ಕಿಚ್ಚ ಸುದೀಪ್‌ಗೆ ಒಂದು ತಿಂಗಳು ನಿಷೇಧ ಸಾಧ್ಯತೆ

By Rajendra

ಬೆಳಗಾವಿ ವಿಶ್ವಕನ್ನಡ ಸಮ್ಮೇಳನದ ನಿಮಿತ್ತ ಬಿಕೋ ಎನ್ನುತ್ತಿದ್ದ ಗಾಂಧಿನಗರದಲ್ಲಿ ಸೋಮವಾರದಿಂದ (ಮಾ.14) ಚಟುವಟಿಕೆಗಳು ಮತ್ತೆ ಗರಿಗೆದರಿವೆ. ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮಾರ್ಚ್ 9ರಿಂದ 13ರವರೆಗೆ ಐದು ದಿನಗಳ ಕಾಲ ರಜೆ ಘೋಷಿಸಲಾಗಿತ್ತು. ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲು ಬೆಳಗಾವಿಗೆ ಸುದೀಪ್ ಬರದೆ ಇದ್ದದ್ದು ಫಿಲಂ ಚೇಂಬರ್ ಕಣ್ಣು ಕುಕ್ಕಿದೆ.

ಈ ಹಿನ್ನೆಲೆಯಲ್ಲಿ ಸುದೀಪ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಇಡೀ ಚಿತ್ರೋದ್ಯಮವೇ ಬೆಳಗಾವಿಗೆ ಬಂದಿಳಿದಿತ್ತು. ಆದರೆ ಸುದೀಪ್ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿರುವ ಮಂಡಳಿ ಅವರು ಒಂದು ತಿಂಗಳು ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ ಎಂದು ನಿಷೇಧ ಹೇರುವ ಸಾಧ್ಯತೆಗಳಿವೆ.

ಇತ್ತೀಚೆಗೆ ತೆರೆಕಂಡ ಸುದೀಪ್ ಅಭಿನಯದ ಭಾರಿ ಬಜೆಟ್ ಚಿತ್ರ 'ಕೆಂಪೇಗೌಡ' ಪ್ರಚಾರ ಕಾರ್ಯಗಳಲ್ಲಿ ಅವರು ಬ್ಯುಸಿಯಾಗಿದ್ದದ್ದೇ ಬೆಳಗಾವಿ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮಾಡಿದ್ದು, "Just got the news that a decision has been taken that Sudeep should not act for a month for not going to Belgaum...wow" ಎಂದಿದ್ದಾರೆ.

"ವಿಶ್ವಕನ್ನಡ ಸಮ್ಮೇಳನಕ್ಕೆ ಹೋಗಬೇಕು ಎಂಬ ಮಹದಾಸೆ ನನಗೂ ಇತ್ತು. ಆದರೆ ಸಮ್ಮೇಳನಕ್ಕೆ ನನ್ನನ್ನು ಆಹ್ವಾನಿಸಿಯೇ ಇಲ್ಲ. ಹಾಗಾಗಿ ಹೋಗಲಿಲ್ಲ" ಎಂದಿದ್ದಾರೆ ಸುದೀಪ್. ಆದರೆ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮುಂದೇನು ಕ್ರಮಕೈಗೊಳ್ಳುತ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ಕಾದುನೋಡೋಣ.

More from Filmibeat

English summary
Sources says that Karnataka Film Chamber of Commerce(KFCC) is planning to ban actor, director Sudeep for a month. Because he wasn't a part of the Vishwa Kannada Sammelana held in Belgaum. He tweeted same on his twitter page, Just got the news that a decision has been taken that Sudeep should not act for a month for not going to Belgaum.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X