Don't Miss!
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೆ ಸುಮಧುರ ಗೀತೆಗೆ 'ಗುಬ್ಬಿ' ಚಿತ್ರದಲ್ಲಿ ಅಗೌರವ
ಹಳೆ ಸುಮಧುರ ಗೀತೆಗಳನ್ನು ರೀಮಿಕ್ಸ್ ಮಾಡಿ ಅದರ ಅಂದಗೆಡಿಸುತ್ತಿರುವ ಹಾಗೂ ಮೂಲ ಸೊಗಡಿಗೆ ಧಕ್ಕೆ ತರುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೆ ಇವೆ. ಉದಾಹರಣೆಗೆ ಹೇಳಬೇಕೆಂದರೆ 'ಸೊಸೆ ತಂದ' ಸೌಭಾಗ್ಯ ಚಿತ್ರದ "ರವಿವರ್ಮನ ಕುಂಚದ ಕಲೆ ಭಲೆ ಸಾಕಾರವೋ..." ಎಂಬ ಹಾಡನ್ನು ಉಪೇಂದ್ರ ಅಭಿನಯದ 'ಬುದ್ಧಿವಂತ' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದ್ದನ್ನು ಸ್ಮರಿಸಬಹುದು. ಹಾಡು ತುಂಬ ಕೆಟ್ಟದಾಗಿ ರೀಮಿಕ್ಸ್ ಮಾಡಲಾಗಿತ್ತು ಎಂದು ಆ ಕಾಲದ ಚಿತ್ರರಸಿಕರು ಬೇಸರಿಕೊಂಡಿದ್ದರು.
ಈಗ ಅಣಜಿ ನಾಗರಾಜ್ ನಿರ್ಮಿಸಿರುವ 'ಗುಬ್ಬಿ' ಚಿತ್ರದಲ್ಲೂ ಹಳೆಯ ಸುಮಧುರ ಗೀತೆಯೊಂದನ್ನು ರಿಮಿಕ್ಸ್ ಮಾಡಿ ಅಗೌರವ ಸೂಚಿಸಲಾಗಿದೆ. ವಿಜಯ್ ನಿರ್ದೇಶಿಸಿರು ವ ಈ ಚಿತ್ರದ ಹಾಡುಗಳ ಪ್ರದರ್ಶನ ಮಲ್ಲೇಶ್ವರಂನ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯಿತು. ಹಳೆಯ ಸುಮಧುರ ಗೀತೆಗಳನ್ನು ರೀಮಿಕ್ಸ್ ಮಾಡುವುದು ಎಷ್ಟು ಸರಿ ಎಂಬ ಸ್ವಾರಸ್ವಕರ ಚರ್ಚೆಗೂ ಕಾರಣವಾಗಿದೆ.
'ಗುಬ್ಬಿ' ಚಿತ್ರದಲ್ಲಿ "ನೀರಿನಲ್ಲಿ ಅಲೆಯ ಉಂಗುರ..." ಹಾಡನ್ನು ರೀಮಿಕ್ಸ್ ಮಾಡಲಾಗಿದೆ. ಈ ಸುಮಧರ ಗೀತೆಯನ್ನು ದಿವಂಗತ ಆರ್ ಎನ್ ಜಯಗೋಪಾಲ್ ರಚಿಸಿದ್ದರು. ಈ ಹಾಡು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲಾ ಅವರ ಸುಮಧುರ ಕಂಠದಿಂದ ಹೊರಹೊಮ್ಮಿತ್ತು. 1968ರಲ್ಲಿ ತೆರೆಕಂಡ 'ಬೇಡಿ ಬಂದವಳು' ಚಿತ್ರದ ಈ ಹಾಡನ್ನು 'ಗುಬ್ಬಿ' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದೆ. ಅಸಹ್ಯ ನೃತ್ಯ ಮಾಡುತ್ತಾ ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡಿರವ ಬಗ್ಗೆ ಅಪಸ್ವರ ಕೇಳಿಬಂದಿದೆ.
ರೇಣುಕಾಂಬ ಚಿತ್ರಮಂದಿರದಲ್ಲಿ ಈ ಹಾಡು ಪ್ರಸಾರವಾಗುತ್ತಿದ್ದಂತೆ ಹಿರಿಯ ಪತ್ರಕರ್ತರಾದ ಪಿ ಜಿ ಶ್ರೀನಿವಾಸಮೂರ್ತಿ ತೀವ್ರ ಬೇಸರ ಮಾಡಿಕೊಂಡು ಅರ್ಧದಲ್ಲೆ ಎದ್ದು ಹೊರನಡೆದರು. ಹಳೆದ ಸುಮಧುರ ಗೀತೆಗಳಲ್ಲಿ ಒಂದಾದ "ನೀರಿನಲ್ಲಿ ಅಲೆಯ ಉಂಗುರ..." ಹಾಡಿಗೆ 'ಗುಬ್ಬಿ' ಚಿತ್ರದಲ್ಲಿ ಅಗೌರ ಸೂಚಿಸಲಾಗಿದೆ ಎಂಬ ಕಾರಣಕ್ಕೆ ಅವರು ಚಿತ್ರ ಪ್ರದರ್ಶನದಿಂದ ಹೊರನಡೆದರು.
ಹಳೆಯ ಸುಮಧುರ ಗೀತೆಯೊಂದರ ಗುಣಮಟ್ಟವನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ. ಆರ್ ಎನ್ ಜಯಗೋಪಾಲ್ ರಚಿಸಿದ ಸುಮಧುರ ಗೀತೆಯೊಂದನ್ನು 'ಗುಬ್ಬಿ' ಚಿತ್ರದಲ್ಲಿ ರೀಮಿಕ್ಸ್ ಮಾಡಿದ್ದು ಸರಿಯಲ್ಲ ಎಂಬುದು ಶ್ರೀನಿವಾಸಮೂರ್ತಿ ಅವರ ಬೇಸರಕ್ಕೆ ಕಾರಣವಾಗಿದೆ. ಒಂದು ಹಾಡು ಹುಟ್ಟ ಬೇಕಾದರೆ, ಅದನ್ನು ಸುಂದರವಾಗಿ ಕಟ್ಟಬೇಕಾದರೆ ಅದರ ಹಿಂದೆ ಎಷ್ಟೆಲ್ಲಾ ಶ್ರಮ, ಕಾಳಜಿ ಇರುತ್ತದೆ ಎಂಬುದನ್ನು ಇಂದಿನ ನಿರ್ದೇಶಕರು ಮರೆತಂತಿದೆ ಅಲ್ಲವೆ? ಎಂಬ ಮಾತುಗಳು ಕೇಳಿಬಂದಿವೆ. ನೀವೇನಂತೀರಾ?