿಗೆ ಇಳಿದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ನಿರ್ಮಾಪಕರ ಸಂಘ ಚೇಂಬರ್ ಗೆ ಒತ್ತಾಯ ಹೇರಿತ್ತು. ಅವರ ಒತ್ತಾಯಕ್ಕೆ ಮಣಿದ ಚೇಂಬರ್ ಕಡೆಗೂ ವಿಜಯಕುಮಾರ್ ಅವರನ್ನು ವಜಾಗೊಳಿಸಿದೆ.
ಕೆಎಫ್ ಸಿಸಿ ಅಧ್ಯಕ್ಷೆ ಜಯಮಾಲಾ ಅವರು ಇಂದು ಪದಾಧಿಕಾರಿಗಳ ಸಭೆ ಕರೆದು ಮಾತನಾಡಿದ ನಂತರ ವಾಣಿಜ್ಯ ಮಂಡಳಿ ಸಭೆಯಲ್ಲಿ ಈ ಮೇರೆಗೆ ನಿರ್ಣಯ ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಲು ವಿಜಯಕುಮಾರ್ ಮಾತಿಗೆ ಸಿಗುತ್ತಿಲ್ಲ. ಪರಭಾಷಾ ಚಿತ್ರಗಳ ವಿತರಣೆಗೆ ಸಂಬಂಧಿಸಿದಂತೆ ನಿರ್ಮಾಪಕ ಸಂಘ ಏಳು ಪ್ರಮುಖ ಬೇಡಿಕೆಗಳನ್ನು ಮಂಡಳಿಗೆ ಸಲ್ಲಿಸಿತು.
''ಕೆಎಫ್ ಸಿಸಿಯ ಕಾರ್ಯದರ್ಶಿಯಾಗಿದ್ದೂ ಕೆ ವಿ ವಿಜಯ್ ಕುಮಾರ್ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕೆಎಫ್ ಸಿಸಿ ನಿಯಮಗಳ ಪ್ರಕಾರ, ಬೆಂಗಳೂರಿನಲ್ಲಿ ಪರಭಾಷಾ ಚಿತ್ರವೊಂದು ಕೇವಲ 17 ಚಿತ್ರಮಂದಿರಗಳಲ್ಲಿ ಹಾಗೂ ರಾಜ್ಯದ ಇತರೆಡೆ 4 ಚಿತ್ರಮಂದಿರಗಳಲ್ಲಿ ಮಾತ್ರಬಿಡುಗಡೆಯಾಗಬೇಕು. ಆದರೆ ವಿತರಕ ವಿಜಯ್ ಕುಮಾರ್ ಈ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ'' ಎಂದು ನಿರ್ಮಾಪಕರ ಸಂಘ ಆಗ್ರಹಿಸಿತು.
(ದಟ್ಸ್ ಕನ್ನಡ ಚಿತ್ರವಾರ್ತೆ)