Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
''ನಮ್ಮ ತಂದೆ ಚಿತ್ರಾಪುರ ಮಠದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮೃತಪಟ್ಟ ನಂತರ ನಮ್ಮ ತಾಯಿ ಚಿತ್ರಾಪುರ ಮಠದಲ್ಲೇ ಉಳಿದುಕೊಂಡಿದ್ದರು. 1988ರಲ್ಲಿ ವಿಜಯದಶಮಿ ಹಬ್ಬದ ಹಿಂದಿನ ದಿನ ನಮ್ಮ ತಾಯಿ ಕೂಡಲೆ ಮನೆಗೆ ಬರಬೇಕು ಎಂದು ತಿಳಿಸಿದರು. ಹಾಗೆಯೇ ಶಂಕರ್ ನನ್ನು ಜೊತೆಯಲ್ಲಿ ಕರೆತರಲು ತಿಳಿಸಿದ್ದರು. ಇಬ್ಬರೂ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಬರಲು ಸಾಧ್ಯವಿಲ್ಲ ಎಂದು ಅಮ್ಮನಿಗೆ ತಿಳಿಸಿದೆವು. ಆದರೆ ಅಮ್ಮ ಬರಲೇ ಬೇಕು ಎಂದು ಪಟ್ಟು ಹಿಡಿದರು. ಹಾಗಾಗಿ ನಾವು ಹೊರಡಲೇ ಬೇಕಾಯಿತು'' ಎಂದು ಅನಂತ್ ತಮ್ಮ ಹಳೆಯ ನೆನಪುಗಳನ್ನು ಆಂಗ್ಲ ಪತ್ರಿಕೆಯೊಂದರ ಜತೆ ಹಂಚಿಕೊಂಡಿದ್ದಾರೆ.
''ಅವರು ನಮ್ಮನ್ನೇಕೆ ಬಲವಂತ ಮಾಡುತ್ತಿದ್ದಾರೆ. ಬಹುಶಃ ಹಬ್ಬವನ್ನು ನಮ್ಮೊಂದಿಗೆ ಆಚರಿಸಲು ಇರಬೇಕು ಎಂದುಕೊಂಡೆವು. ಆದ ಕಾರಣ ನಾನು ಮತ್ತು ಶಂಕರ್ ಹೊರಟೆವು. ಆದರೆ ನನ್ನನ್ನು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ತಿಳಿಸಿದ್ದರು. ಕಾರಣ ನಿನಗೆ ಗಂಡಾಂತರ ಇದೆ ನೀನು ಬರುವುದು ಬೇಡ; ಎಲ್ಲೂ ಹೋಗಬೇಡ ಮನೆಯಲ್ಲೇ ಇರು ಎಂದು ಅಮ್ಮ ಆಜ್ಞೆ ಮಾಡಿದ್ದರು. ಹಾಗಾಗಿ 1990ರಲ್ಲಿ ಶಂಕರ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಹೊರಟು ಅಮ್ಮನ ಜತೆಗೆ ಚಿತ್ರಾಪುರ ಮಠದಲ್ಲೇ ಉಳಿದುಕೊಂಡು ಅಲ್ಲೇ ಹಬ್ಬವನ್ನು ಆಚರಿಸಿಕೊಂಡಿದ್ದ.''
''ಹಬ್ಬ ಮುಗಿದ ಮರುದಿನ ಶಂಕರ್ ಅಮ್ಮನಿಗೆ ಹೇಳದೆ ಕೇಳದೆ ಹೊರಟು ಬಿಟ್ಟಿದ್ದ. ನಂತರ ನನಗೆ ಬಂದ ದೂರವಾಣಿ ಕರೆಯಲ್ಲಿ ಶಂಕರ್ ಗೆ ಅಪಘಾತವಾಗಿದೆ ಎಂದು ತಿಳಿಯಿತು. ನಾನು ಕೂಡಲೆ ಅಮ್ಮನಿಗೆ ಫೋನ್ ಮಾಡಿದೆ, ಅವರು ಆಘಾತಕ್ಕೊಳಗಾಗಿದ್ದರು. ''ನಿನಗಲ್ಲ ಗಂಡಾಂತರ ಇದ್ದದ್ದು ಶಂಕರ್ ಗೆ'' ಎಂದು ಅಮ್ಮ ಕಣ್ಣೀರಿಟ್ಟಿದ್ದರು. ಗಂಡಾಂತರ ಕಾದಿರುವುದು ನನಗೇ ಎಂದು ಅಮ್ಮ ತಪ್ಪಾಗಿ ತಿಳಿದ್ದರು. ನನ್ನನ್ನು ಮನೆಯಲ್ಲೇ ಇರಲು ಹೇಳಿ ಶಂಕರ್ ನನ್ನು ಹಬ್ಬಕ್ಕಾಗಿ ಕರೆಸಿಕೊಂಡಿದ್ದರು'' ಎಂದು ಅನಂತನಾಗ್ ಅಂದಿನ ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಂಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಶಂಕರ್
ನಾಗ್
ಪತ್ನಿಗೆ
ರು.21.6
ಲಕ್ಷ
ನಷ್ಟಭರ್ತಿ
ಗೀತಾ
ಚಿತ್ರದ
ಜೊತೆಜೊತೆಯಲಿ
ಹಾಡು
ಶಂಕರನಾಗ್
ಹೋಗಿ
ಇಂದಿಗೆ
ಹದಿನೇಳು
ವರ್ಷ?